ಮಾಸ್ತಮರಡಿ ಪ್ರೌಢ ಶಾಲೆಯಲ್ಲಿ ವಿಜ್ಞಾನ ವಸ್ತು ಪ್ರದರ್ಶನ

Must Read

ಬೆಳಗಾವಿ: ತಾಲೂಕಿನ ಮಾಸ್ತಮರಡಿ ಗ್ರಾಮದ ಸರಕಾರಿ ಪ್ರೌಢ ಶಾಲೆ  ಯಲ್ಲಿಂದು ವಿಜ್ಞಾನ ವಸ್ತು ಪ್ರದರ್ಶನವನ್ನು ಆಯೋಜಿಸಲಾಗಿತ್ತು.

ತಾಲೂಕು ವಲಯದ ಬಿ ಆರ್ ಸಿ ಸಮನ್ವಯಾಧಿಕಾರಿ ಡಾ, ಎಮ್ ಎಸ್ ಮೇದಾರ ವಸ್ತು ಪ್ರದರ್ಶನ ಉದ್ಘಾಟನೆ ಮಾಡಿ, ವಿದ್ಯಾರ್ಥಿಗಳಿಗೆ ವಿಜ್ಞಾನ ಕಲಿಕೆಯ ಮಹತ್ವ ವಿವರಿಸಿದರು,ವಿದ್ಯಾರ್ಥಿಗಳಿಗೆ ವಿಜ್ಞಾನ ಕಲಿಕೆಯಲ್ಲಿ ಆಸಕ್ತಿ ಮೂಡಿಸುವಂತೆ ವಿಜ್ಞಾನ ಶಿಕ್ಷಕರಿಗೆ ಕರೆ ನೀಡಿದರು, ವಿಜ್ಞಾನ ವಿಷಯದ ಪ್ರಯೋಗ ಮಾಡಿದ ವಿದ್ಯಾರ್ಥಿಗಳ ಪ್ರಯತ್ನಕ್ಕೆ ಮೆಚ್ಚುಗೆ ವ್ಯಕ್ತಪಡಿಸಿದರು.

ಈ ಕಾರ್ಯಕ್ರಮದಲ್ಲಿ ಬೆಳಗಾವಿ ತಾಲೂಕಿನ ಪಿ ಎಲ್ ಡಿ ಬ್ಯಾಂಕ್ ಅಧ್ಯಕ್ಷರಾದ ಪ್ರಕಾಶಗೌಡ ಪಾಟೀಲ, ಸರಕಾರಿ ಮಾದರಿ ಪ್ರಾಥಮಿಕ ಕನ್ನಡ ಶಾಲೆಯ ಮುಖ್ಯೋಪಾಧ್ಯಾಯರಾದ ಬಸವರಾಜ ಸುಣಗಾರ ರವರು ಭಾಗವಹಿಸಿ ಮಾತನಾಡಿ, ವಿಜ್ಞಾನವಸ್ತುಗಳ ಪ್ರದರ್ಶನ ಏರ್ಪಡಿಸಿದ ಕುರಿತು ಮೆಚ್ಚುಗೆ ವ್ಯಕ್ತಪಡಿಸಿ ಪ್ರೌಢಶಾಲೆಯ ಕಾರ್ಯ ಶ್ಲಾಘನೀಯ ಎಂದರು,ಸರಕಾರಿ ಶಾಲೆಗಳು ಸರ್ವ ಸೌಲಭ್ಯ ಹೊಂದಲು ಸಮುದಾಯದ ಹಾಗೂ ದಾನಿಗಳ ನೆರವು ಅಗತ್ಯವಿದೆಯೆಂದರು.

ಪ್ರೌಢ ಶಾಲೆಯ ಹಿರಿಯ ಶಿಕ್ಷಕರು ಶಿಕ್ಷಕಿಯರು, ವಿದ್ಯಾರ್ಥಿಗಳು ಉಪಸ್ಥಿತರಿದ್ದರು.

ಕಾರ್ಯಕ್ರಮದಲ್ಲಿ ದೇಣಿಗೆ ದೊರಕಲು ಸಹಕಾರ ಮಾಡಿದ ಪ್ರಾಥಮಿಕ ಮಾದರಿ ಪ್ರಾಥಮಿಕ ಕನ್ನಡ ಶಾಲೆಯ ವಿಜ್ಞಾನ ಶಿಕ್ಷಕರಾದ ಬಸನಗೌಡ ಆರ್ ಪಾಟೀಲ ರನ್ನು ಸನ್ಮಾನಿಸಲಾಯಿತು.

ಅಮೇರಿಕಾದಲ್ಲಿ ಇಂಜಿನಿಯರ್ ಆಗಿ ಕಾರ್ಯನಿರ್ವಹಣೆ ಮಾಡುತ್ತಿರುವ ಹಾಲಗಿಮರಡಿ ಗ್ರಾಮದ ಪಾಟೀಲ ಬಂಧುಗಳು ಜಮ್ಮಾ ಜಮ್ಮಾ ಫೌಂಡೇಶನ್ ಮಾಡಿಕೊಂಡು ತಾವು ಕಲಿತ ಸರಕಾರಿ ಪ್ರಾಥಮಿಕ ಶಾಲೆಗಳಿಗೆ ಶೈಕ್ಷಣಿಕ ಸಾಮಗ್ರಿ ಗಳನ್ನು ದೇಣಿಗೆ ರೂಪದಲ್ಲಿ ನೀಡುತ್ತಿದ್ದು, ಸದ್ಯ ಮಾಸ್ತಮರಡಿಯ ಸರಕಾರಿ ಪ್ರೌಢಶಾಲೆಗೆ ಒಂದು ಲಕ್ಷ ರೂಪಾಯಿಗಳ ವಿಜ್ಞಾನ ಪ್ರಯೋಗದ ಉಪಕರಣ ಗಳನ್ನು ದೇಣಿಗೆ ನೀಡಿದರು,  ಅವುಗಳನ್ನು ವಿಜ್ಞಾನ ವಿಷಯದ ಶಿಕ್ಷಕಿಯರಾದ ಶ್ರೀಮತಿ ವಿಜಯಲತಾ ಶಿವಾಜಿರಾವ ಸಾಗರ ರವರು ಸ್ವೀಕರಿಸಿ ಅವುಗಳ ವಿವರಣೆಯನ್ನು ವಿದ್ಯಾರ್ಥಿಗಳಿಗೆ ವಿವರಿಸಿದರು.

ಶಾಲಾ ವಿದ್ಯಾರ್ಥಿಗಳು ವಿಜ್ಞಾನದ ಪ್ರಯೋಗ ಮಾಡಿ ಅವುಗಳ ಉಪಯೋಗ ವಿವರಿಸಿದರು.

ಪ್ರೌಢಶಾಲೆಮುಖ್ಯೋಪಾಧ್ಯಾಯರಾದ ಶಂಕರ ಕೊಟ್ರಶೆಟ್ಟಿ ಸ್ವಾಗತಿಸಿ ಪ್ರಾಸ್ತಾವಿಕವಾಗಿ ಮಾತನಾಡಿದರು.

Latest News

ಬಂಜಾರಾ ಸಮಾಜದ ಶ್ರೇಷ್ಠ ಸಂತ ಸೇವಾಲಾಲ ಮಹಾರಾಜ

ಬಂಜಾರಾ (ಲಂಬಾಣಿ/ಲಮಾಣಿ) ಸಮುದಾಯವು ಭಾರತದಾದ್ಯಂತ ಹರಡಿರುವ, ರಾಜಸ್ಥಾನ ಮೂಲದ ಪ್ರಾಚೀನ ಅಲೆಮಾರಿ ಬುಡಕಟ್ಟು ಜನಾಂಗ. ಐತಿಹಾಸಿಕವಾಗಿ ಇವರು ಪಶುಸಂಗೋಪನೆ, ಉಪ್ಪು ಮತ್ತು ಧಾನ್ಯಗಳ ವ್ಯಾಪಾರ ಹಾಗೂ...

More Articles Like This

error: Content is protected !!
Join WhatsApp Group