Homeಸುದ್ದಿಗಳುಹೆಬ್ಬಾಳಕರ ಭೇಟಿಯಾದ ಕಸಾಪ ಅಧ್ಯಕ್ಷರು

ಹೆಬ್ಬಾಳಕರ ಭೇಟಿಯಾದ ಕಸಾಪ ಅಧ್ಯಕ್ಷರು

ಬೆಳಗಾವಿ – ಬೆಳಗಾವಿ ತಾಲೂಕು ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷರಾದ ಸುರೇಶ ಹಂಜಿ ಅವರು ಬೆಳಗಾವಿ ಗ್ರಾಮೀಣ ಕ್ಷೇತ್ರದ ಶಾಸಕಿ ಶ್ರೀಮತಿ ಲಕ್ಷ್ಮಿ ಹೆಬ್ಬಾಳ್ಕರ್ ಅವರಿಗೆ ಭೇಟಿಯಾಗಿ ಗಡಿ ತಾಲೂಕಿನ ಕನ್ನಡಪರ ಕೆಲಸಗಳಿಗೆ ಮತ್ತು ಸಾಹಿತ್ಯಕ ಚಟುವಟಿಕೆಗಳಿಗೆ ಸಹಕಾರ ನೀಡಲು ವಿನಂತಿಸಿದರು.

ಸಾಹಿತ್ಯ ಪರಿಷತ್ತಿನ ಮುಂದಿನ ಕಾರ್ಯಕ್ರಮಗಳ ರೂಪರೇಷೆಗಳ ಬಗ್ಗೆಯೂ ಹಂಜಿಯವರು ಚರ್ಚಿಸಿದರು.

ಈ ಸಂದರ್ಭದಲ್ಲಿ ಜಿಲ್ಲಾ ಕಸಾಪ ಕಾರ್ಯದರ್ಶಿ ಎಂ.ವೈ. ಮೆಣಸಿನಕಾಯಿ ಸೇರಿದಂತೆ ಸಾಹಿತಿಗಳು ಉಪಸ್ಥಿತರಿದ್ದರು

RELATED ARTICLES

Most Popular

error: Content is protected !!
Join WhatsApp Group