ಎರಡು ಕವನಗಳು : ಡಾ. ಶಶಿಕಾಂತ ಪಟ್ಟಣ

Must Read

ನಿನ್ನಿಂದ ನಗಬೇಕು
____________________

ನಿನ್ನ ಸುತ್ತ
ನೂರು ಜನರು
ನಿನ್ನಿಂದ ನಗಬೇಕು
ಹೊರತು
ನಿನ್ನ ನೋಡಿ ಅಲ್ಲ
ನಗೆ ಮಲ್ಲಿಗೆ
ಹಂಚಿ ಬಿಡು

ಯಾರಾದರೂ ಅತ್ತರೆ
ನಿನಗಾಗಿ ಅಳಬೇಕೆ
ಹೊರತು
ನಿನ್ನಿಂದಲ್ಲ
ಅಳು ನೋವು
ನೀಡದಿರು

ನೀನು ನಕ್ಕಾಗ
ಅವರು ನಕ್ಕು
ನೀನು ಅತ್ತಾಗ
ಅವರು ಅತ್ತರೆ
ಅದುವೇ ಸ್ನೇಹ
ಪ್ರೀತಿ ಜೀವನ

ನಕ್ಕು ಬಿಡು
ನಿನ್ನ ನೋವು
ಮರೆತು
____________________

ಮುಗಿಸಿ ಹೊರಡು
___________________

ತನು ಮನ
ಭಾವಗಳ
ತಳಕಾಟ
ಅತ್ತ ಇತ್ತ
ಹೊಯ್ದಾಟ
ಚಿತ್ತ ಚಂಚಲ
ತೀವ್ರ ಚೆಲ್ಲಾಟ
ಮನವಿದು
ಮಹಾದೇವನ
ಮಾಟ
ಆತ್ಮ ಕಾಯ
ಪ್ರಾಣಗಳ ಕೂಟ
ಮುಗಿಸಿ ಹೊರಡು
ಭೂಮಿ ಬಿಟ್ಟು
ಸಾಕು ಅವರಿವರ
ಕಾಟ
_____________________
ಡಾ.ಶಶಿಕಾಂತ ಪಟ್ಟಣ ರಾಮದುರ್ಗ ಪುಣೆ

LEAVE A REPLY

Please enter your comment!
Please enter your name here

Latest News

ಪ್ರಕೃತಿ ಮತ್ತು ಪ್ರೀತಿಯ ಅದ್ಭುತ ಸಂಗಮ: ಮೇಘದೂತದ ಮಹತ್ವ ವಿವರಿಸಿದ ಪ್ರೊ. ನಾರಾಯಣಘಟ್ಟ

    ಕಾಳಿದಾಸನ ಮೇಘದೂತ ಪ್ರಕೃತಿ ಹಾಗೂ ಶುದ್ಧ ಪ್ರೀತಿಯ ಅದ್ಭುತ ಕಾವ್ಯವಾಗಿದ್ದು, ವಿದ್ಯಾರ್ಥಿಗಳು ಇದನ್ನು ತಮ್ಮ ಜೀವನದಲ್ಲಿ ಅಳವಡಿಸಿಕೊಳ್ಳಬೇಕು ಎಂದು ಪ್ರೊ. ನಾರಾಯಣಘಟ್ಟ ಹೇಳಿದರು. ...

More Articles Like This

error: Content is protected !!
Join WhatsApp Group