Homeಸುದ್ದಿಗಳುಹಡಪದ ನಿಗಮ ರಚನೆ; ಶಿವಾನಂದ ಹರ್ಷ

ಹಡಪದ ನಿಗಮ ರಚನೆ; ಶಿವಾನಂದ ಹರ್ಷ

ಸಿಂದಗಿ: ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಫೆ. 1ರಂದು ತಂಗಡಗಿ ಗ್ರಾಮಕ್ಕೆ ಆಗಮಿಸಿ ರಾಜ್ಯಮಟ್ಟದ ಹಡಪದ ಸಮಾಜದವರ ಜನಜಾಗೃತಿ ಸಮಾವೇಶ ಮತ್ತು ವಿವಿಧ ಅಭಿವೃದ್ಧಿ ಕಾಮಗಾರಿಗಳ ಉದ್ಘಾಟನೆ ನೆರವೇರಿಸಿ, ಶೀಘ್ರದಲ್ಲೇ ಹಡಪದ ಸಮಾಜಕ್ಕೆ ನಿಗಮ ತಪ್ಪದೇ ಮಾಡುವ ವಾಗ್ದಾನ ಮಾಡಿದ್ದರು.

ಮಾತಿಗೆ ಮುಖ್ಯಮಂತ್ರಿಗಳು ನಿಗಮ ರಚನೆ ಮಾಡಿ ಹಡಪದ ನಿಗಮ ಸ್ಥಾಪನೆ ಮಾಡಿದ್ದಕ್ಕೆ ಪಟ್ಟಣದ ಹಡಪದ ಅಪ್ಪಣ್ಣ ಸಹಕಾರಿ ಸಂಘದ ಅಧ್ಯಕ್ಷ ಶಿವಾನಂದ ಹಡಪದ ಹರ್ಷ ವ್ಯಕ್ತಪಡಿಸಿದ್ದಾರೆ.

ಈ ಕುರಿತು ಪತ್ರಿಕಾ ಹೇಳಿಕೆ ನೀಡಿರುವ ಅವರು, ಹಡಪದ ಸಮಾಜವು ನಿಗಮದ ಪ್ರಯೋಜನವನ್ನು ಸಮರ್ಥವಾಗಿ ಬಳಸಿಕೊಂಡು ಆರ್ಥಿಕವಾಗಿ, ಶೈಕ್ಷಣಿಕವಾಗಿ ಅಭಿವೃದ್ಧಿ ಹೊಂದಲು ಸಹಕಾರ ನೀಡಿದಕ್ಕೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಮತ್ತು ಕ್ಷೇತ್ರದ ಶಾಸಕ ರಮೇಶ ಭೂಸನೂರ ಅವರಿಗೆ ಅಭಿನಂಧನೆ ತಿಳಿಸಿದ್ದಾರೆ.

RELATED ARTICLES

Most Popular

error: Content is protected !!
Join WhatsApp Group