ಮಲ್ಲಕಂಬ ಸ್ಪರ್ಧೆಯಲ್ಲಿ ರಾಷ್ಟ್ರಮಟ್ಟಕ್ಕೆ ಆಯ್ಕೆಯಾದ ಶಿವಪ್ರಸಾದ

Must Read

ಮೂಡಲಗಿ: ಕರ್ನಾಟಕ ಮಲ್ಲಕಂಬ ಅಸೋಸಿಯೇಷನ್ ಲಕ್ಷ್ಮೇಶ್ವರ ಹಾಗೂ ಚಂದ್ರಯ್ಯ ಎಮ್. ಪಂಚಕಟ್ಟಿನ ಪದವಿ ಪೂರ್ವ ಮಹಾವಿದ್ಯಾಲಯ ಲೋಕಾಪೂರ ಇವುಗಳ ಆಶ್ರಯದಲ್ಲಿ ದಿನಾಂಕ-01 ರಂದು ನಡೆದ “ರಾಜ್ಯಮಟ್ಟದ ಮಲ್ಲಕಂಬ” 18 ವರ್ಷದೊಳಗಿನ ಬಾಲಕರ ಮಲ್ಲಕಂಬ ಸ್ಪರ್ಧೆಯಲ್ಲಿ ಮೂಡಲಗಿಯ ಚೈತನ್ಯ ಆಶ್ರಮ ವಸತಿ ಶಾಲೆಯ ವಿದ್ಯಾರ್ಥಿ ಕು. ಶಿವಪ್ರಸಾದ ಕಡಾಡಿ 6 ಸ್ಥಾನ ಪಡೆದು “ರಾಷ್ಟ್ರ ಮಟ್ಟಕ್ಕೆ” ಆಯ್ಕೆಯಾಗುವುದರ ಜೊತೆಗೆ ಖೇಲೋ..ಇಂಡಿಯಾ ಯುತ್ ಗೆ ಆಯ್ಕೆಯಾಗಿದ್ದಾನೆ.

ರಾಷ್ಟ್ರ ಮಟ್ಟದ ಸ್ಪರ್ಧೆ ಉತ್ತರ ಪ್ರದೇಶ ಹಾಗೂ ಖೇಲೋ ಇಂಡಿಯಾ ಮಧ್ಯಪ್ರದೇಶದಲ್ಲಿ ಜರುಗುತ್ತವೆ.

ಈ ಸಾಧನೆ ಮಾಡಿದ ವಿದ್ಯಾರ್ಥಿ ಶಿವಪ್ರಸಾದ ಕಡಾಡಿಗೆ ಚೈತನ್ಯ ಶಾಲೆಯಲ್ಲಿ ಅಭಿನಂದಿಸಿ ಹಾರೈಸಿದರು.
ಪ್ರೊ. ಎಸ್.ಎಮ್. ಕಮದಾಳ, ವಾಯ್.ಬಿ. ಪಾಟೀಲ ಕಾರ್ಯದರ್ಶಿ, ಶ್ರೀಮತಿ ರುಕ್ಮಿಣಿ ಹೊರಟ್ಟಿ ಅಧ್ಯಕ್ಷರು, ಮಲ್ಲಕಂಬ ತರಬೇತಿದಾರರಾದ ಮೆಹಬೂಬ್ ಬಂಡಿವಾಡ ಶಿಕ್ಷಕರು ಹಾಗೂ ಸಿಬ್ಬಂದಿಗಳು ಉಪಸ್ಥಿತರಿದ್ದರು.

Latest News

ಮಜದೂರ ಯೂನಿಯನ್ ಚುನಾವಣೆಯಲ್ಲಿ ಅಧ್ಯಕ್ಷ ರವಿ ಕುರಬರ, ಕಾರ್ಯಾಧ್ಯಕ್ಷ ಬಸು ಮೇಲಪ್ಪಗೊಳ ಆಯ್ಕೆ

ಹಳ್ಳೂರ- ಸಮೀಪದ ಸಮೀರವಾಡಿಯ ಗೋದಾವರಿ ಬಯೋರಿಪೈನರೀಸ್ ಮಜದೂರ ಯೂನಿಯನ್ ಎರಡು ವರ್ಷಗಳ ಅವಧಿಗೆ ಪದಾಧಿಕಾರಿಗಳ ಚುನಾವಣೆಯು ಶುಕ್ರವಾರದಂದು ಕಾರ್ಖಾನೆಯ ಭದ್ರತಾ ಕಚೇರಿಯಲ್ಲಿ ಶಾಂತ ರೀತಿಯಲ್ಲಿ ನಡೆಯಿತು.ತಡ...

More Articles Like This

error: Content is protected !!
Join WhatsApp Group