spot_img
spot_img

ಆ್ಯಂಬುಲೆನ್ಸ್ ಗೆ ದಾರಿ ಬಿಟ್ಟು ನಂತರ ಮುಂದೆ ಸಾಗಿದ ಮೋದಿ

Must Read

spot_img
- Advertisement -

ಅಹಮದಾಬಾದ್– ಗುಜರಾತ್ ನ ಗಾಂಧಿನಗರದಿಂದ ಅಹಮದಾಬಾದ್ ಹೋಗುವ ದಾರಿಯಲ್ಲಿ ಆ್ಯಂಬುಲೆನ್ಸ್ ಗಾಗಿ ದಾರಿ ಮಾಡಿಕೊಟ್ಟ ಪ್ರಧಾನಿ ನರೇಂದ್ರ ಮೋದಿಯವರ ವಾಹನಗಳು ನಂತರ ಮುಂದೆ ಸಾಗಿದ ಘಟನೆ ವರದಿಯಾಗಿದೆ.

ತಮ್ಮ ಗುಜರಾತ್ ಪ್ರವಾಸದಲ್ಲಿ ಎರಡನೇ ದಿನವಾದ ಇಂದು ಮೋದಿಯವರು ಗಾಂಧಿನಗರ ಮುಂಬೈ ವಂದೇ ಭಾರತ ಎಕ್ಸ್ ಪ್ರೆಸ್ ರೈಲಿಗೆ ಬಾವುಟ ತೋರಿಸಿದರು ಹಾಗೂ ಅಹಮದಾಬಾದ್ ಮೆಟ್ರೋ ರೈಲಿನ ಮೊದಲ ಹಂತದ ಯೋಜನೆಗೆ ಚಾಲನೆ ನೀಡಿದರು.

ಕಾರ್ಯಕ್ರಮದ ನಂತರ ಗಾಂಧಿನಗರದಿಂದ ಅಹಮದಾಬಾದ್ ಗೆ ಅವರು ಹಾಗೂ ಬೆಂಗಾವಲು ವಾಹನಗಳು ಹೊರಟಿರುವಾಗ ಆ್ಯಂಬುಲೆನ್ಸ್ ಬಂದಿದ್ದನ್ನು ಕಂಡು ರಸ್ತೆಯ ಪಕ್ಕಕ್ಕೆ ನಿಂತು ಆ್ಯಂಬುಲೆನ್ಸ್ ಗೆ ದಾರಿ ಮಾಡಿ ಕೊಟ್ಟವು. ಆ್ಯಂಬುಲೆನ್ಸ್ ಗಾಡಿ ಹೋದ ನಂತರ ಮೋದಿಯವರ ಹಾಗೂ ಬೆಂಗಾವಲು ಪಡೆಯ ವಾಹನಗಳು ರಸ್ತೆಯ ಮಧ್ಯಕ್ಕೆ ಬಂದು ತಮ್ಮ ಪ್ರವಾಸ ಮುಂದುವರೆಸಿದ್ದಾಗಿ ಗುಜರಾತ್ ಬಿಜೆಪಿ ವಿಡಿಯೋ ಒಂದನ್ನು ಬಿಡುಗಡೆ ಮಾಡಿದೆ.

- Advertisement -
- Advertisement -

Latest News

ಬಸವಣ್ಣ ನಮಗೇಕೆ ಬೇಕು ?

ಬಸವಣ್ಣ ಜಗವು ಕಂಡ ಶ್ರೇಷ್ಠ ಸಾರ್ವಕಾಲಿಕ ಸಮಕಾಲೀನ ಸಮತೆಯ ಶಿಲ್ಪಿ ಸತ್ಯ ಶಾಂತಿ ಪ್ರೀತಿ ಅನುಪಮ ಮಾನವ ಮೌಲ್ಯಗಳನ್ನು ಮರ್ತ್ಯದಲ್ಲಿ ಬಿತ್ತರಿಸಿದ. ಪ್ರಾಯಶ ಎಲ್ಲಾ ಹಂತದಲ್ಲೂ...
- Advertisement -

More Articles Like This

- Advertisement -
close
error: Content is protected !!
Join WhatsApp Group