*ಕನ್ನಡ ರಾಜ್ಯೋತ್ಸವ ನಿಮಿತ್ಯ ನಿಪ್ಪಾಣಿ ಪರಿಸರದಲ್ಲಿ ಕನ್ನಡ ಬೆಳೆಸಿದ ಹಿರಿಯರ ಸ್ಮರಣೆಯ ಲೇಖನ*
💛🇧🇯🇧🇯❤️❤️🇧🇯🇧🇯💛
ಗಡಿನಾಡಿನ ಹೆಬ್ಬಾಗಿಲು ನಿಪ್ಪಾಣಿ ನಗರವು ಕನ್ನಡದ ಅವಿಭಾಜ್ಯ ಅಂಗ.ಈ ನಗರದಲ್ಲಿ ಕನ್ನಡದ ರಥ ಎಳೆದ ಹಿರಿಯರಲ್ಲಿ ದಿವಂಗತ ಪರಗೌಡ ಶಿವಗೌಡ ಪಾಟೀಲ ಒಬ್ಬರು.ಶ್ರೀಯುತರಿಗೆ ನನ್ನ ಭಕ್ತಿಯ ಪ್ರಣಾಮಗಳು.
ಶ್ರೀಯುತ ಪರಗೌಡ ಪಾಟೀಲರು ೧೯೦೧ರಲ್ಲಿ ಚಿಂಚಣಿ ಗ್ರಾಮದ ಬಸವತತ್ವ ಮನೆತನದ ಆದಶ೯ ದಂಪತಿಗಳಾದ ಶಿವಗೌಡ ಮತ್ತು ಬಸವ್ವ ತಾಯಿಯ ಉದರದಲ್ಲಿ ಜನಿಸಿದರು.ಬಾಲ್ಯಾವಸ್ಥೆಯಲ್ಲಿಯೇ ತಂದೆಯನ್ನು ಕಳೆದುಕೊಂಡ ಪರಗೌಡರು ತಾಯಿ ಪ್ರೀತಿ ವಾತ್ಸಲ್ಯದ ಪುತ್ರರಾಗಿ ಬೆಳೆದರು ೩ ನೇ ತರಗತಿಯ ವರೆಗೆ ತವರಿನಲ್ಲಿ ಮೂಲ್ಕಿ ಶಿಕ್ಷಣ ಪಡೆದ ಪರಗೌಡರು ಕಟ್ಟಾ ಕನ್ನಡದ ಅನುಯಾಯಿ.ತಾಯಿಯ ಆದಶ೯ ಗುಣಗಳನ್ನು ಮೈಗೂಡಿಸಿಕೊಂಡು ಬೆಳೆದ ಇವರದೂ ಸಾಥ೯ಕ ಬದುಕು.ಬಾಲ್ಯದ ೧೦ ನೇ ವಯಸ್ಸಿನಲ್ಲಿದ್ದಾಗ ಚಿಂಚಣಿ ಗ್ರಾಮದಲ್ಲಿ ಪ್ಲೇಗ್ ರೋಗ ಬಂದಿತು ಸಾವಿರಾರು ಜೀವಹಾನಿಯಾಗಿದ್ದವು ದಿಟ್ಟ ಧೈಯ೯ಶಾಲಿಗಳಾಗಿದ್ದ ಪರಗೌಡನೆಂಬ ಬಾಲಕ ಶವಗಳ ಸಾಮೂಹಿಕ ಅಂತ್ಯಸಂಸ್ಕಾರದಲ್ಲಿ ಪಾಲ್ಗೊಂಡು ಸಾಹಸ ಮೆರೆದಿದ್ದ.ಕಡುಬಡತನದಲ್ಲಿ ತಾಯಿಯ ಜೊತೆಗೂಡಿ ಬದುಕಿನ ಬಂಡಿ ಎಳೆಯುತ್ತಾ ನಿಪ್ಪಾಣಿ ಮಹಾಲಿಂಗಪೂರಗಳಿಗೆ ತೆರಳಿ ಬೆಲ್ಲ ಜೋಳದ ವ್ಯಾಪಾರ ಮಾಡತೊಡಗಿದ.ಯೌವನದ ಹೊಸ್ತಿಲಲ್ಲಿ ಧಮ೯ಪತ್ನಿಯಾಗಿ ನೀಲವ್ವ ತಾಯಿಯ ಕೈಹಿಡಿದು ಬಾಳಯಾತ್ರೆ ಮುಂದುವರೆಸಿದರು.ಮುಂದೆ ೧೯೪೮ ರ ಸುಮಾರಿಗೆ ನಿಪ್ಪಾಣಿ ಗೆ ಹೆಜ್ಜೆ ಇಟ್ಟ ಪರಗೌಡರು ಪ್ರಸಿದ್ದ ವ್ಯಾಪರಸ್ಥರಾದ ಶ್ರೀ ಎಂ.ಜಿ .ಕದಮರವರ ಮಾಗ೯ದಶ೯ನದಲ್ಲಿ ನಿಪ್ಪಾಣಿ ಯಲ್ಲಿ ಅಡತೆ ಅಂಗಡಿ ತೆರೆದು ಸ್ಥಾನಿಕರಾದರು.ಬರುಬರುತ್ತಲೇ ಕೋಠಿವಾಲೆ ,ಬಾಗೇವಾಡಿ ಬಂಧುಗಳ ಮತ್ತು ಸಂಗಡಿಗರ ಸಂಪಕ೯ ಬೆಳೆಯತೊಡಗಿತು.ಸಂಪಕ೯ ಬಾಂಧವ್ಯದ ಬೆಸುಗೆಯಾಗಿ ಕನ್ನಡದ ಮನಸ್ಸುಗಳೆಲ್ಲಾ ಒಂದೆಡೆ ಬರಲು ಪ್ರೇರೇಪಿಸಿತು.
೧೯೫೬ ರಲ್ಲಿ ನಿಪ್ಪಾಣಿಯಲ್ಲಿ ಭಾಷಾ ದಂಗೆಯಾದಾಗ ಪರಗೌಡರ ಆದಿಯಾಗಿ ರುದ್ರಪ್ಪ ಕೋಠಿವಾಲೆ ಮತ್ತು ೧೨ ಜನ ಸಂಗಡಿಗರನ್ನು ಬಂಧಿಸಲಾಗಿತ್ತು ಇಲ್ಲಿಂದಲೇ ಕನ್ನಡದ ಕಿಚ್ಚು ಹೆಚ್ಚಾಯಿತು.ಮನಮನಗಳಲ್ಲಿ ಕನ್ನಡದ ಜ್ವಾಲೆ ಹೊತ್ತಿತು.೧೯೬೦ ರಿ ಸುಮಾರಿಗೆ ಕನ್ನಡ ಮಕ್ಕಳಿಗೆ ಶಿಕ್ಷಣ ದೊರೆಯಲಿ ಎನ್ನುವ ಉದ್ದೇಶದಿಂದ ದಿ ರುದ್ರಪ್ಪ ಕೋಠಿವಾಲೆ ,ಬಸವಪ್ರಭು ನೇಷ್ಠಿ ಅವರ ಸಾರಥ್ಯದಲ್ಲಿ ಕನ್ನಡ ಬಳಗ ಕಟ್ಟಿ ಶಿಕ್ಷಣ ಸಂಸ್ಥೆ ಸ್ಥಾಪಿಸಲು ಇವರು ಕೂಡಾ ಕಾರಣರಾದರು.
ನಿಪ್ಪಾಣಿಯ ವ್ಯಾಪಾರಸ್ಥ ದೇವಚಂದ ಶಹಾ ಅವರೊಂದಿಗೆ ಒಡನಾಟ ಹೊಂದಿದ್ದ ಇವರು ಭಾಷಾಬಾಂಧವ್ಯದ ರೂಪಕವೆಂಬಂತೆ ಕಾಯಕ ಮಾಡಿದವರು.ಗಡಿ ಸಮಸ್ಯೆಯ ಮಹಾಜನ ವರದಿ ಸಿದ್ದಗೊಳ್ಳುವ ಸಂದಭ೯ದಲ್ಲಿ ನಿಪ್ಪಾಣಿ ಕನಾ೯ಟಕದಲ್ಲಿ ಉಳಿಯಬೇಕು ಎಂದು ಪರಿಸರದ ಜನರಿಂದ ವರದಿ ಬರೆಸಿ ದಿ.ಕೋಠಿವಾಲೆ ಅವರ ಜೊತೆಗೂಡಿ ಮಹಾಜನ ಆಯೋಗಕ್ಕೆ ಸಲ್ಲಿಸಿದ್ದರು.
ತಮ್ಮ ಮನೆಯಲ್ಲಿ ದಿ ರುದ್ರಪ್ಪ ಕೋಠಿವಾಲೆ,ಡಾ.ಸಖಾರಾಮ ಪಣದೆಯವರ ಜೊತೆಗೂಡಿ ಪ್ರತಿದಿನ ನಿಪ್ಪಾಣಿ ಹಿರಿಯರನ್ನು ಒಗ್ಗೂಡಿಸಿ ನಿರಂತರ ಚಚೆ೯ ನಡೆಸಿ ಕನ್ನಡದ ಅಳಿವು ಉಳಿವಿಗಾಗಿ ಶ್ರಮಿಸಿದ್ದಾರೆ ಹಲವಾರು ವಿವಾದಗಳನ್ನು ಸಮರಸದಿಂದ ಬಗೆಹರಿಸಿ ಕನ್ನಡ ಬಳಗವನ್ನು ಗಟ್ಟಿಗೊಳಿಸಿದವರು ದಿ ಪರಗೌಡರು.ಮಹಾದೇವ ಮಂದಿರ ಕನ್ನಡ ಶಾಲೆಗೆ ಜೀವತುಂಬಿ ಕನ್ನಡದ ಕೋಟೆ ಕಟ್ಟಿ ಬೆಳೆಸಿದರು.ಸಮಾಧಿ ಮಠದ ಬೋಡಿ೯ಂಗ ಸ್ಥಾಪಿಸಲು ನೆರವಾಗಿ ವೇದಾಂತ ಕೇಸರಿ ಪ.ಪೂ ಮಲ್ಲಿಕಾರ್ಜುನ ಮಹಾಸ್ವಾಮಿಗಳವರು ಶ್ರೀ ಮಠದಲ್ಲಿ ಹಮ್ಮಿಕೊಂಡಿದ್ದ ಕೋಟಿ ಜಪ ಯಜ್ಞದಲ್ಲಿ ಮುಂದಾಳತ್ವ ವಹಿಸಿ ಕೆಲಸ ಮಾಡಿದ್ದಾರೆ.
ತಮ್ಮ ಮನೆಯ ಮುಂದೆ ಕನ್ನಡ ನಾಮಫಲಕ ಹಾಕಿದ್ದ ಪರಗೌಡರು ದಿಟ್ಟ ಕನ್ನಡದ ಜಟ್ಟಿ.೧೯೮೪ ರಲ್ಲಿ ನಡೆದ ಭಾಷಾ ದಂಗೆಯಲ್ಲಿ ಆ ನಾಮಫಲಕ ಕಿತ್ತೆಸೆದಾಗ ಕನ್ನಡದ ಬಾವುಟ ಹಿಡಿದು ಕನ್ನಡದ ವೀರಭದ್ರನಾಗಿ ಆಭ೯ಟಿಸಿ ಕನ್ನಡದ ಕೆಲಸಕ್ಕೆ ಮತ್ತಷ್ಟು ಸಕ್ರಿಯರಾಗಿದ್ದರು ಎಂದು ಅವರ ಮೊಮ್ಮಗ ಡಾ ಎಸ್ ಆರ್ ಪಾಟೀಲ್ ನೆನೆದು ಗದ್ಗದಿತರಾಗುತ್ತಾರೆ.ಜಿ.ಆಯ್ ಬಾಗೇವಾಡಿ ಮಹಾವಿದ್ಯಾಲಯದ ಏಳಿಗೆಗಾಗಿ ಬಾಗೇವಾಡಿ ಬಂಧುಗಳೊಂದಿಗೆ ಶ್ರಮಿಸಿ ಮಹಾವಿದ್ಯಾಲಯದ ಪ್ರಗತಿಗೆ ದೇಣಿಗೆ ನೀಡಿ ಬೆಳೆಸಿದವರಲ್ಲಿ ಇವರು ಕೂಡಾ ಒಬ್ಬರು.ತಮ್ಮ ಮಕ್ಕಳಿಗೂ ಕನ್ನಡವ ಕಲಿಸಿ ಕನ್ನಡದ ದೀಕ್ಷೆ ಕೊಟ್ಟ ಕನ್ನಡದ ಕಟ್ಟಾಳು ಇವರು.ವಯಸ್ಸಾಗುತ್ತಲೇ ವಿವಿಧ ಸಂಘಸಂಸ್ಥೆಗಳ ಪದಭಾರ ತಮ್ಮ ಮಗ ಎಸ್.ಪಿ.ಪಾಟೀಲರಿಗೆ ಹೊರಿಸಿ ವಿಶ್ರಾಂತಿಯತ್ತ ಸರಿದರು.ತಂದೆಯ ಹಾದಿಯಲ್ಲಿಯೇ ಅವರು ಕೂಡಾ ಕನ್ನಡದ ಹಿತ ಕಾಯ್ದಿದ್ದಾರೆ.ಸದಾ ಕನ್ನಡದ ಚಿಂತೆ ಮಾಡಿ ಬಸವ ಪುತ್ಥಳಿ,ಬಸವ ಪೋಲೀಸ್ ಠಾಣೆ ಸ್ಥಾಪಿಸುವಲ್ಲಿ ಇವರ ಮನೆತನದ ಶ್ರಮವಿದೆ.
ಕನ್ನಡ ಕಾಯುವ ದೀಕ್ಷೆಯ ಹೊತ್ತು ವೃತ್ತಿಯ ಜೊತೆಯಲ್ಲಿ ಕನ್ನಡದ ಬುತ್ತಿ ಕಟ್ಟುತ್ತಾ ಹಲವಾರು ಪೂಜ್ಯರ ಸಾಹಿತಿಗಳ ಒಡನಾಟದೊಂದಿಗೆ ಕನ್ನಡದ ಕಾಯಕವ ಮಾಡಿ ಮರಾಠಿಗರ ಮನಗೆದ್ದ ಕನ್ನಡದ ಕಾಯಕಯೋಗಿಯಾಗಿ ಸಾಮರಸ್ಯದ ಸರದಾರನಾಗಿ ನಿಪ್ಪಾಣಿ ಹಿರಿಯರ ಒಲವಿನ ಗೆಳೆಯನಾಗಿ ಕನ್ನಡದ ಹಿತಚಿಂತಕನಾಗಿ ಕನ್ನಡವ ಬೆಳೆಸಿ ತಾನು ಬೆಳೆಯುತ್ತಾ ಸುದೀಘ೯ ೮೮ ವಷ೯ದ ಸಾಥ೯ಕ ಬದುಕಿಗೆ ವಿರಾಮ ನೀಡಿ ೧೯೮೮ ರಲ್ಲಿ ಲಿಂಗದೊಳಗಾದರು.ಇಂತಹ ಹಿರಿಯರ ಪರಿಶ್ರಮದಿಂದ ಇಂದು ಕನ್ನಡ ಹೆಮ್ಮರವಾಗಿ ಬೆಳೆದು ನಿಪ್ಪಾಣಿ ಕನ್ನಡದ ಕೋಟೆಯಾಗಿದೆ.ಇಂತಹ ಹಿರಿಯರನ್ನು ನೆನೆದು ಯುವಜನತೆಗೆ ಪರಿಚಯಿಸುವುದು ಔಚಿತ್ಯವೆನಿಸುತ್ತದೆ.ಕನ್ನಡ ರಾಜ್ಯೋತ್ಸವ ಈ ಸಂದಭ೯ದಲ್ಲಿ ಅವರನ್ನು ಭಕ್ತಿಯಿಂದ ನೆನೆದು ಗೌರವದಿಂದ ಸ್ಮರಿಸೋಣ
ಮಾಹಿತಿ
*ಡಾ.ಎಸ್.ಆರ್.ಪಾಟೀಲ*
*ಶ್ರೀ ಎಸ್.ಎಂ.ಪುರಾಣಿಕಮಠ*
*ಶ್ರೀ ಮಾರುತಿ ಕೊಣ್ಣುರಿ*
ಲೇಖಕ:
*ಪ್ರೋ.ಮಿಥುನ ಅಂಕಲಿ*
ಖಡಕಲಾಟ
🇧🇯🇧🇯🇧🇯💛❤️🇧🇯🇧🇯🇧🇯
ಸಹಯೋಗ:
*ಕನ್ನಡ ಸಾಹಿತ್ಯ ಪರಿಷತ್ತು*
*ಶರಣ ಸಾಹಿತ್ಯ ಪರಿಷತ್ತು*
*ಗಡಿನಾಡು ಕನ್ನಡ ಬಳಗ*
*ನಿಪ್ಪಾಣಿ*