ಸಹಕಾರ ಸಂಘದ ಸಾಲವನ್ನು ಸದುಪಯೋಗಪಡಿಸಿಕೊಳ್ಳಿ

Must Read

ಮೂಡಲಗಿ –ರೈತರಿಗೆ ಅನುಕೂಲವಾಗಲಿ ಎಂಬ ಉದ್ದೇಶದಿಂದ ಕೃಷಿ ಯಂತ್ರಗಳಿಗೆ ನಮ್ಮ ಸಂಘದಿಂದ ಸಾಲ ನೀಡಿ ರೈತರಿಗೆ ಉತ್ತೇಜನ ನೀಡಲಾಗುತ್ತಿದೆ. ಕೃಷಿಯಂತ್ರಗಳನ್ನು ಸರಿಯಾಗಿ ಉಪಯೋಗಿಸಿ ಸಕಾಲದಲ್ಲಿ ಸಾಲ‌ ಮರು ಪಾವತಿ ಮಾಡಿದರೆ ಬೇರೊಬ್ಬ ರೈತರಿಗೆ ಕೃಷಿ ಉಪಕರಣಗಳನ್ನು ಖರೀದಿಸಲು ಸಾಲ ನೀಡಲು ಹೆಚ್ಚು ಆಸಕ್ತಿ ಮೂಡುತ್ತದೆ ಎಂದು ಮೂಡಲಗಿ ಮಂಜುನಾಥ ವಿವಿಧ ಉದ್ದೇಶಗಳ ಸಹಕಾರ ಸಂಘದ ಅಧ್ಯಕ್ಷ ಸಂಗಪ್ಪ ನಿಡಗುಂದಿ ಹೇಳಿದರು.

ಸಂಘದಿಂದ ಹಾರೂಗೇರಿ ಪಟ್ಟಣದ ಶಿವು ಗೋಕಾಕ ಎಂಬುವರಿಗೆ 26 ಲಕ್ಷದ ಕೃಷಿಯಂತ್ರ ಖರೀದಿಸಲು ಸಾಲ ನೀಡಲಾಗಿತ್ತು. ವಾಹನವನ್ನು ರೈತರಿಗೆ ವಿತರಿಸಿ ಅವರು ಮಾತನಾಡಿದರು.

ಈ ಸಂದರ್ಭದಲ್ಲಿ ಉಪಾಧ್ಯಕ್ಷ ರುದ್ರಪ್ಪ ಬಳಿಗಾರ, ನಿರ್ದೇಶಕರಾದ ಶಿವಬಸು ಕುಡಚಿ, ಶಿವಬಸು ಸುಣದೋಳಿ, ಶಿವಬೋಧ ಉದಗಟ್ಟಿ, ಪಾಂಡು ಮಹೇಂದ್ರಕರ,ಶೆಲಾಜಿ ನಾರಾಯಣಕರ, ಪ್ರಧಾನ ಕಾರ್ಯದರ್ಶಿ ಬಸವರಾಜ ಕುದರಿ ಹಾಗೂ ಸಿಬ್ಬಂದಿ ವರ್ಗ ಇದ್ದರು.

Latest News

ಅನ್ನದಾನೇಶ್ವರ ಶ್ರೀಗಳು ಪಂಚಭೂತಗಳಲ್ಲಿ ಲೀನ

ಶ್ರೀಶೈಲ ಜಗದ್ಗುರುಗಳು, ನಾಡಿನ ಹರಗುರು ಚರಮೂರ್ತಿಗಳು ಭಕ್ತರು ಭಾಗಿಮೂಡಲಗಿ - ರಬಕವಿ ಬನಹಟ್ಟಿ ತಾಲೂಕಿನ ಬಂಡಿಗಣಿ ಗ್ರಾಮದ ಶ್ರೀ ಬಸವ ಗೋಪಾಲ ನೀಲಮಾಣಿಕ ಮಠದ ಶ್ರೀ...

More Articles Like This

error: Content is protected !!
Join WhatsApp Group