ಮೂಡಲಗಿ:-ಮುಂಗಾರು ಮತ್ತೆ ಚುರುಕುಗೊಂಡಿರುವುದರಿಂದ ಎಡಬಿಡದೆ ಸುರಿಯುತ್ತಿರುವ ಮಳೆಯಿಂದಾಗಿ ಘಟಪ್ರಭೆ ನದಿಗೆ ಹೆಚ್ಚು ನೀರು ಹರಿದು ಬರುತ್ತಿರುವುದೆ ಹೀಗಾಗಿ ಮಹಾಲಿಂಗಪೂರ-ಅವರಾದಿ ಸಂಪರ್ಕ ಇರುವ ಸೇತುವೆ ಬುಧವಾರ ಜಲಾವೃತವಾಗಿದೆ ಈಗ ಜನರ ಸಂಚಾರ ಸ್ಥಗಿತಗೊಂಡಿದೆ.
ಸುಣಧೋಳಿ-ಮೂಡಲಗಿ ಸಂಪರ್ಕ ಸ್ಥಗಿತಗೊಂಡಿದೆ, ವಡೇರಹಟ್ಟಿ-ಉದಗಟ್ಟಿ ಸಂಪರ್ಕ ಇಲ್ಲ ಮತ್ತು ಕಮಲದಿನ್ನಿ-ಹುಣಶ್ಯಾಳ ಪಿವಾಯ್ ಸಹ ಸೇತುವೆಗಳು ಮುಳಗಡೆಯಾಗಿದ್ದರಿಂದ ಸಂಪರ್ಕ ಕಡಿತವಾಗಿದೆಯೆಂದು ಮೂಡಲಗಿ ತಹಶೀಲ್ದಾರ ಶಿವಾನಂದ ಬಬಲಿ ಮಾಹಿತಿ ನೀಡಿದ್ದಾರೆ.