ಮೈಕೊರೆವ ಚಳಿಯಲ್ಲಿ ಹಸುಗೂಸು ಬಿಟ್ಟು ಹೋದ ಕಟುಕ ತಾಯಿ

Must Read

ಬಸವಣ್ಣನ ಕರ್ಮಭೂಮಿಯಲ್ಲಿ ಅಮಾನವೀಯ ಘಟನೆ

ಬೀದರ – ಕೊರೆಯುವ ಚಳಿಯಲ್ಲಿ ಕೇವಲ ಒಂದು ದಿನದ ಹಸುಗೂಸನ್ನು ಎಸೆದು ಹೋಗಿರುವ ಕಟುಕ ತಾಯಿಯಿಂದಾಗಿ ಜಗತ್ತು ನೋಡುವ ಮುಂಚೆಯೇ ಅಸುನೀಗಿರುವ ಅಮಾನವೀಯ ಘಟನೆ  ಭಾಲ್ಕಿ ತಾಲೂಕಿನ ರುದನೂರ್ ಗ್ರಾಮದಲ್ಲಿ ನಡೆದಿದೆ.

ಹತ್ತ ತಾಯಿಯೇ ಹಸುಗೂಸನ್ನು ಮಧ್ಯರಾತ್ರಿಯಲ್ಲಿ ಎಸೆದು ಹೋಗುವ ದೃಶ್ಯ ಸಿಸಿ ಕ್ಯಾಮರಾದಲ್ಲಿ ಸೆರೆಯಾಗಿದ್ದು ನೋಡುಗರ ಹೃದಯ ಕಲಕುತ್ತಿದೆ. ಬೆಳ್ಳಂಬೆಳಗ್ಗೆ ಗ್ರಾಮದ ಅಂಬೇಡ್ಕರ್ ವೃತ್ತದ ಹತ್ತಿರ ಇರುವ ಮಸೀದಿ ಕಾಂಪೌಂಡ್ ಪಕ್ಕದಲ್ಲಿ ಪ್ರತ್ಯಕ್ಷವಾಗಿದೆ ಹಸುಗೂಸು.

ನಸುಕಿನ ಜಾವ ಅಥವಾ ಮಧ್ಯರಾತ್ರಿ ಗಂಡು ಮಗುವನ್ನು ತಾಯಿ ಬಿಟ್ಟುಹೋಗಿದ್ದು ವಿಪರೀತ ಚಳಿಗೆ ಮಗು ಪ್ರಾಣ ಬಿಟ್ಟಿದೆ

ಸ್ಥಳಕ್ಕೆ ಧನ್ನೂರು ಪೊಲೀಸರು ಭೇಟಿ, ಹಸುಗೂಸು ಬಿಟ್ಟು ಹೋದವರ ಕುರಿತು ಪರಿಶೀಲನೆ ನಡೆಸಿದರು

ವರದಿ : ನಂದಕುಮಾರ ಕರಂಜೆ, ಬೀದರ

Latest News

ಕವನ : ಹೃದಯ ವೀಣೆ

ಹೃದಯ ವೀಣೆಶುರುವಾಗಿದೆ ಆಸೆಗಳ ಆಂದೋಲನ ಅತಿಯಾಗಿ ಹೇಳಲಾಗದೆ ಉಳಿದಿವೆ ಅದೆಷ್ಟೋ ಮಾತುಗಳು ಮುದುರಿ ಹೋಗಿವೆ ಎದೆಯ ಗೂಡೊಳಗೆ ಬಂದೊಮ್ಮೆ ಮೀಟು ಹೃದಯ ವೀಣೆ ಕಾಯುತಿವೆ ನಿನ್ನ ಬರುವಿಗಾಗಿ ಭಾವಲತೆಗಳು ನೀ ಬಂದು ಸಂತೈಸು ಮಿಡಿಯುವ ಮನವ ಬಂದುಬಿಡೊಮ್ಮೆ ಅಂತರಂಗದ ಹೂ ಬನಕೆ ಮಧುವರಿಸಿ ಬರುವ ದುಂಬಿಯಂತೆ ಮಿಲನವಾಗಲಿ ಮಧುರ ಪ್ರೇಮಕಾವ್ಯ ಕಾಯುತಿದೆ ಮನವು ಬಾಹುಬಂಧನದ ಬೆಸುಗೆ ತವಕದ...

More Articles Like This

error: Content is protected !!
Join WhatsApp Group