Homeಸುದ್ದಿಗಳುಹರ್ಷ ಹತ್ಯೆ ಖಂಡಿಸಿ ಹುಮನಾಬಾದನಲ್ಲಿ ಬಾರಿ ಪ್ರತಿಭಟನೆ

ಹರ್ಷ ಹತ್ಯೆ ಖಂಡಿಸಿ ಹುಮನಾಬಾದನಲ್ಲಿ ಬಾರಿ ಪ್ರತಿಭಟನೆ

ಬೀದರ: ಶಿವಮೊಗ್ಗದಲ್ಲಿ ಭಾವಸಾರ ಕ್ಷತ್ರೀಯ ಸಮಾಜ ನಿಷ್ಠಾವಂತ, ಬಜರಂದ ದಳ ಕಾರ್ಯಕರ್ತ ಹರ್ಷ ಕೊಲೆಯನ್ನು ಖಂಡಿಸಿ, ಹಿಂದೂಪರ ಸಂಘಟನೆಗಳಿಂದ ಹುಮನಾಬಾದನಲ್ಲಿ ಬೃಹತ್ ಪ್ರತಿಭಟನಾ ಮೆರವಣಿಗೆ ಡಾ.ಸಿದ್ದು ಪಾಟೀಲ ನೇತೃತ್ವದಲ್ಲಿ ನಡೆಯಿತು.

ಜಿಲ್ಲೆಯ ಹುಮನಾಬಾದ ಪಟ್ಟಣದಲ್ಲಿ ಹಿಂದೂಪರ ಸಂಘಟನೆಗಳ ಸಾವಿರಾರು ಕಾರ್ಯಕರ್ತರು ಬುಧವಾರ 11:30 ಬೃಹತ್ ಪ್ರತಿಭಟನಾ ಮೆರವಣಿಗೆ ಆಗಮಿಸಿ ಹರ್ಷ ಹತ್ಯೆ ಮಾಡಿದ ಆರೋಪಿಗಳಿಗ ಗಲ್ಲು ಶಿಕ್ಷೆ ಆಗಬೇಕು ಎಂದು ಆಗ್ರಹಿಸಿ ಆಕ್ರೋಶ ವ್ಯಕ್ತಪಡಿಸಿದರು.

ಹಿರೇಮಠದ ವೀರರೇಣುಕ ಗಂಗಾಧರ ಸ್ವಾಮೀಜಿ, ಹಳ್ಳಿಖೇಡ(ಕೆ) ಹಿರೇಮಠದ ಸ್ವಾಮೀಜಿ, ಭಾವಸಾರ ಕ್ಷತ್ರೀಯ ಸಮಾಜ ಜಿಲ್ಲಾ ಅಧ್ಯಕ್ಷ ಸಂಜಯ್ ದಂತಕಾಳೆ, ಡಾ.ಸಿದ್ದು ಪಾಟೀಲ, ಮಹೇಶ ಅಗಡಿ, ಲಕ್ಷ್ಮೀಕಾಂತ ಹಿಂದೊಡ್ಡಿ, ಗೋಪಾಲಕೃಷ್ಣ ಮೊಹಳೆ, ಮಹಾಂತೇಶ ಪೂಜಾರಿ, ಭದ್ರೇಶ ಜವಳಗಿ, ಜ್ಯೋತಿಬಾ ಸಾಠೆ, ಶ್ರೀಕಾಂತ ತಾಂಡೂರ, ಸಿದ್ದು ಚಕಪಳ್ಳಿ, ನವೀನ್ ಬತಲಿ ಸೇರಿದಂತೆ ಸಾವಿರಾರು ಯುವಕರು ಭಾಗವಹಿಸಿದ್ದರು.


ವರದಿ: ನಂದಕುಮಾರ ಕರಂಜೆ, ಬೀದರ

RELATED ARTICLES

Most Popular

error: Content is protected !!
Join WhatsApp Group