ಮಲ್ಲಕಂಬ ಸ್ಪರ್ಧೆಯಲ್ಲಿ ರಾಷ್ಟ್ರಮಟ್ಟಕ್ಕೆ ಆಯ್ಕೆಯಾದ ಶಿವಪ್ರಸಾದ

Must Read

ಮೂಡಲಗಿ: ಕರ್ನಾಟಕ ಮಲ್ಲಕಂಬ ಅಸೋಸಿಯೇಷನ್ ಲಕ್ಷ್ಮೇಶ್ವರ ಹಾಗೂ ಚಂದ್ರಯ್ಯ ಎಮ್. ಪಂಚಕಟ್ಟಿನ ಪದವಿ ಪೂರ್ವ ಮಹಾವಿದ್ಯಾಲಯ ಲೋಕಾಪೂರ ಇವುಗಳ ಆಶ್ರಯದಲ್ಲಿ ದಿನಾಂಕ-01 ರಂದು ನಡೆದ “ರಾಜ್ಯಮಟ್ಟದ ಮಲ್ಲಕಂಬ” 18 ವರ್ಷದೊಳಗಿನ ಬಾಲಕರ ಮಲ್ಲಕಂಬ ಸ್ಪರ್ಧೆಯಲ್ಲಿ ಮೂಡಲಗಿಯ ಚೈತನ್ಯ ಆಶ್ರಮ ವಸತಿ ಶಾಲೆಯ ವಿದ್ಯಾರ್ಥಿ ಕು. ಶಿವಪ್ರಸಾದ ಕಡಾಡಿ 6 ಸ್ಥಾನ ಪಡೆದು “ರಾಷ್ಟ್ರ ಮಟ್ಟಕ್ಕೆ” ಆಯ್ಕೆಯಾಗುವುದರ ಜೊತೆಗೆ ಖೇಲೋ..ಇಂಡಿಯಾ ಯುತ್ ಗೆ ಆಯ್ಕೆಯಾಗಿದ್ದಾನೆ.

ರಾಷ್ಟ್ರ ಮಟ್ಟದ ಸ್ಪರ್ಧೆ ಉತ್ತರ ಪ್ರದೇಶ ಹಾಗೂ ಖೇಲೋ ಇಂಡಿಯಾ ಮಧ್ಯಪ್ರದೇಶದಲ್ಲಿ ಜರುಗುತ್ತವೆ.

ಈ ಸಾಧನೆ ಮಾಡಿದ ವಿದ್ಯಾರ್ಥಿ ಶಿವಪ್ರಸಾದ ಕಡಾಡಿಗೆ ಚೈತನ್ಯ ಶಾಲೆಯಲ್ಲಿ ಅಭಿನಂದಿಸಿ ಹಾರೈಸಿದರು.
ಪ್ರೊ. ಎಸ್.ಎಮ್. ಕಮದಾಳ, ವಾಯ್.ಬಿ. ಪಾಟೀಲ ಕಾರ್ಯದರ್ಶಿ, ಶ್ರೀಮತಿ ರುಕ್ಮಿಣಿ ಹೊರಟ್ಟಿ ಅಧ್ಯಕ್ಷರು, ಮಲ್ಲಕಂಬ ತರಬೇತಿದಾರರಾದ ಮೆಹಬೂಬ್ ಬಂಡಿವಾಡ ಶಿಕ್ಷಕರು ಹಾಗೂ ಸಿಬ್ಬಂದಿಗಳು ಉಪಸ್ಥಿತರಿದ್ದರು.

Latest News

ಮಾಚಿದೇವರ ಆದರ್ಶಗಳನ್ನು ಜೀವನದಲ್ಲಿ ಅಳವಡಿಸಿಕೊಳ್ಳಬೇಕು

ಮಡಿವಾಳ ಮಾಚಿದೇವರ ಜಯಂತಿ ಸಿಂದಗಿ; ಹನ್ನೆರಡನೆಯ ಶತಮಾನದಲ್ಲಿಯೇ ಸಮಾಜದ ಏಳ್ಗೆಗಾಗಿ ಸಮಾನತೆಯನ್ನು ಬಯಸಿದ ಶರಣ ಮಡಿವಾಳ ಮಾಚಿದೇವರ ಜೀವನ ಚರಿತ್ರೆ ಬಹಳ ಅರ್ಥ ಪೂರ್ಣವಾಗಿದೆ ಅವರ ವಚನಗಳನ್ನು...

More Articles Like This

error: Content is protected !!
Join WhatsApp Group