ಆ್ಯಂಬುಲೆನ್ಸ್ ಗೆ ದಾರಿ ಬಿಟ್ಟು ನಂತರ ಮುಂದೆ ಸಾಗಿದ ಮೋದಿ

Must Read

ಅಹಮದಾಬಾದ್– ಗುಜರಾತ್ ನ ಗಾಂಧಿನಗರದಿಂದ ಅಹಮದಾಬಾದ್ ಹೋಗುವ ದಾರಿಯಲ್ಲಿ ಆ್ಯಂಬುಲೆನ್ಸ್ ಗಾಗಿ ದಾರಿ ಮಾಡಿಕೊಟ್ಟ ಪ್ರಧಾನಿ ನರೇಂದ್ರ ಮೋದಿಯವರ ವಾಹನಗಳು ನಂತರ ಮುಂದೆ ಸಾಗಿದ ಘಟನೆ ವರದಿಯಾಗಿದೆ.

ತಮ್ಮ ಗುಜರಾತ್ ಪ್ರವಾಸದಲ್ಲಿ ಎರಡನೇ ದಿನವಾದ ಇಂದು ಮೋದಿಯವರು ಗಾಂಧಿನಗರ ಮುಂಬೈ ವಂದೇ ಭಾರತ ಎಕ್ಸ್ ಪ್ರೆಸ್ ರೈಲಿಗೆ ಬಾವುಟ ತೋರಿಸಿದರು ಹಾಗೂ ಅಹಮದಾಬಾದ್ ಮೆಟ್ರೋ ರೈಲಿನ ಮೊದಲ ಹಂತದ ಯೋಜನೆಗೆ ಚಾಲನೆ ನೀಡಿದರು.

ಕಾರ್ಯಕ್ರಮದ ನಂತರ ಗಾಂಧಿನಗರದಿಂದ ಅಹಮದಾಬಾದ್ ಗೆ ಅವರು ಹಾಗೂ ಬೆಂಗಾವಲು ವಾಹನಗಳು ಹೊರಟಿರುವಾಗ ಆ್ಯಂಬುಲೆನ್ಸ್ ಬಂದಿದ್ದನ್ನು ಕಂಡು ರಸ್ತೆಯ ಪಕ್ಕಕ್ಕೆ ನಿಂತು ಆ್ಯಂಬುಲೆನ್ಸ್ ಗೆ ದಾರಿ ಮಾಡಿ ಕೊಟ್ಟವು. ಆ್ಯಂಬುಲೆನ್ಸ್ ಗಾಡಿ ಹೋದ ನಂತರ ಮೋದಿಯವರ ಹಾಗೂ ಬೆಂಗಾವಲು ಪಡೆಯ ವಾಹನಗಳು ರಸ್ತೆಯ ಮಧ್ಯಕ್ಕೆ ಬಂದು ತಮ್ಮ ಪ್ರವಾಸ ಮುಂದುವರೆಸಿದ್ದಾಗಿ ಗುಜರಾತ್ ಬಿಜೆಪಿ ವಿಡಿಯೋ ಒಂದನ್ನು ಬಿಡುಗಡೆ ಮಾಡಿದೆ.

Latest News

ಎಲ್ಲಾ ಜಿಲ್ಲೆಗಳ ಯುವ ಸಾಧಕರಿಗೆ ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ ರಾಜ್ಯ ಯುವ ಪ್ರಶಸ್ತಿ ಪ್ರದಾನ  

ಮೂಡಲಗಿ:-ತಾಲೂಕಿನ ಹಳ್ಳೂರ ಗ್ರಾಮದಲ್ಲಿ ರಾಜ್ಯದ ೩೧ ಜಿಲ್ಲೆಯ "ಯುವ ಸಾಧಕರಿಗೆ ಪ್ರಶಸ್ತಿ" ಪ್ರದಾನ ಸಮಾರಂಭ ಕಾರ್ಯಕ್ರಮ ದಿ. 26 ಹಾಗೂ 27 ರಂದು ಜರುಗುವುದು.ಕರ್ನಾಟಕ ರಾಜ್ಯ...

More Articles Like This

error: Content is protected !!
Join WhatsApp Group