ರಕ್ಷಾ ಬಂಧನ ಕವನ: ಮೆಲುಕು

Must Read

ಮೆಲುಕು

ಬೆಳ್ಳಂ ಬೆಳ್ಗೆ ಅವ್ವನ ಕೂಗು

ಕೇಳಿದ್ರೂ ಕೇಳದಂತೆ ಮಲ್ಗೋದು

ಇತ್ತ ನಾನುನೂ  ಕಿರುಚಿದೆ

ಅವ್ವ ಕರಿತೈತೆ ಎದ್ದೇಳಣ್ಣಯ್ಯ

ಜಳಕಾ ಮಾಡಿ ಮಡಿಉಟ್ಕೊ

ರಾಕಿ ಕಟ್ಟಸ್ಕೊ ಹಬ್ಬಾ ಐತಿ

ಸೋಂಬೇರಿ ಸೋಮಾರಿ ನೀ

ಹೊರ್ಗ ಹೋಗಬ್ಯಾಡಾ ಅಣ್ಣಯ್ಯ

ಮತ್ತದೇ ಜಗಳಾ ಜಡೆ ಎಳೆದು

ರಿಬ್ಬನ್ ಜಗ್ಗಿ ನೂಕಿ ಓಡೋದು

ಅವ್ವನ ದನಿಗೆ ಮುದುಡಿಕೊಳ್ಳುವ

ಮುದ್ದು ಪೆದ್ದು ಅಣ್ಣಯ್ಯ

ರಾಕಿ ಕಟ್ಟಿ ಸಕ್ಕರೆ ಬದಲು

 ಉಪ್ಪು ತಿನಿಸಿ ಗೋಳಾಡಿಸಿ

ತಲೆಗೂದಲ ಜಗ್ಗಿ ತಿವಿದು

ಓಡಿದ ನೆನಪು ಮಾಸಿಲ್ಲ ಅಣ್ಣಯ್ಯ

ಅಪ್ಪಂಗೆ ಚಾಡಿ ಹೇಳಿ

ಅವ್ವಂಗೆ ಮೋಡಿ ಮಾಡಿ

ಅಜ್ಜ ಅಮ್ಮಂಗೆ ಅತ್ತು ಕೇಳಿ

ರೊಕ್ಕ ಇಸ್ಕೊಂಡದ್ದು ಎಷ್ಟ್ ಚಂದ ಅಣ್ಣಯ್ಯ

ದಿನಕ್ಕ ನಾಕಸಲಾ ಜಗಳಾಮಾಡೋದು

ವಾರಕ್ಕ ಎರಡ ಸಲಾ ಮಾತ ಬಿಡೋದು

ಆದ್ರೂ ಎನ್ ಮಜವಾಗಿತ್ತು

ಬಾಲ್ಯದ ಜೀವನ ಅಣ್ಣಯ್ಯ

ಸೂಟಿ ಇದ್ರ ಹೊಲದ ಸುತ್ತ

ನಮ್ಮ ಚಿತ್ತ 

ಮಾವಿನಕಾಯಿ ಉಪ್ಪು ಖಾರಾ

ಸೇರಿಸಿ ದವಡೆ ಜುಮ್ ಅಂದ್ರೂ

ತಿಂದ ನೆನಪು ಕಾಡತೈತಿ ಅಣ್ಣಯ್ಯ

ಸಂಜೀ ಮುಂದ ಕಾಕಾನ ಚಕ್ಕಡಿ

ಬರೋದಾರಿಲಿ ನಿಂತ ನಾ ಮುಂದ ನೀ ಮುಂದಂತಾ ಬಿದ್ದಕೊಂಡ ಬೈಸ್ಕೊಂಡ ಕಿಸಿಕಿಸಿ

ನಗೋದಂದ್ರ ಹಬ್ಬಾ ಅಲ್ವೇನಣ್ಣಯ್ಯ

ಕೆಲಸಾ ಹೇಳಿದರ ಸಾಕು

ಓದದ ಬರಿಯೋದ ನೆಪಾ

ನೀ ಹೋಗ ನಾ ಹೋಗ 

ಅನ್ನೋದ್ರಾಗ ಬೆಳಕ ಹರಿಯೋದ ಮರ್ತಿಲ್ಲ ಅಣ್ಣಯ್ಯ

ದಿನಾ ಕಳದಂಗ ದೊಡ್ಡವರಾದದ್ ಮರತ್ವಿ

ಮದ್ವಿ ಮಕ್ಕಳು ಅಂತಾ ನಮ್ಮ ಬಾಳೆಕ ನಾವ್ ಹತ್ತಿದ್ವಿ 

ಆದ್ರೂ ಅಣ್ಣಾ ತಂಗಿ ಸಂಬಂಧ ಅಂದ್ರ ಬೆಲೆ ಕಟ್ಟಾಕ್ಕಾಗದ್ದೈತಿ ಹೌದ ಅಲ್ಲ್ವೇನಣ್ಣಯ್ಯ


ಶ್ರೀಮತಿ ಜ್ಯೋತಿ ಕೋಟಗಿ, ಬೈಲಹೊಂಗಲ

ಬಿ.ಆರ್.ಪಿ ಚನ್ನಮ್ಮನ ಕಿತ್ತೂರು

Latest News

ಅನ್ನದಾನೇಶ್ವರ ಶ್ರೀಗಳು ಪಂಚಭೂತಗಳಲ್ಲಿ ಲೀನ

ಶ್ರೀಶೈಲ ಜಗದ್ಗುರುಗಳು, ನಾಡಿನ ಹರಗುರು ಚರಮೂರ್ತಿಗಳು ಭಕ್ತರು ಭಾಗಿಮೂಡಲಗಿ - ರಬಕವಿ ಬನಹಟ್ಟಿ ತಾಲೂಕಿನ ಬಂಡಿಗಣಿ ಗ್ರಾಮದ ಶ್ರೀ ಬಸವ ಗೋಪಾಲ ನೀಲಮಾಣಿಕ ಮಠದ ಶ್ರೀ...

More Articles Like This

error: Content is protected !!
Join WhatsApp Group