Homeಲೇಖನಇಂದು ಕನ್ನಡದ ಖ್ಯಾತ ಕತೆಗಾರ್ತಿ ಶ್ರೀಮತಿ ಶಾಂತಾದೇವಿ ಕಣವಿಯವರ ಜನ್ಮ ದಿನ

ಇಂದು ಕನ್ನಡದ ಖ್ಯಾತ ಕತೆಗಾರ್ತಿ ಶ್ರೀಮತಿ ಶಾಂತಾದೇವಿ ಕಣವಿಯವರ ಜನ್ಮ ದಿನ

ಶಾಂತಾದೇವಿ ಕಣವಿ ಇವರು ೧೯೩೩ರಲ್ಲಿ ವಿಜಯಪುರದಲ್ಲಿ ಜನಿಸಿದರು. ಧಾರವಾಡದ ಪ್ರಸಿದ್ಧ ಕವಿ ಚನ್ನವೀರ ಕಣವಿ ಇವರ ಪತ್ನಿ

 

ಜನನ: ೧೨-೦೧-೧೯೩೩

ಸಾಹಿತ್ಯ

ಉತ್ತರ ಕರ್ನಾಟಕದ ದೇಸಿ ಸೊಬಗು, ಧ್ವನಿಪೂರ್ಣ ಭಾಷೆ, ತಂತ್ರಗಾರಿಕೆ, ಕಸರತ್ತಿಲ್ಲದ ಬರವಣಿಗೆ ವೈಶಿಷ್ಟ್ಯ. ಸಂಜೆಮಲ್ಲಿಗೆ, ಬಯಲು-ಆಲಯ, ಮರು ವಿಚಾರ, ಜಾತ್ರೆ ಮುಗಿದಿತ್ತು, ಕಳಚಿಬಿದ್ದ ಪೈಜಣ, ನೀಲಿಮಾತೀರ – ಕಥಾಸಂಕಲನಗಳು. ಅಜಗಜಾಂತರ-ಹರಟೆಗಳ ಸಂಗ್ರಹ. ನಿಜಗುಣ ಶಿವಯೋಗಿ-ಮಕ್ಕಳ ಪುಸ್ತಕ ಪ್ರಕಟಿತ. ಬಯಲು-ಆಲಯ ಕಥಾಸಂಕಲನಕ್ಕೆ ೧೯೭೪ರ ಸಾಹಿತ್ಯ ಅಕಾಡಮಿ ಬಹುಮಾನ. ೧೯೮೭ರಲ್ಲಿ ಅಕಾಡಮಿ ಪ್ರಶಸ್ತಿ ಪುರಸ್ಕಾರ. ಹಲವಾರು ಕಥೆಗಳು ಹಿಂದಿ, ಇಂಗ್ಲಿಷ್, ಮಲೆಯಾಳಂಗೂ ಭಾಷಾಂತರದ ಹೆಗ್ಗಳಿಕೆ.

ಕಥಾಸಂಕಲನ

  • ಸಂಜೆಮಲ್ಲಿಗೆ
  • ಬಯಲು—ಆಲಯ
  • ಮರುವಿಚಾರ
  • ಜಾತ್ರೆ ಮುಗಿದಿತ್ತು
  • ಕಳಚಿ ಬಿದ್ದ ಪೈಜಣ
  • ನೀಲಿ ಮಾ ತೀರ
  • ಗಾಂಧೀ ಮಗಳು

ಲಲಿತ ಪ್ರಬಂಧ: ಅಜಗಜಾಂತರ

ಮಕ್ಕಳ ಸಾಹಿತ್ಯ: ನಿಜಗುಣಿ ಶಿವಯೋಗಿ

ಸಂಪಾದನೆ: ಪ್ರಶಾಂತ

ಪುರಸ್ಕಾರ: ೧೯೭೪ರಲ್ಲಿ ಕರ್ನಾಟಕ ಸಾಹಿತ್ಯ ಅಕಾಡೆಮಿಯ ಬಹುಮಾನ ಹಾಗು ೧೯೮೭ರಲ್ಲಿ ಗೌರವ ಪ್ರಶಸ್ತಿ ದೊರೆತಿವೆ.

ವಿದಾಯ: ೨೨-೦೫-೨೦೨೦ ಶುಕ್ರವಾರದಂದು ಬೆಳಗಾವಿಯಲ್ಲಿ ನಿಧನರಾದರು

ಮಾಹಿತಿ ಕೃಪೆ: ವಿಕಿಪೀಡಿಯ
ಸಂಗ್ರಹ: ಶ್ರೀ ಇಂಗಳಗಿ ದಾವಲಮಲೀಕ

RELATED ARTICLES

Most Popular

error: Content is protected !!
Join WhatsApp Group