ಮೂಡಲಗಿ: ಭವ್ಯ ಭಾರತದ ನಿರ್ಮಾಣದಲ್ಲಿ ಯುವಕರ ಪಾತ್ರ ಮಹತ್ವದ್ದಾಗಿದೆ. ದೇಶದ ಭವಿಷ್ಯ ಯುವಕರನ್ನೇ ಅವಲಂಬಿಸಿದೆ. ಯುವಕರು ರಾಷ್ಟ್ರದ ಸಂಪತ್ತು. ಯುವಶಕ್ತಿ ಸದ್ಬಳಕೆಯಿಂದ ಬಲಿಷ್ಠ ಹಾಗೂ ಸಧೃಢ, ಸುಸಂಸ್ಕೃತ ಹಾಗೂ ಶಕ್ತಿಶಾಲಿ ರಾಷ್ಟ್ರ ನಿರ್ಮಾಣ ಸಾಧ್ಯ. ಯುವಶಕ್ತಿ ಈ ದೇಶದ ಭವಿಷ್ಯದ ಸಮೃದ್ಧಿಯ ಸಂಕೇತ. ಯುವಶಕ್ತಿ ಜಾಗೃತವಾದರೆ ಮಾತ್ರ ದೇಶ ಅಭಿವೃದ್ಧಿಯ ಪಥದತ್ತ ಸಾಗಲು ಸಾಧ್ಯ ಎಂದು ನಾಗನೂರಿನ ಅಥರ್ವ ಪದವಿ ಪೂರ್ವ ಕಾಲೇಜಿನ ಉಪನ್ಯಾಸಕ ಚೇತನ ಜೋಗನ್ನವರ ಹೇಳಿದರು.
ರಾಜಾಪೂರ ಗ್ರಾಮದಲ್ಲಿ ಕಲ್ಲೋಳಿ ಪಟ್ಟಣದ ಶ್ರೀ ರಾಮಲಿಂಗೇಶ್ವರ ಶಿಕ್ಷಣ ಸಂಸ್ಥೆಯ ಪ್ರಥಮ ದರ್ಜೆ ಕಾಲೇಜಿನ ರಾಷ್ಟ್ರೀಯ ಸೇವಾ ಯೋಜನೆ ಘಟಕ ಹಮ್ಮಿಕೊಂಡಿರುವ ವಾರ್ಷಿಕ ವಿಶೇಷ ಶಿಬಿರದ ಉಪನ್ಯಾಸ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ಆಗಮಿಸಿ ಮಾತನಾಡಿದರು.
ರಾಷ್ಟ್ರದ ಭವಿಷ್ಯವು ದೇಶದ ಯುವಕರ ಮೇಲೆ ಅವಲಂಬಿತವಾಗಿದೆ. ಭಾರತವು ಇಡೀ ವಿಶ್ವದಲ್ಲಿ ಅತಿ ಹೆಚ್ಚು ಯುವಜನತೆಯನ್ನು ಹೊಂದಿದೆ. ಇದು ಭಾರತದ ಅತ್ಯಂತ ಕ್ರಿಯಾತ್ಮಕ ಶಕ್ತಿಯುತ ಮತ್ತು ಹೆಚ್ಚು ಮಹತ್ವಾಕಾಂಕ್ಷೆಯ ಜನಸಂಖ್ಯೆಯನ್ನು ಪ್ರತಿನಿಧಿಸುತ್ತದೆ ಎಂದರು.
ಸಹ ಶಿಬಿರಾಧಿಕಾರಿ ಡಿ.ಎಸ್. ಹುಗ್ಗಿ ಮಾತನಾಡಿ, ಯುವ ಜನತೆ ರಾಷ್ಟ್ರದ ರಚನಾತ್ಮಕ ಮತ್ತು ಕ್ರಿಯಾತ್ಮಕ ಶಕ್ತಿಯನ್ನು ಪ್ರತಿನಿಧಿಸುತ್ತಾರೆ. ಪ್ರಗತಿ ಮತ್ತು ಅಭಿವೃದ್ಧಿಗೆ ಅಗತ್ಯವಾದ ಚೈತನ್ಯ, ಸೃಜನಶೀಲತೆ ಮತ್ತು ನಾವೀನ್ಯತೆಯನ್ನು ಹೊಂದಿದ್ದು, ಸಮಾಜದ ವಿವಿಧ ಕ್ಷೇತ್ರಗಳಲ್ಲಿ ಅವರ ಸಕ್ರಿಯ ಪಾಲ್ಗೊಳ್ಳುವಿಕೆ ಭಾರತದ ಭವಿಷ್ಯವನ್ನು ರೂಪಿಸಲು ನಿರ್ಣಾಯಕವಾಗಿದೆ ಎಂದು ನುಡಿದರು.
ಕಾರ್ಯಕ್ರಮಾಧಿಕಾರಿ ಶಂಕರ ನಿಂಗನೂರ ಮಾತನಾಡಿ, ಉಳಿದ ದೇಶಗಳಿಗೆ ಹೋಲಿಸಿದರೆ ಭಾರತದಲ್ಲಿ ಯುವಕರ ಸಂಖ್ಯೆ ಅತ್ಯಂತ ಹೆಚ್ಚು. ಒಟ್ಟು ಜನಸಂಖ್ಯೆಯ ೬೫%ನಷ್ಟು ಭಾಗ ೩೫ ವರ್ಷದೊಳಗಿನವರೇ ಆಗಿದ್ದಾರೆ. ಅಂದರೆ ವಿಶ್ವದಲ್ಲಿ ಎರಡನೆಯ ಅತಿ ದೊಡ್ಡ ಜನಸಂಖ್ಯೆಯನ್ನು ಪಡೆದಂಥ ನಮ್ಮ ದೇಶದಲ್ಲಿ ಉದ್ಯೋಗದಲ್ಲಿರುವ ಯುವಕರ ಸಂಖ್ಯೆಯೂ ಹೆಚ್ಚೇ ಆಗಿರುವುದು. ಹೀಗಾಗಿ ನಮ್ಮ ದೇಶವನ್ನು ಯುವಶಕ್ತಿಯನ್ನು ಹೊಂದಿರುವ ರಾಷ್ಟ್ರ ಎಂದೂ ಹೇಳಬಹುದು. ಯುವಕರೆಂದರೆ ಪರಮಾಣು ಶಕ್ತಿಯಿದ್ದಂತೆ. ಅದರ ಧನಾತ್ಮಕವಾದಂಥ ಉಪಯೋಗವನ್ನು ಮಾಡಿಕೊಂಡರೆ ನಮ್ಮ ದೇಶಕ್ಕೆ ಉಪಯುಕ್ತವಾದಂಥ ಶಕ್ತಿ ಉತ್ಪನ್ನವಾಗುತ್ತದೆ. ಆದರೆ ಅದರ ಪ್ರತಿಕೂಲ ಉಪಯೋಗವನ್ನು ಮಾಡಿಕೊಂಡದ್ದಾದರೆ ಪರಮಾಣು ಬಾಂಬ್ ಕೂಡ ತಯಾರಾಗಬಹುದು! ಈ ನಮ್ಮ ದೇಶದ ಯುವಶಕ್ತಿಯು ದೇಶ ಹಾಗೂ ವಿದೇಶಗಳಲ್ಲಿ ತನ್ನ ಭಾರತಮಾತೆಯ ಪ್ರತಿಷ್ಠೆಯನ್ನು ಮೆರೆಸುವುದಕ್ಕಾಗಿ ತನ್ನ ಪಾತ್ರವನ್ನು ವಹಿಸುತ್ತಿದೆ. ಅನೇಕ ಯುವ ವಿಜ್ಞಾನಿಗಳು, ಖಗೋಲ ಶಾಸ್ತ್ರಜ್ಞರು, ಅಭಿಯಂತರು, ವೈದ್ಯರು ಪುರುಷರು, ಮಹಿಳೆಯರೆಂಬ ಭೇದವಿಲ್ಲದೆ ಹಗಲು ರಾತ್ರಿ ದುಡಿಯುತ್ತಿದ್ದಾರೆ ಎಂದು ಹೇಳಿದರು.
ಶಿಬಿರಾರ್ಥಿ ಲಕ್ಷ್ಮೀ ಕಲ್ಲೋಳಿ ನಿರೂಪಿಸಿದರು. ಪ್ರಿಯಾ ಹುಣಶ್ಯಾಳ ಸ್ವಾಗತಿಸಿದರು. ಶಿಲ್ಪಾ ಗದಾಡಿ ವಂಡಿಸಿದರು.
ಯುವಕರ ಪಾತ್ರವು ದೇಶದ ಅಭಿವೃದ್ಧಿಗೆ ಅತ್ಯಂತ ಮಹತ್ವದ್ದಾಗಿದೆ. ಅವರ ಶಕ್ತಿ ಮತ್ತು ಸೃಜನಶೀಲತೆಯನ್ನು ಸರಿಯಾಗಿ ಬಳಸಿಕೊಂಡರೆ, ಭಾರತವು ವಿಶ್ವದಲ್ಲಿ ಮುಂಚೂಣಿಯಲ್ಲಿರಬಹುದು. ಯುವಶಕ್ತಿಯನ್ನು ಸಕಾರಾತ್ಮಕವಾಗಿ ಬಳಸಿ ಶಿಕ್ಷಣ, ವಿಜ್ಞಾನ ಮತ್ತು ತಂತ್ರಜ್ಞಾನದಲ್ಲಿ ಹೆಚ್ಚಿನ ಪ್ರಗತಿಯನ್ನು ಸಾಧಿಸಬಹುದು. ಯುವಕರ ಶ್ರಮ ಮತ್ತು ದುಡಿಮೆಯಿಂದಲೇ ದೇಶದ ಭವಿಷ್ಯವನ್ನು ರೂಪಿಸಬಹುದು. ಯುವಶಕ್ತಿಯ ಸಮರ್ಥ ಬಳಕೆಯನ್ನು ಹೇಗೆ ಖಚಿತಪಡಿಸಿಕೊಳ್ಳಬಹುದು?