spot_img
spot_img

ಕಥೆಗಳಿಗೆ ಆಹ್ವಾನ

Must Read

- Advertisement -

ಕನ್ನಡಕ್ಕೆ ಜ್ಞಾನಪೀಠ ಪ್ರಶಸ್ತಿ ತಂದುಕೊಟ್ಟ ಮೇರು ಸಾಹಿತಿ ದಿ.ಡಾ.ಕೆ ಶಿವರಾಮ ಕಾರಂತ ಅವರ ೧೨೦ ನೇ ಜನ್ಮದಿನ ಆಚರಣೆಯ ಅಂಗವಾಗಿ ಅಖಿಲ ಭಾರತೀಯ ಕನ್ನಡ ಸಾಹಿತ್ಯ ಹಾಗೂ ಸಾಂಸ್ಕೃತಿಕ ಪರಿಷತ್ ವತಿಯಿಂದ ರಾಜ್ಯ ಮಟ್ಟದ ಕಥಾ ಸ್ಪರ್ಧೆಯನ್ನು ಹಮ್ಮಿಕೊಳ್ಳಲಾಗಿದೆ ಎಂದು ಪರಿಷತ್ ನ ಪ್ರಕಟಣೆಯಲ್ಲಿ ತಿಳಿಸಲಾಗಿದೆ.

ಅಸಕ್ತ ಕಥೆಗಾರರು ಸ್ವರಚಿತ ಮೂರು ಪುಟವಿರುವ ಕಥೆಯನ್ನು ಹಸ್ತಪ್ರತಿ ಅಥವಾ ಡಿಟಿಪಿ ಮಾಡಿಸಿರುವ ಪ್ರತಿಯನ್ನು ಇದೇ ಏಪ್ರಿಲ್ ೩೦ ರೊಳಗೆ ” ಡಾ.ಭೇರ್ಯ ರಾಮ್ ಕುಮಾರ್, ಅಧ್ಯಕ್ಷರು, ಅಖಿಲ ಭಾರತೀಯ ಕನ್ಮಡ ಸಾಹಿತ್ಯ ಹಾಗೂ ಸಾಂಸ್ಕೃತಿಕ ಪರಿಷತ್, ಅರ್ಕೇಶ್ವರ ನಗರ ಬಡಾವಣೆ, ಕೆ ಆರ್ ನಗರ ಟೌನ್ – ೫೭೧ ೬೦೨, ಮೈಸೂರು ಜಿಲ್ಲೆ ” ಈ ವಿಳಾಸಕ್ಕೆ ಕಳಿಸಬೇಕು.

ಕಥೆಗಳು ಯಾವುದೇ ಜಾತಿ, ಧರ್ಮಕ್ಕೆ ಧಕ್ಕೆ ತರುವ ವಿಷಯ ಹೊಂದಿರಬಾರದು, ಯಾವುದೇ ಪ್ರಚೋದನಾತ್ಮಕ ವಿಷಯವಿರಬಾರದು, ಸ್ವತಂತ್ರವಾಗಿರಬೇಕು. ಆಯ್ಕೆಯಾಗುವ ಕಥೆಗಳನ್ನು “ಡಾ.ಕೆ ಶಿವರಾಮ ಕಾರಂತ – ೧೨೦” ಕೃತಿಯಲ್ಲಿ ಪ್ರಕಟಿಸಲಾಗುವುದು ಎಂದು ಪ್ರಕಟಣೆಯಲ್ಲಿ ತಿಳಿಸಲಾಗಿದೆ.

- Advertisement -
- Advertisement -

Latest News

ದಿನಕ್ಕೊಬ್ಬ ಶರಣ ಮಾಲಿಕೆ

ಕಿನ್ನರಿ ಬ್ರಹ್ಮಯ್ಯ ........................................... 12ನೇ ಶತಮಾನದ ಬಸವಾದಿ ಶಿವಶರಣರ ಕೀರ್ತಿವಾರ್ತೆಯನ್ನು ಕೇಳಿ ಪ್ರಭಾವಿತರಾಗಿ ನಾಡು ಹೊರನಾಡಿನಿಂದ ಅನೇಕ ಜನ ಶರಣರು ಕಲ್ಯಾಣಕ್ಕೆ ಬರಹತ್ತಿದರು. ಬಸವಣ್ಣನವರ ಸಮಕಾಲೀನರಾಗಿದ್ದ ಶರಣರಾದ ಗುಜರಾತದಿಂದ...
- Advertisement -

More Articles Like This

- Advertisement -
close
error: Content is protected !!
Join WhatsApp Group