Homeಸುದ್ದಿಗಳುಎಲ್ಲಾ ಹುದ್ದೆ ಅಲಂಕರಿಸಿದರೂ ಶಿಕ್ಷಕ ಹುದ್ದೆಗೆ ಗೌರವ ನೀಡಿದವರು ರಾಧಾಕೃಷ್ಣನ್ - ವಿಜುಗೌಡ ಪಾಟೀಲ

ಎಲ್ಲಾ ಹುದ್ದೆ ಅಲಂಕರಿಸಿದರೂ ಶಿಕ್ಷಕ ಹುದ್ದೆಗೆ ಗೌರವ ನೀಡಿದವರು ರಾಧಾಕೃಷ್ಣನ್ – ವಿಜುಗೌಡ ಪಾಟೀಲ

ಸಿಂದಗಿ: ಜೀವನದಲ್ಲಿ ಎಷ್ಟೇ ಸಂಪತ್ತು ಗಳಿಸಿದರೂ ಅದು ಬದುಕಿರುವವರೆಗೂ ಮಾತ್ರ ಉಳಿಯುತ್ತದೆ ಆದರೆ ಕೊನೆಯವರೆಗೂ ನಮ್ಮ ಜೊತೆ ಬರುವುದು ಶಿಕ್ಷಣ ಮಾತ್ರ ಅದನ್ನು ಯಾರು ಕಸಿದುಕೊಳ್ಳಲು ಸಾಧ್ಯವಿಲ್ಲ ಅಂತೆಯೇ ದೇಶದಲ್ಲಿ ಎಲ್ಲ ಹುದ್ದೆಗಳನ್ನು ಅಲಂಕರಿಸಿದರೂ ಕೂಡಾ ಶಿಕ್ಷಕರಿಗೆ ಹೆಚ್ಚು ಗೌರವಿಸಿದವರು ಡಾ. ಸರ್ವಪಲ್ಲಿ ರಾಧಾಕೃಷ್ಣನ್‍ರು ಎಂದು ಕರ್ನಾಟಕ ಬೀಜ ಮತ್ತು ಸಾವಯವ ಪ್ರಮಾಣ ಸಂಸ್ಥೆ ಅಧ್ಯಕ್ಷ ವಿಜುಗೌಡ ಪಾಟೀಲ ಹೇಳಿದರು.

ಪಟ್ಟಣದ ಡಾ. ಬಿ.ಆರ್.ಅಂಬೇಡ್ಕರ ಭವನದಲ್ಲಿ ಜಿಪಂ, ಸಾರ್ವಜನಿಕ ಶಿಕ್ಷಣ ಇಲಾಖೆ ವಿಜಯಪುರ ಹಾಗೂ ಕ್ಷೇತ್ರ ಶಿಕ್ಷಣಾಧಿಕಾರಿಗಳ ಮತ್ತು ಕ್ಷೇತ್ರ ಸಮನ್ವಯಾಧಿಕಾರಿ ಕಾರ್ಯಾಲಯ ಹಾಗೂ ಶಿಕ್ಷಕರ ದಿನೋತ್ಸವ ಸಮಿತಿ ಸಹಯೋಗದಲ್ಲಿ ಹಮ್ಮಿಕೊಂಡ ಶಿಕ್ಷಕರ ದಿನೋತ್ಸವ ಸಮಾರಂಭವನ್ನು ಉದ್ಘಾಟಿಸಿ ಮಾತನಾಡಿ, ಕಳೆದ 2 ವರ್ಷದಿಂದ ಕರೋನಾ-19 ಆವರಿಸಿ ಈ ಸೋಂಕಿಗೆ ಸುಮಾರು 15 ಶಿಕ್ಷಕರ ಬಲಿ ತೆಗೆದುಕೊಂಡಿದ್ದಲ್ಲದೆ ಕಾರ್ಯಕರ್ತರನ್ನು ಕಳೆದುಕೊಂಡಂತಾಗಿದೆ ಆ ಕುಟುಂಬದ ಜೊತೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರ ನೇತೃತ್ವದಲ್ಲಿ ಸರಕಾರ ನಿಮ್ಮ ಜೊತೆಯಿದೆ ಎಲ್ಲ ಸೌಲಭ್ಯಗಳನ್ನು ಒದಗಿಸಿಕೊಡುತ್ತದೆ ಮತ್ತು ಈ ಕರೋನಾ ಸೋಂಕಿನಿಂದ ಇಡೀ ಶಿಕ್ಷಣ ಕ್ಷೇತ್ರವೇ ಕುಸಿದಿದೆ ಅದನ್ನು ಸುಧಾರಿಸುವ ನಿಟ್ಟಿನಲ್ಲಿ ಶಿಕ್ಷಣ ಸಚಿವರು ಚರ್ಚೆ ನಡೆಸಿ ಶಾಲಾ ಪ್ರಾರಂಭೋತ್ಸವಕ್ಕೆ ಸೂಚಿಸಿದ್ದಾರೆ. ಪ್ರತಿಯೊಬ್ಬ ವಿದ್ಯಾರ್ಥಿಯ ಭವಿಷ್ಯ ಶಿಕ್ಷಕರ ಕೈಯಲ್ಲಿದೆ. ಶಿಕ್ಷಕರು ಮಕ್ಕಳನ್ನು ಸಮಾಜದ ನಿರ್ಮಾತೃಗಳನ್ನಾಗಿ ಮಾಡಿ ತಮ್ಮ ಕರ್ತವ್ಯವನ್ನು ಭಕ್ತಿ, ಶ್ರದ್ದೆ ಹಾಗೂ ಶಿಸ್ತಿನಿಂದ ಕಾರ್ಯನಿರ್ವಹಿಸಬೇಕು. ಉತ್ತಮವಾದ ಮಾರ್ಗದರ್ಶನ ನೀಡಿ ಸನ್ಮಾರ್ಗದಲ್ಲಿ ನಡೆಸಿ ಅವರ ಏಳಿಗೆಗೆ ಕಾರಣಿಭೂತರಾಗಬೇಕು ಎಂದರು.

ಕ್ಷಮೆ ಯಾಚನೆ; ಸರಕಾರದ ಪ್ರೋಟೋಕಾಲ್ ಪ್ರಕಾರ ಅಧಿಕಾರಿಗಳು ಸರಕಾರದ ಪ್ರತಿನಿಧಿಗಳನ್ನು ಆಮಂತ್ರಣ ಪತ್ರಿಕೆಯಲ್ಲಿ ಹಾಕಿದ್ದಾರೆ ಆದರೆ ಮಹಿಳಾ ಪ್ರತಿನಿಧಿಗಳನ್ನು ಅವಮಾನಿಸಬೇಕು ಎನ್ನುವ ಉದ್ದೇಶವಿಲ್ಲ ತಾವು ಶಿಕ್ಷಕರನ್ನು ಗೌರವಿಸುತ್ತೇವೆ ಅಧಿಕಾರಿಗಳ ಪರವಾಗಿ ವಿಜುಗೌಡ ಪಾಟೀಲ ಅವರು ಕ್ಷಮೆ ಯಾಚಿಸಿದರು.

ಅಧಿಕಾರಿಗಳಿಗೆ ತರಾಟೆ; ಬರೀ ಸಭೆ-ಸಮಾರಂಭಗಳಲ್ಲಿ ಮಹಿಳೆಯರನ್ನು ಉನ್ನತ ಸ್ಥಾನದಲ್ಲಿ ಇಟ್ಟಿದ್ದೇವೆ, ಹಾಗೇ ಹೀಗೆ ಗೌರವಿಸುತ್ತೇವೆ ಎಂದು ಬುರುಡೆ ಬಿಡುತ್ತೀರಿ ಆದರೆ ಶಿಕ್ಷಕ ದಿನೋತ್ಸವದ ಆಮಂತ್ರಣ ಪತ್ರಿಕೆಯಲ್ಲಿ ಮಹಿಳಾ ಪ್ರತಿನಿಧಿಗಳನ್ನು ಗುರುತಿಸದೇ ಕಿಂಚಿತ್ತು ಗೌರವಿಸುತ್ತಿಲ್ಲ. ಬರೀ ನಾಟಕೀಯವಾಗಿ ನಡೆದುಕೊಳ್ಳುತ್ತಿರುವುದು ಸರಿಯಲ್ಲ ಎಂದು ಶಿಕ್ಷಕರ ಮಹಿಳಾ ಪ್ರತಿನಿಧಿ ಎಸ್.ಬಿ.ಚಿಗರಿ ಅಧಿಕಾರಿಗಳನ್ನು ತರಾಟೆಗೆ ತೆಗೆದುಕೊಂಡ ಘಟನೆ ನಡೆಯಿತು.

ಅಧ್ಯಕ್ಷತೆ ವಹಿಸಿದ್ದ ತಹಶೀಲ್ದಾರರು ಹಾಗೂ ಶಿಕ್ಷಕ ದಿನೋತ್ಸವ ಸಮಿತಿ ಉಪಾಧ್ಯಕ್ಷ ನಿಂಗಣ್ಣ ಬಿರಾದಾರ ಮಾತನಾಡಿ, ಮನುಷ್ಯ ಬದುಕಿನವರೆಗೆ ಶಿಕ್ಷಣವನ್ನು ಒಂದಲ್ಲ ಒಂದು ರೀತಿಯಲ್ಲಿ ಶಿಕ್ಷಣ ಪಡೆಯುತ್ತಾನೆ. ಗುರುವಿನ ಗುಲಾಮನಾಗುವತನಕ ದೊರೆಯದಣ್ಣ ಮುಕುತಿ ಎನ್ನುವಂತೆ ಗುರುಗಳು ಸಮಾಜದಲ್ಲಿ ತಿದ್ದಿ ತೀಡಿ ಒಳ್ಳೆಯ ನಾಗರಿಕರನ್ನಾಗಿ ತಯಾರು ಮಾಡುವವರೆಗೆ ಶಿಕ್ಷಕರನ್ನು ನಮಸ್ಕರಿಸಬೇಕು. ಶಿಕ್ಷಕರು ಸಮಾಜದ ಬೆನ್ನೆಲುಬು ಅಲ್ಲದೆ ರಾಷ್ಟ್ರ ನಿರ್ಮಾಣದ ಶಿಲ್ಪಿಗಳು, ಶಿಕ್ಷಕರು ಮಕ್ಕಳಲ್ಲಿರುವ ಜಾತಿ ಮತ್ತು ಧರ್ಮಗಳನ್ನು ಬೀಗತನ, ನೆಂಟಸ್ಥನಕ್ಕೆ ಮಾತ್ರ ಬಳಸಿಕೊಂಡು ಸಮನ್ವಯತೆಯಿಂದ ಕಲಿಸುವಂತಾಗಬೇಕು ಎಂದು ಹೇಳಿದರು.

ಈ ಸಂದರ್ಭದಲ್ಲಿ ನಿವೃತ್ತ ಶಿಕ್ಷಕರಿಗೆ ಹಾಗೂ ಕರೋನಾ ಸೋಂಕಿಗೆ ಬಲಿಯಾಗಿ ನಿಧನರಾದ ಶಿಕ್ಷಕರ ಕುಟುಂಬಕ್ಕೆ ಗೌರವಿಸಲಾಯಿತು.

ಎಪಿಎಂಸಿ ಅಧ್ಯಕ್ಷ ಸಿದ್ದಣ್ಣ ಹಿರೇಕುರಬರ, ಅಕ್ಷರ ದಾಸೋಹ ಸಹಾಯಕ ನಿರ್ದೆಶಕ ಎಸ್ ಎಸ್ ಕತ್ನಳ್ಳಿ, ಸರಕಾರಿ ನೌಕರರ ಸಂಘದ ಅಧ್ಯಕ್ಷ ಅಶೋಕ ತೆಲ್ಲೂರ, ಶಿಕ್ಷಕರ ರಾಜ್ಯ ಸಂಘದ ಪ್ರತಿನಿಧಿ ಎಂ.ಜಿ.ಯಂಕಂಚಿ, ಶಿಕ್ಷಕರ ಸಂಘದ ಅಧ್ಯಕ್ಷ ಆನಂದ ಭೂಸನೂರ, ದೇವರಹಿಪ್ಪರಗಿ ಶಿಕ್ಷಕರ ಸಂಘದ ತಾಲೂಕಾಧ್ಯಕ್ಷ ಎ.ಎಚ್.ವಾಲೀಕಾರ, ಆಲಮೇಲ ತಾಲೂಕು ಅಧ್ಯಕ್ಷ ರಾಮಚಂದ್ರ ಬಿರಾದಾರ, ಮಾಧ್ಯಮ ಶಿಕ್ಷಕರ ಸಂಘದ ಅಧ್ಯಕ್ಷ ಆರ್.ಎಚ್.ಬಿರಾದಾರ ವೇದಿಕೆ ಮೇಲಿದ್ದರು. ಎಸ್.ಎಂ.ಚಿಗರಿ, ಕ್ಷೇತ್ರ ಶಿಕ್ಷಣಾಧಿಕಾರಿ ಆರ್.ಎಸ್. ನೀರಲಗಿ ಸ್ವಾಗತಿಸಿದರು. ಕ್ಷೇತ್ರ ಸಮನ್ವಯಾಧಿಕಾರಿ ಸಂತೋಷಕುಮಾರ ಬೀಳಗಿ ಪ್ರಾಸ್ತಾವಿಕವಾಗಿ ಮಾತನಾಡಿದರು. ಶಿಕ್ಷಕ ಬಿರಾದಾರ ನಿರೂಪಿಸಿದರು. ನೋಡಲ್ ಅಧಿಕಾರಿ ಆನಂದ ಮಾಡಗಿ ವಂದಿಸಿದರು.

RELATED ARTICLES

Most Popular

error: Content is protected !!
Join WhatsApp Group