ಎಂಬಿ ಪಾಟೀಲ ಸಾಹೇಬರೆ ನೀವು ಮಾಡಿದ ಕೆಲಸಗಳಿಂದ ನೀವು ಇನ್ನೂ ಎತ್ತರ … ಎತ್ತರ …ಎತ್ತರಕ್ಕೆ ಹೋಗುವಿರಿ

Must Read

ಎರಡು ಮಾತಿಲ್ಲ. ನೀವು ಮೊನ್ನೆ ಪ್ರಕಟಿಸಿದ ಆಸ್ಪತ್ರೆ ಚಿಕಿತ್ಸೆಯಲ್ಲಿ ಶೇ.೭೦ ಕಡಿತ ಮಾಡಿದ್ದು ರಾಷ್ಟ್ರಕ್ಕೆ ಮಾದರಿಯಾಗಿದೆ.

ಪತ್ರಕರ್ತರ ಜೀವನದ ಬಗ್ಗೆ ನಿಮಗೆ ಚೆನ್ನಾಗಿ ಗೊತ್ತಿದೆ . ಇಂಥ ಕರೋನಾ ಸಂದಿಗ್ಧತೆಯಲ್ಲಿ ಪತ್ರಕರ್ತರಿಗೆ ಮತ್ತು ಅವರ ಕುಟುಂಬದವರಿಗೆ ತೊಂದರೆಯಾದರೆ ವಿಶೇಷವಾಗಿ ಆರೈಕೆಮಾಡಲು, ಪುಡಿಗಾಸಿನಲ್ಲಿ ಆರಾಮವಾಗಿ ಹೊರಬರಲು ಅನಕೂಲಮಾಡಿಕೊಡಿರಿ. ನಿಮ್ಮ ಉಪಕಾರ ನಾವುಗಳು ಇಟ್ಟುಕೊಳ್ಳುವುದಿಲ್ಲ ತೀರಿಸೆ ತಿರಿಸುತ್ತೇವೆ. ಹಿಂದಿನಿಂದಲೂ ನಮ್ಮೆಲ್ಲರಿಗೂ ರಕ್ಷಣೆ ನೀಡುತ್ತ ಬಂದಿರುವಿರಿ.

ಹಳೇಯ ನೆನಪು

ಹಿಂದೆ ಎಸ್ ಎಂ ಕೃಷ್ಣಾ ಅವರು ಪತ್ರಕರ್ತರೊಂದಿಗೆ ವಿಡಿಯೋ ಕಾನ್ಪರೆನ್ಸ್ ಮಾಡುವ ಪ್ರಸಂಗ ಬಂದಾಗ ರಾಜ್ಯದಲ್ಲಿ ಮೊದಲ ಬಾರಿ ನಿಮ್ಮ ಒಡೆತನದ ಇಂಜನೀಯರಿಂಗ್ ಕಾಲೇಜಿನಲ್ಲಿ ಕಾನ್ಪರನ್ಸ್ ಹಮ್ಮಿಕೊಂಡು, ಊಟ ಮಾಡಿಸಿ…… ಜಿಲ್ಲೆಯ ಪತ್ರಕರ್ತರನ್ನು ರಾಜ್ಯದಲ್ಲಿ ಮೆರೆಯುವ ಹಾಗೆ ಮಾಡಿದವರು ನೀವು.

ನಾವೆಲ್ಲರೂ ನಿಮ್ಮನ್ನು ನೀರಾವರಿ ಮಂತ್ರಿ …ಗೃಹ ಮಂತ್ರಿಯಾಗಿ ನೋಡಿದ್ದೇವೆ ….. ಮುಂದೆ ಮುಖ್ಯಮಂತ್ರಿಯಾಗಿ ನೂರಕ್ಕೆ ನೂರು ನೋಡುತ್ತೇವೆ ಎಂಬ ನಂಬಿಕೆ ಇದೆ.

ಈ ವಾರದೊಳಗೆ ಮಹಾಮಾರಿಗೆ ಪತ್ರಕರ್ತರನ್ನು ಕಳೇದುಕೊಂಡಿದ್ದೇನೆ ಪತ್ರಕರ್ತ ಕುಟುಂಬದವರ ತೊಂದರೆ ಕಂಡು ಹುಚ್ಚಾಗಿದ್ದೇನೆ . ” ನಮ್ಮವರಿಗೆ ಬರೆಯಲು ಕೈಯಿದೆ ಬೇಡಲು ಬಾಯಿಲ್ಲ ”


ಪಂಡಿತ್ ಯಮಪುರಿ
ಸಿಂದಗಿ

Latest News

ಜಲಜೀವನ ಮಿಶನ್ ಸಫಲಗೊಳಿಸಲು ಶಾಸಕ ಮನಗೂಳಿ ಕರೆ

ಸಿಂದಗಿ; ಜಲಜೀವನ ಮಿಶನ್ ಯೋಜನೆಯಡಿ ಪ್ರತಿಯೊಬ್ಬರಿಗೂ ಶುದ್ಧ ಕುಡಿಯುವ ನೀರಿನ ಯೋಜನೆ ಕಲ್ಪಿಸಿಕೊಡುವಲ್ಲಿ ಕೇಂದ್ರ ಹಾಗೂ ರಾಜ್ಯ ಸರಕಾರ ಸಾಕಷ್ಠು ಹಣ ವ್ಯಯ ಮಾಡಿದೆ ಆದರೆ...

More Articles Like This

error: Content is protected !!
Join WhatsApp Group