ಬೀದರ: ನರೇಂದ್ರ ಮೋದಿ ಸರ್ಕಾರದ ಮೇಲೆ ಮೊದಲು ನನಗೆ ನಂಬಿಕೆ ಇರಲಿಲ್ಲ. 2014 ರ ನರೇಂದ್ರ ಮೋದಿ ಸರ್ಕಾರ ಮುಸ್ಲಿಂ ವಿರೋಧಿ ಎಂದು ಭಾವಿಸಿದ್ದೆ. ನನ್ನ ವಿಚಾರ ನನ್ನ ಭಾವನೆ ನಾನು ನರೇಂದ್ರ ಮೋದಿ ಮತ್ತು ಶಾ ವಿರುದ್ಧ ತಪ್ಪು ಕಲ್ಪನೆ ಮಾಡಿಕೊಂಡಿದ್ದೆ ಎಂದು ಖ್ಯಾತ ಬಿದರಿ ಕಲಾವಿದ ಪದ್ಮಶ್ರೀ ವಿಜೇತ ಶಾ ರಶೀದ ಹೇಳಿದರು.
ರಾಜ್ಯ ಸರ್ಕಾರ ಬಜೆಟ್ ನಲ್ಲಿ ಬಿದರಿ ಕಲೆಗೆ ಪ್ರೋತ್ಸಾಹ ನೀಡುತ್ತದೆ ಎಂದು ಮುಖ್ಯಮಂತ್ರಿ ಬೊಮ್ಮಾಯಿ ಹೇಳಿಕೆ ವಿಚಾರ ಪ್ರಸ್ತಾಪಿಸಿದ ಅವರು, ನರೇಂದ್ರ ಮೋದಿ ಸರ್ಕಾರ ನನಗೆ ಪದ್ಮಶ್ರೀ ಪ್ರಶಸ್ತಿ ನೀಡಿತು.
ಮುಸ್ಲಿಂ ಸಮುದಾಯಕ್ಕೆ ಪ್ರಾಶಸ್ತ್ಯ ನೀಡಿದ್ದಾರೆ. ರಾಜ್ಯ ಸರ್ಕಾರ ಕೂಡ ಬಿದರಿ ಕಲೆಗೆ ಪ್ರೋತ್ಸಾಹ ನೀಡಿದೆ ಎಂದು ಹೇಳಿ ರಾಜ್ಯದ ಬೊಮ್ಮಾಯಿ ಸರ್ಕಾರಕ್ಕೆ ಧನ್ಯವಾದ ಹೇಳಿದರು.
ಐವತ್ತು ವರ್ಷಗಳಿಂದ ಬಿದರಿ ಕಲೆ ಬಗ್ಗೆ ಯಾವುದೇ ಸರ್ಕಾರ ಗುರುತಿಸಲು ಸಹಾಯ ಮಾಡಿಲ್ಲ. ಬಿಜೆಪಿ ಸರ್ಕಾರ ಗುರುತಿಸಿತು ಎಂದು ಬೀದರ್ ನಲ್ಲಿ ಪದ್ಮಶ್ರೀ ಪ್ರಶಸ್ತಿ ವಿಜೇತ ಷಾ ಹೇಳಿದರು.
ವರದಿ: ನಂದಕುಮಾರ ಕರಂಜೆ, ಬೀದರ