- Advertisement -
ಲಿಂಗಾಯತ ಮಹಿಳಾ ಸಮಾಜದ ಬೆಳ್ಳಿ ಹಬ್ಬ ಸಂಭ್ರಮ ನಿಮಿತ್ತ ಸೋಮವಾರ ದಿ. 15 ರಂದು ಮುಂಜಾನೆ 10.30 ಗಂಟೆಗೆ ಜೆ.ಎನ್.ಎಮ್.ಸಿ. ಯ ಜೀರಿಗೆ ಸಭಾಂಗಣದಲ್ಲಿ ವೈವಿಧ್ಯಮಯ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿದೆ.
ದಿವ್ಯ ಸಾನ್ನಿಧ್ಯ ಪೂಜ್ಯ ಮಾತೆ ವಾಗ್ದೇವಿ ತಾಯಿ,ಅಧ್ಯಕ್ಷತೆಯನ್ನು ಮಾಜಿ ಸಚಿವೆ ಡಾ.ಲೀಲಾವತಿ ಪ್ರಸಾದ ಹಾಗೂ ಅತಿಥಿಗಳಾಗಿ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಅ ಭಿವೃದ್ದಿ ಸಚಿವೆ ಮಾನ್ಯ ಶ್ರೀಮತಿ ಶಶಿಕಲಾ ಜೊಲ್ಲೆ ಯವರು ಆಗಮಿಸಿ ಮಹಿಳಾ- ಸಂಗಮ ಕೃತಿ ಲೋಕಾರ್ಪಣೆ ಮಾಡುವರು.
ಶ್ರೀಮತಿ ಗುರಮ್ಮಾ ಸಿದ್ದಾರೆಡ್ಡಿ ಅವರ ಗೌರವ ಉಪಸ್ಥಿತಿಯಲ್ಲಿ ಸದಸ್ಯರಿಂದ ಸಾಂಸ್ಕೃತಿಕ ಕಾರ್ಯಕ್ರಮ ನಡೆಯಲಿವೆ ಎಂದು ಪ್ರಕಟಣೆಯಲ್ಲಿ ತಿಳಿಸಲಾಗಿದೆ