spot_img
spot_img

ಡಾ. ಶಶಿಕಾಂತ ಪಟ್ಟಣ ಕವನಗಳು

Must Read

spot_img
- Advertisement -

ಮಳೆ ಮತ್ತು ಅವಳು 
————————–
ಸೋನೆ ಮಳೆ ತುಂತುರು ಹನಿ
ಅವಳು ಮಧುರ ಭಾವದ ಮಣಿ
ಮುಗಿಲ ಕಾಯ್ದು ಮೋಡ ಬಿಚ್ಚಿ
ನೆಲ ತಣಿಸಿ ಹಸಿಯುಣಿಸುವ ರಭಸ
ಜಡೆಯ ಬಿಚ್ಚಿ ಮುಗುಳುನಗೆ
ಒಳಗೊಳಗೆ ಅನುಭಾವದ ಬಗೆ.
ಭೂಮಿ ಆಗಸ ಒಂದು ಮಾಡಿ
ರಾತ್ರಿಯಿಡಿ ಜಡೆಯುವ ಪರಿ.
ಬಾಳು ಬಟ್ಟೆಗೆ ಉಸಿರಿಟ್ಟ ನಾರಿ
ಸುತ್ತಲಿನ ಬೇರಿಗೆ ತೃಷೆಯ ವಾರಿ
ಗುಡುಗು ಸಿಡಿಲು ಮಿಂಚು ಅಬ್ಬರ
ಮರಗಳುರುಳಿ ಸತ್ತವು ಮೇಕೆ ಹಸು
ನಂಜು ನುಂಗಿ ಮುಖವೆತ್ತಿ
ತುತ್ತು ಹಾಕಿದಳು ಹಸುಗೂಸುಗಳಿಗೆ
ಗಾಳಿ ಚಂಡ ಮಾರುತ ಹುಯಿಲೆದ್ದವು
ಗುಡಿಸಲು ಚಪ್ಪರ ಕಿತ್ತುಕೊಂಡು
ಬಯಲಲಿ ಬಿದ್ದರೂ ಸೆರಗಲಿ ಸಲುಹಿದಳು
ಬಿಕ್ಕಿ ಅಳುವ ನೆನೆದ ಕಂದಮ್ಮಗಳು
ಸಿಂಪಿ ಬಾಯ್ಬಿಟ್ಟಿದೆ ಬಿರುಕು ಮನ
ಹೊಯ್ಯುತಿದೆ ಸ್ವಾತಿ ಮುತ್ತು
ಒಳಗೊಳಗೆ ಸುನಾಮಿ ಆತಂಕ
ಜೀವ ಸವೆದಳು ತೊರೆದು ಕುತ್ತು
ಹಳ್ಳ ಕೊಳ್ಳ ಹರಿದು ನಲಿದವು
ಸುತ್ತ ಹಸುರಿನ ಕಾಡು
ದೈವಲೀಲೆ ಮೋಹ ಮಾಯೆ
ಅವ್ವ ಮಾತೆ ಕರುಳ ತಾಯೆ
——————————-

ನನಗೆ ನಾನೆ ನೆರಳು
____________________

ದೂರ ಇರೋಣ
ಕನಸು ತೊರೆದು
ಭಾವ ಮರೆತು
ವಾಸ್ತವ ಪ್ರಜ್ಞೆಯ
ಗೂಡಿನಲ್ಲಿ

- Advertisement -

ಮುಸ್ಸಂಜೆ ಹಕ್ಕಿ
ಮಿನುಗುವ ಚುಕ್ಕಿ
ಮರದ ಪೊದರಿನ
ಧ್ವನಿ ಇಂಚರ
ಮಧುರ ಕಿವಿಯಲ್ಲಿ

ಬೆಳದಿಂಗಳು ಕಡಲದಡಿ
ಹೆಜ್ಜೆ ಹಾಕಿ ನಡೆದಿದ್ದೆ
ಪಾದಕ್ಕೆ ಅಪ್ಪಳಿಸಿದ
ಸಮುದ್ರದ ಅಲೆಗಳು
ನನ್ನ ಭ್ರಮೆಗೆ ನಕ್ಕವು

ಬೇಡ ನನಗೆ ಜನ ಜಂಗುಳಿ
ಬೇಡ ಬೇಡ ಶಬ್ದ ಸೂತಕ
ನನಗೆ ನಾನೆ ನೆರಳು
ನಡೆ ಕಾಣುವ ಬೆಳಕು
ನೆಮ್ಮದಿಯ ಬದುಕು
______________________
ಡಾ.ಶಶಿಕಾಂತ ಪಟ್ಟಣ ರಾಮದುರ್ಗ

- Advertisement -

LEAVE A REPLY

Please enter your comment!
Please enter your name here

- Advertisement -

Latest News

ದೇಶ ಕಾಯುವ ಯೋಧರಿಗೆ ಸಾರ್ವಕಾಲಿಕ ಗೌರವ ಸಲ್ಲಬೇಕು – ಸರ್ವೋತ್ತಮ ಜಾರಕಿಹೊಳಿ

ಮೂಡಲಗಿ: ಸಾವನ್ನು ಬೆನ್ನಿಗೆ ಕಟ್ಟಿ ಕೊಂಡು ದೇಶ ರಕ್ಷಣೆ ಮಾಡುವ ಯೋಧರು ಇರುವುದರಿಂದಾಗಿ ದೇಶದ ಪ್ರಜೆಗಳು ನೆಮ್ಮದಿಯಿಂದ ಜೀವನ ಸಾಗಿಸಲು ಸಾಧ್ಯವಾಗಿದೆ ಎಂದು ಯುವ ನಾಯಕ...
- Advertisement -

More Articles Like This

- Advertisement -
close
error: Content is protected !!
Join WhatsApp Group