ಸವದತ್ತಿ : ತಾಲೂಕಿನ ಶಿಕ್ಷಕ ಸಾಹಿತಿ ವೈ. ಬಿ. ಕಡಕೋಳ ಅವರಿಗೆ ಬೆಳಗಾವಿಯ ರಾಣಿ ಚನ್ನಮ್ಮ ವಿಶ್ವವಿದ್ಯಾಲಯದ ಕನ್ನಡ ವಿಭಾಗದಲ್ಲಿ ಸಲ್ಲಿಸಿದ ತಲ್ಲೂರು ರಾಯನಗೌಡರು, ಸಮಗ್ರ ಅಧ್ಯಯನ ವಿಷಯದಲ್ಲಿ ಸಲ್ಲಿಸಿದ ಪ್ರಬಂಧಕ್ಕೆ ಡಾಕ್ಟರೇಟ್ ದೊರೆತ ಪ್ರಯುಕ್ತ ಮುನವಳ್ಳಿಯ ವ್ಹಿ. ಪಿ. ಜೇವೂರ ಸ್ಮಾರಕ ಪ್ರತಿಷ್ಠಾನದ ಪದಾಧಿಕಾರಿಗಳು ಇತ್ತೀಚೆಗೆ ಗೌರವಿಸಿದರು.
ಈ ಸಂದರ್ಭದಲ್ಲಿ ವಿ. ಪಿ. ಜೇವೂರ ಪ್ರತಿಷ್ಠಾನದ ಖಜಾಂಚಿ ವೀರಣ್ಣ ಕೊಳಕಿ ಮತ್ತು ಸದ್ಯರುಗಳಾದ ಬಿ. ಬಿ. ನಾವಲಗಟ್ಟಿ. ಗಂಗಾಧರ ಗೊರಾಬಾಳ. ಹಾಗೂ ಶಿವು ಕಾಟಿ ಉಪಸ್ಥಿತರಿದ್ದರು.

