ಕವನ : ನೆಲದ ನಾಲಿಗೆ ಮೇಲೆ

Must Read

ನೆಲದ ನಾಲಿಗೆ ಮೇಲೆ

​ಆ ಗುಡಿಸಲೊಳಗೆ
ಬರೀ ಬಿಕ್ಕಳಿಕೆಗಳೆ
ಸುಕ್ಕುಗಟ್ಟಿವೆ,
ನೆತ್ತರು ಮೆತ್ತಿದ
ಪ್ರಶ್ನೆಗಳು-
ಇನ್ನೂ ಉಸಿರಿಡಿದಿವೆ.

​ಈ ಅರಮನೆಯೊಳಗೆ ಬರೀ ಸೊಕ್ಕುಗಳೆ
ತೊಟ್ಟಿಕ್ಕುತ್ತಿವೆ;
ಹಾಲಾಹಲದ ನಂಜುಂಡು,
ಬಡಿವಾರದಲಿ ಗರ ಬಡಿದಂತೆ
ಹಾಸಿದೆ ಬೆಳಕು.

​ಆ ಗುಡಿಸಲೊಳಗೆ ಸುಖದ ಹಾದಿ ರಜೆ ಪಡೆದು,
ಬಾಳು ಸಜೆ ಹಡೆದು;
ಎಂದೋ ಶವ ಸುಟ್ಟಂತಾಗಿದೆ
ಒಲೆಯ ಬೂದಿ.

​ಈ ಅರಮನೆಯೊಳಗೆ ಮುಗ್ಧರ ರಕ್ತದಲಿ
ಮುಖ ತೊಳೆದು,
ಅಮೃತದ ಮಳೆ ಸುರಿದು
ಕಾಮನೆಯ ಫಸಲು
ನಿಡುಸುಯಿದು…

​ಆ ಗುಡಿಸಲೊಳಗೆ ಹೊಟ್ಟೆಯ ಬಟ್ಟಲು ತುಂಬ
ಹಸಿವಿನ ಚಿತೆಯ ಬಿಂಬ;
ನೇಗಿಲ ತುಟಿ ತಾಗಿದರೂ
ಈ ನೆಲದ ನಾಲಿಗೆ ಬಡವರ ಬಾಳನ್ನೇ ನಲುಗಿಸಿದೆ
••••••••••••••••••••••••
ಶರಣಪ್ಪ ತಳ್ಳಿ ಕುಪ್ಪಿಗುಡ್ಡ

LEAVE A REPLY

Please enter your comment!
Please enter your name here

Latest News

ಧಾರವಾಡ ತಾಲೂಕಾ ಸಮ್ಮೇಳನ ಸರ್ವಾಧ್ಯಕ್ಷರಿಗೆ ಗೌರವ ಆಮಂತ್ರಣ

ಧಾರವಾಡ - ಬರುವ ಫೆಬ್ರುವರಿ ತಿಂಗಳಲ್ಲಿ ಆಲೂರು ವೆಂಕಟರಾವ್ ಸಭಾ ಭವನದಲ್ಲಿ ಜರುಗಲಿರುವ ಧಾರವಾಡ ತಾಲೂಕು ೧೨ ನೇ ಕನ್ನಡ ಸಾಹಿತ್ಯ ಸಮ್ಮೇಳನದ ಸರ್ವಾಧ್ಯಕ್ಷರಾಗಿ ಆಯ್ಕೆಯಾದ...

More Articles Like This

error: Content is protected !!
Join WhatsApp Group