ಕವನ : ನೆನಪಾಗುತ್ತಾರೆ

Must Read

ನೆನಪಾಗುತ್ತಾರೆ

ಗೆಳೆಯರೆ
ಸತ್ಯ ಶುದ್ಧತೆಗೆ
ಇಲ್ಲ ಬೆಲೆ ಗೌರವ
ಉಪ್ಪಿನಲ್ಲಿ ಕಾಣದ
ಇರುವೆಗಳು
ಸಕ್ಕರೆಯಲ್ಲಿ ಮುಕ್ಕುತ್ತವೆ.
ಹಾಲು ಮಾರುವವನು
ಓಣಿ ಕೇರಿ ತಿರುಗಬೇಕು
ಹಾಲು ಕೊಳ್ಳುವವರು
ಕೇಳುತ್ತಾರೆ
ನೀರೆಷ್ಟು ಬೆರೆಸಿದೆಯೆಂದು
ಆಲ್ಕೊಹಾಲ್ ಮಾರುವವನ
ಅಂಗಡಿಯಲ್ಲಿ ಜನ ಜಂಗುಳಿ
ಅವರೆ ಸಾರಾಯಿಯಲ್ಲಿ
ನೀರು ಸೋಡಾ ಬೆರೆಸಿ
ಸಂಭ್ರಮಿಸುತ್ತಾರೆ
ಮನುಷ್ಯನಿಗೆ ಪಶುವೆಂದರೆ
ಎಲ್ಲಿಲ್ಲದ ಕೋಪ
ಸಿಂಹ ಹುಲಿಯೆಂದರೆ
ಹಿಗ್ಗಿ ಕುಣಿಯುತ್ತಾನೆ.
ಪಾಪ ಅವನಿಗೆ ಗೊತ್ತಿಲ್ಲ
ಅವುಗಳು ಪಶುವೆಂದು
ತಿಳಿ ನೀರಿನಲ್ಲಿ ಎಂದೂ
ಮೀನು ವಾಸಿಸುವುದಿಲ್ಲ
ಕೊಳಚೆಯಲ್ಲಿ ಅವುಗಳ ಸಂತೆ
ಸತ್ಯ ಹೇಳುವವನಿಂದು
ಒಂಟಿಯಾಗುತ್ತಿದ್ದಾನೆ
ಸುಳ್ಳಿಗೆ ಸನ್ಮಾನದ ಪಟ್ಟ
ನೆನಪಾಗುತ್ತಾರೆ
ಬುದ್ಧ ಬಸವ ಬಾಪು
ಸತ್ಯ ಹೇಳಿ
ಬಿಟ್ಟು ಹೋದರು ಜಗವ
________________________

ಡಾ.ಶಶಿಕಾಂತ ಪಟ್ಟಣ ರಾಮದುರ್ಗ ಪುಣೆ

LEAVE A REPLY

Please enter your comment!
Please enter your name here

Latest News

ಶ್ರೀ ಕೃಷ್ಣ ಸಮೂಹ ವಿದ್ಯಾಸಂಸ್ಥೆಯಲ್ಲಿ 77ನೇ ಗಣರಾಜ್ಯೋತ್ಸವ ದಿನಾಚರಣೆ ಸಂಭ್ರಮ

ಶ್ರೀ ಕೃಷ್ಣ ಸಮೂಹ ವಿದ್ಯಾಸಂಸ್ಥೆಯ ಆವರಣದಲ್ಲಿ 77ನೇ ಗಣರಾಜ್ಯೋತ್ಸವವನ್ನು ಭವ್ಯವಾಗಿ ಆಚರಿಸಲಾಯಿತು. ಕಾರ್ಯಕ್ರಮಕ್ಕೆ ಮುಖ್ಯ ಅತಿಥಿಗಳಾಗಿ ಕರ್ನಾಟಕ ಮೇಲ್ಮನವಿ ನ್ಯಾಯಪೀಠದ ಸದಸ್ಯರು ಹಾಗೂ ಗೌರವಾನ್ವಿತ ಜಿಲ್ಲಾ...

More Articles Like This

error: Content is protected !!
Join WhatsApp Group