Homeಸುದ್ದಿಗಳು೧.೨೮ ಕೋಟಿ ಕಾಮಗಾರಿಯಲ್ಲಿ ಬರೀ ೨೮ ಲಕ್ಷದ ಕೆಲಸ!

೧.೨೮ ಕೋಟಿ ಕಾಮಗಾರಿಯಲ್ಲಿ ಬರೀ ೨೮ ಲಕ್ಷದ ಕೆಲಸ!

ಬೀದರ: ರಾಜ್ಯ ಸರ್ಕಾರದ ಮಹತ್ವದ ಯೋಜನೆಗಳಲ್ಲಿ ಒಂದಾದ ಗ್ರಾಮದ ಜನದ ಮನೆ ಬಾಗಿಲಿಗೆ ನೀರು ತಲುಪಿಸುವ ಜೆ ಜೆ ಎಂ ಕಾಮಗಾರಿ ಯಲ್ಲಿ ಭಾರಿ ಭ್ರಷ್ಟಾಚಾರ ನಡೆದಿದೆ ಎಂದು ಆರೋಪಿಸಿ ಗ್ರಾಮಸ್ಥರು ಪಂಚಾಯತ ಅಧಿಕಾರಿಯನ್ನು ತರಾಟೆಗೆ ತೆಗೆದುಕೊಂಡರು.

ಬೀದರ್ ಜಿಲ್ಲೆ ದಕ್ಷಿಣ ಕ್ಷೇತ್ರ ಮಂದಕನಳ್ಳಿ ಗ್ರಾಮದಲ್ಲಿ ಈ ಘಟನೆ ನಡೆದಿದ್ದು ಗ್ರಾಮದ ಜನರ ಮನೆಗೆ ಬಾಗಿಲಿಗೆ  ಕುಡಿಯುವ ನೀರು ಯೋಜನೆ ಯಲ್ಲಿ ಗೋಲಮಾಲ ನಡೆದಿದೆ. ಒಂದು ಕೋಟಿ ಇಪ್ಪತ್ತೆಂಟು ಲಕ್ಷ ರೂ. ಗಳ ಕಾಮಗಾರಿಯನ್ನು ಕೇವಲ ಇಪ್ಪತ್ತೆಂಟು ಲಕ್ಷದಲ್ಲಿ ಕಾಮಗಾರಿ ಮುಗಿಸಲಾಗಿದೆ. ಇನ್ನೂ ಒಂದು ಕೋಟಿ ಎಲ್ಲಿಗೆ ಹೋಯಿತು ಎಂದು ಗ್ರಾಮಸ್ಥರು ಪ್ರಶ್ನೆ ಮಾಡಿದ್ದಾರೆ.

ಜೆ ಜೆ ಎಂ ಕಾಮಗಾರಿ ಸಂಪೂರ್ಣ ಕಳಪೆ ಮಟ್ಟದಲ್ಲಿ ಆಗಿರುತ್ತದೆ ಎಂದು ಕೂಡ ಆಕ್ರೋಶ ವ್ಯಕ್ತವಾಗಿದ್ದು ಭ್ರಷ್ಟಾಚಾರದಲ್ಲಿ ತೊಡಗಿರುವ ಸಂಬಂಧಪಟ್ಟ ಅಧಿಕಾರಿಗಳನ್ನು ಕೂಡಲೇ ವಜಾಗೊಳಿಸಿ ಎಂದು ಗ್ರಾಮಸ್ಥರು ಆಗ್ರಹಿಸಿದ್ದಾರೆ.


ವರದಿ: ನಂದಕುಮಾರ ಕರಂಜೆ, ಬೀದರ

RELATED ARTICLES

Most Popular

error: Content is protected !!
Join WhatsApp Group