ಮೂಡಲಗಿ – “ವಿದ್ಯಾರ್ಥಿಗಳ ಭವಿಷ್ಯ ರೂಪಿಸುವಲ್ಲಿ ಶಿಕ್ಷಕರ ಕಾರ್ಯ ಮಹತ್ತರವಾಗಿದ್ದು ಮಾನವೀಯ ಮೌಲ್ಯಗಳು ಕಡಿಮೆಯಾಗುತ್ತಿರುವ ಈ ಸಂದರ್ಭದಲ್ಲಿ ಮೌಲ್ಯಗಳು ಮನುಷ್ಯನ ಬದುಕಿಗೆ ಮಾರ್ಗದರ್ಶಿಯಾಗಿದ್ದು ಅಳಿದು ಹೋಗುವ ಶರೀರದ ವ್ಯಾಮೋಹವನ್ನು ತೊರೆದು ದೇಶ ಅಭಿಮಾನಪಡುವಂತಹ ಮಕ್ಕಳು ನೀವಾಗಬೇಕು” ಎಂದು ಎಸ್.ಆರ್.ಸಂತಿ ಸರಕಾರಿ ಪದವಿ ಪೂರ್ವ ಕಾಲೇಜು ಹಳ್ಳೂರಿನ ಉಪನ್ಯಾಸಕರಾದ ವಾಯ್. ಬಿ. ಕಳ್ಳಿಗುದ್ದಿ ಕರೆ ನೀಡಿದರು.
ಅವರು ಸ್ಥಳೀಯ ಶ್ರೀ ಶ್ರೀಪಾದಬೋಧ ಸ್ವಾಮೀಜಿ ಸರಕಾರಿ ಪದವಿ ಕಾಲೇಜಿನಲ್ಲಿ 2020-21 ನೇ ಸಾಲಿನ ಕಾಲೇಜಿನ ವಿವಿಧ ಘಟಕಗಳ ಸಮಾರೋಪ ಹಾಗೂ ಅಂತಿಮ ವರ್ಷದ ಪದವಿ ವಿದ್ಯಾರ್ಥಿಗಳ ಬೀಳ್ಕೊಡುಗೆ ಸಮಾರಂಭದ ಮುಖ್ಯ ಅತಿಥಿಗಳಾಗಿ ಮಾತನಾಡುತ್ತಾ “ವಿದ್ಯಾರ್ಥಿಗಳು ದೇಶ ಕಟ್ಟುವ ಸಮರ್ಥ ನಾಯಕರಾಗಬೇಕು ಪಾಠದ ಜೊತೆಗೆ ಬದುಕನ್ನು ಕಟ್ಟಿಕೊಳ್ಳುವ ಕಲೆಯನ್ನು ತಿಳಿಸಿಕೊಟ್ಟ ಗುರುಗಳಿಗೆ ಸದಾ ಚಿರಋಣಿಯಾಗಿರಬೇಕು ತಂದೆ-ತಾಯಿಗಳ ಹೆಸರನ್ನು ತರಬೇಕು ಜೊತೆಗೆ ಪದವಿ ಮುಗಿಸಿದ ನಂತರ ಸಮಾಜಕ್ಕೆ ಪರಿಮಳವನ್ನು ಹೊತ್ತೊಯ್ಯಬೇಕು ಅದರಿಂದ ಸಮಾಜ ಸುಗಂಧ ಭರಿತವಾಗಬೇಕು” ಎಂದು ತಿಳಿಸಿದರು.
ಇನ್ನೋರ್ವ ಅತಿಥಿಗಳಾಗಿ ಆಗಮಿಸಿದ್ದ ಹಾರೂಗೇರಿಯ ಸರ್ಕಾರಿ ಪದವಿ ಕಾಲೇಜಿನ ಪ್ರಾಂಶುಪಾಲರಾದ ಡಾ.ಆರ್.ಬಿ.ಕೊಕಟನೂರ ಅವರು ಮಾತನಾಡುನಾಡುತ್ತಾ ಪದವಿ ಶಿಕ್ಷಣ ಪಡೆದುಕೊಂಡ ನೀವುಗಳು ಉನ್ನತ ಶಿಕ್ಷಣಕ್ಕೆ ತೆರಳಬೇಕು ಅಂತಹವರ ಸಂಖ್ಯೆ ಹೆಚ್ಚಾಗಲಿ ನಿಮ್ಮ ಮುಂದಿನ ಭವಿಷ್ಯ ಸುಖಕರವಾಗಿರಲಿ ಎಂದು ಹಾರೈಸಿದರು.
ಅಧ್ಯಕ್ಷತೆ ವಹಿಸಿದ್ದ ಪ್ರಾಂಶುಪಾಲರಾದ ಎಸ್.ಡಿ. ಗಾಣಿಗೇರ ಅವರು ತಮ್ಮ ಅಧ್ಯಕ್ಷೀಯ ನುಡಿಯಲ್ಲಿ “ಮಹಾವಿದ್ಯಾಲಯ ನಿಮ್ಮೆಲ್ಲರ ಸಹಕಾರದಿಂದ ಸಾಕಷ್ಟು ಬೆಳೆದಿದೆ ಮುಂದೆಯೂ ಬೆಳೆಯುತ್ತದೆ ಜೊತೆಗೆ ನಿಮ್ಮ ಶಿಕ್ಷಣ ಇಲ್ಲಿಗೆ ಕೊನೆಯಾಗದೆ ಮುಂದಿನ ಹಂತಕ್ಕೆ ತೆರಳಿ ಉನ್ನತ ಹುದ್ದೆಗಳನ್ನು ಪಡೆಯುವಂತಾಗಲಿ ನಮ್ಮ ಮಹಾವಿದ್ಯಾಲಯದ ಕೀರ್ತಿಯನ್ನು ಹೆಚ್ಚಿಸಲಿ” ಎಂದು ತಿಳಿಸಿದರು.
ಕಾರ್ಯಕ್ರಮದಲ್ಲಿ ಮಹಾವಿದ್ಯಾಲಯದ ಶ್ರೀಮತಿ ಗಾಯತ್ರಿ ಸಾಳೋಖೆ ಪ್ರಾಸ್ತಾವಿಕವಾಗಿ ಮಾತನಾಡಿದರು. ಕಾರ್ಯಕ್ರಮದಲ್ಲಿ ಸಿ.ಡಿ.ಸಿ ಸದಸ್ಯರಾದ ಶ್ರೀ ಚಂದ್ರು ಗಾಣಿಗರವರು, ಸಾಂಸ್ಕೃತಿಕ ಸಂಯೋಜಕರಾದ ಶ್ರೀಮತಿ ಶಿವಲೀಲಾ ಎಚ್. ಆಯ್.ಕ್ಯೂ.ಎ.ಸಿ. ಸಂಯೋಜಕರಾದ ಶ್ರೀಮತಿ ಅಶ್ವಿನಿ ಎಸ್. ಆಯ್.ಕ್ಯೂ.ಎ.ಸಿ. ಸಹ ಸಂಯೋಜಕರಾದ ಚೇತನರಾಜ್ ಬಿ. ಕ್ರೀಡಾ ಸಂಯೋಜಕರಾದ ಡಾ.ರವಿ ಗಡದನ್ನವರ, ಎನ್.ಎಸ್.ಎಸ್ ಸಂಯೋಜಕರಾದ ಸಂಜೀವಕುಮಾರ ಗಾಣಿಗೇರ ರೆಡ್ ಕ್ರಾಸ್ ಸಂಯೋಜಕರಾದ ಹನುಮಂತ ಕಾಂಬಳೆ, ಹಾಗೂ ಎಲ್ಲಾ ಪ್ರಾಧ್ಯಾಪಕರುಗಳು ಭಾಗವಹಿಸಿದ್ದರು. ಶ್ರೀಮತಿ ಶೀತಲ ತಳವಾರ ಸ್ವಾಗತಿಸಿದರು. ಸಂಜೀವ ಮದರಖಂಡಿ ವಂದಿಸಿದರು. ಶಿವಕುಮಾರ ನಿರೂಪಿಸಿದರು.