ಬೆಳಗಾವಿ– ಕನ್ನಡ ಸಾಹಿತ್ಯ ಪರಿಷತ್ತು ತಾಲೂಕಿನ ಘಟಕ ಬೆಳಗಾವಿ ಮತ್ತು ಮ ರ ಸಂ ಶಿಕ್ಷಣ ಮಹಾವಿದ್ಯಾಲಯ ಮಹಾಂತೇಶ ನಗರ ಬೆಳಗಾವಿ ಇವರ ಸಂಯುಕ್ತ ಆಶ್ರಯದಲ್ಲಿ ದಿನಾಂಕ 15.07.2023 ರಂದು 11.00 ಘಂಟೆಗೆ ವಚನ ಪಿತಾಮಹ ಡಾ ಫ ಗು ಹಳಕಟ್ಟಿ ಅವರ ಬದುಕು ಬರಹ ಕುರಿತು ಉಪನ್ಯಾಸವನ್ನು ಡಾ. ನಿಮ೯ಲಾ ಬಟ್ಟಲ ಪ್ರಾಚಾರ್ಯರು ಮ ರ ಸಂ ಶಿಕ್ಷಣ ಮಹಾವಿದ್ಯಾಲಯ ಮಹಾಂತೇಶ ನಗರ ಬೆಳಗಾವಿ ಇವರು ನೀಡಲಿದ್ದಾರೆ.
ಕುಲಪುರೋಹಿತ ಆಲೂರ ವೆಂಕಟರಾಯರ ಬದುಕು ಬರಹ ಕುರಿತು ಡಾ. ಅ ಬ ಇಟಗಿ ಉಪನ್ಯಾಸಕರು ಸರಕಾರಿ ಪ್ರಥಮ ದಜೆ೯ಕಾಲೇಜು, ಖಾನಾಪೂರ ಇವರು ಉಪನ್ಯಾಸ ನೀಡಲಿದ್ದಾರೆ.
ಅಧ್ಯಕ್ಷತೆಯನ್ನು ಸುರೇಶ ಸಿ ಹಂಜಿ ಕ ಸಾ ಪ ಬೆಳಗಾವಿ ತಾಲೂಕಿನ ಅಧ್ಯಕ್ಷರು ವಹಿಸಲಿದ್ದಾರೆ.
ಎಂ ವೈ ಮೆಣಸಿನಕಾಯಿ ಗೌರವ ಕಾಯ೯ದಶಿ೯ ಕ ಸಾ ಪ ಜಿಲ್ಲಾ ಬೆಳಗಾವಿ ಮತ್ತು ಡಾ ಸಿದ್ದಣ್ಣಾ ವಾಲಿಶೆಟ್ಟಿ ಪ್ರಾಧ್ಯಾಪಕರು ಮ ರ ಸಂ ಶಿಕ್ಷಣ ಮಹಾವಿದ್ಯಾಲಯ ಮಹಾಂತೇಶ ನಗರ ಬೆಳಗಾವಿ ಅವರು ಉಪಸ್ಥಿತಿ ಇರುವರು ನಿರೂಪಣೆ ರೂಪಾ ಅಕ್ಕಿ ಪ್ರಾಧ್ಯಾಪಕರು ಮ ರ ಸಂ ಶಿಕ್ಷಣ ಮಹಾವಿದ್ಯಾಲಯ ಮಹಾಂತೇಶ ನಗರ ಬೆಳಗಾವಿ ಮಾಡಲಿದ್ದು ಸಮಸ್ತ ಕನ್ನಡ ಮನಸ್ಸುಗಳು ಆಗಮಿಸಲು ಸುರೇಶ ಹಂಜಿ ಅಧ್ಯಕ್ಷರು ಕ ಸಾ ಪ ಬೆಳಗಾವಿ ತಾಲೂಕ ಘಟಕ ವಿನಂತಿಸಿದ್ದಾರೆ.