Homeಸುದ್ದಿಗಳುಕರೋನಾದ ಕರಿನೆರಳಲ್ಲಿ ಕಮರಿದ ಹೋಳಿ ಹಬ್ಬ

ಕರೋನಾದ ಕರಿನೆರಳಲ್ಲಿ ಕಮರಿದ ಹೋಳಿ ಹಬ್ಬ

ವರದಿ: ಪಂಡಿತ ಯಂಪೂರೆ

ಸಿಂದಗಿ: ಭಾರತೀಯ ಸಂಸ್ಕೃತಿಯಲ್ಲಿ ಹೋಳಿ ಹಬ್ಬಕ್ಕೆ ಒಂದು ಇತಿಹಾಸವೇ ಇದೇ ರಾಜಮಹಾರಾಜರು ವರ್ಷವಿಡೀ ಆಗಿಹೋದ ಎಲ್ಲ ಕೆಟ್ಟ ವಿಚಾರಗಳನ್ನು, ಕೆಟ್ಟ ಆಲೋಚನೆಗಳನ್ನು ಕಾಮನ ಕೆಂಡದಲ್ಲಿ ಸುಟ್ಟು ಹಲವು ಬಣ್ಣಗಳಿಂದ ಹೊಸ ವಿಚಾರಗಳನ್ನು ಜಾರಿಗೆ ತಂದು ಮುಂದೆ ಯಾವ ಅವಘಡಗಳು ಸಂಭವಿಸದಿರಲಿ ಒಬ್ಬರನ್ನೊಬ್ಬರು ಆತ್ಮೀಯತೆಯಿಂದ ರಂಗು ರಂಗಿನ ಗುಲಾಲುಗಳನ್ನು ಎರಚಿ ಸಂಭ್ರವಿಸುವದೇ ಹೋಳಿ ಹಬ್ಬದ ವಿಶೇಷತೆಯಿದೆ ಆದರೆ ಸತತ 2 ವರ್ಷಗಳಿಂದ ಆವರಿಸಿದ ಕರೋನಾ ಭೀತಿಯಲ್ಲಿ ಸಂಭ್ರಮಕ್ಕೆ ತೆರೆಬಿದ್ದು ಕರಿನೆರಳಲ್ಲಿ ಕಮರಿಹೊದಂತಾಗಿದೆ.

ಹೌದು. ಉತ್ತರ ಕರ್ನಾಟಕ ಶೈಲಿಯ ಕಾಮನ ಹಬ್ಬದ ಜಾನಪದ ಹಾಡುಗಳನ್ನು ಹಾಡುತ್ತಾ ಮನೆ ಮನೆಗೆ ತೆರಳಿ ಕುಳ್ಳು ಕಟ್ಟಿಗೆ ಕೇಳುತ್ತ ಹಾಸ್ಯವನ್ನು ಚೆಲ್ಲುತ್ತ ಊರು ಊರು ತಿರುಗಾಡಿ ಸುಟ್ಟುಗೊಂಡು ಸತ್ತಾನ್ರೋಪ್ಪಾ ನಾ ಹ್ಯಾಂಗ ಮಾಡ್ಲೆರಪ್ಪಾ, ಜಲ್ದಿ ಜಲ್ದಿ ಕಟಿಗಿ ಕುಳ್ಳು ಕೊಡ್ರೋಪ್ಪೋ ಇಂತಹ ಅನೇಕ ಒಡಪುಗಳನ್ನು ಹೇಳುತ್ತ ಸುಮಾರು 15 ದಿನಗಳಿಂದ ಯುವಕರು ಮಕ್ಕಳಾದಿಯಾಗಿ ಮನೆ ಮನೆಗೆ ತೆರಳಿ ತಂದಿರುವ ಕಟ್ಟಿಗೆ ಕುಳ್ಳುಗಳನ್ನು ಒಂದೆಡೆ ಸಂಗ್ರಹಿಸಿ ಹೋಳಿ ಹುಣ್ಣಿಮೆ ದಿನದ ರಾತ್ರಿ ಕಾಮನ ದಹನಕ್ಕೆ ತಯಾರು ಮಾಡಿ ಮಹಿಳೆಯರು ಮನೆಯಲ್ಲಿ ತಯಾರಿಸಿದ ಗೆಣಸಿನ ಹೋಳಿಗೆಯ ನೈವೇದ್ಯವನ್ನು ತಂದು ಕಾಮಣ್ಣನಿಗೆ ಪೂಜೆ ಸಲ್ಲಿಸಿದ ನಂತರ ಯುವಕರೆಲ್ಲಾ ಸೇರಿ ಹ್ಯಾಂಗ್ ಸತ್ಯೋ ಯಪ್ಪಾ ಎಂದು ಬೊಬ್ಬೆ ಹೊಡೆಯುತ್ತಾ ಕಾಮಣ್ಣನ ಮಕ್ಕಳು ಕಳ್ಳನನ್ನ ಮಕ್ಕಳು ಏನೇನು ಕದ್ದರು ಕಟಿಗಿ ಕುಳ್ಳ ಕದ್ದರು ಎನ್ನುತ್ತಾ 5 ಸುತ್ತು ಹಾಕಿ ಕಾಮಣ್ಣನಿಗೆ ರಾತ್ರಿ 12 ಗಂಟೆಗೆ ಕಾಮ ದಹನ ಮಾಡಿದರು.

ಬೆಳಗಿನ ಜಾವ ಕಾಮಣ್ಣನನ್ನು ಸುಟ್ಟ ಅಗ್ನಿಯ ಕೆಂಡದ ತುಕಡಿಗಳನ್ನು ಮಹಿಳೆಯರು ತಮ್ಮ ಮನೆಗೆ ತೆಗೆದುಕೊಂಡು ಹೋಗಿ ಅದರಿಂದಲೇ ತಮ್ಮ ಮನೆಯ ಒಲೆಯಲ್ಲಿ ಹಾಕಿ ತಮ್ಮ ದಿನದ ಕಾಯಕವನ್ನು ಪ್ರಾರಂಭಿಸಿದರು.

ಇಡೀ ವಿಶ್ವವನ್ನೇ ಭಯಭೀತಿಯಲ್ಲಿ ಜೀವಿಸುವಂತೆ ಮಾಡಿದ ಕೋರೋನ ಎಂಬ ಮಹಾಮಾರಿ ಕಾಯಿಲೆ ಈ ಬಾರಿಯ ಹೋಳಿಯ ಬಣ್ಣದ ಹಬ್ಬಕ್ಕೆ ಕರಿ ಛಾಯೇ ಮೂಡಿಸಿತ್ತು. ಇದನ್ನೇ ಮನದಲ್ಲಿಟ್ಟುಕೊಂಡು ಕೆಲ ಪೋಷಕರು ತಮ್ಮ ಮಕ್ಕಳಿಗೆ ಬಣ್ಣದ ಓಕುಳಿಯನ್ನು ಆಡಲು ನಿರಾಕರಿಸಿದ್ದರಿಂದ ಮಕ್ಕಳೆಲ್ಲಾ ಸಪ್ಪೆ ಮೋರೆ ಹಾಕಿಕೊಂಡು ಕುಳಿತಿರುವುದು ಅಲ್ಲಲ್ಲಿ ಕಂಡು ಬಂತು. ಇನ್ನೂ ಕೆಲವರು ವಾರ್ನೆಸ್, ಸುನೇರಿಗಳಂತಾ ಮಾರಕ ಕೆಮಿಕಲ್ ಬಣ್ಣಗಳನ್ನು ಕೈ ಬಿಟ್ಟು ಕೇವಲ ನೈಸರ್ಗಿಕ ಬಣ್ಣಗಳಲ್ಲಿ ಯುವಕರು, ವಯಸ್ಕರು, ಪುಟಾಣಿ ಮಕ್ಕಳೆನ್ನದೇ ಪರಸ್ಪರ ಎರಚುತ್ತ ಸುಂದರ ಹಬ್ಬವನ್ನು ತಾಲೂಕಿನ ಜನರು ಅತೀ ಸಂಭ್ರಮದಿಂದ ಬೀದಿ ಬೀದಿಗಳಲ್ಲಿ ಯುವಕರು ಅಣಕು ಶವದ ಗೊಂಬೆಯನ್ನು ತಯಾರಿಸಿ ಹಲಗೇ ಬಾರಿಸುತ್ತಾ, ಬೊಬ್ಬೆ ಹೊಡೆಯುತ್ತಾ ಪಟ್ಟಣವೆಲ್ಲ ಸುತ್ತಾಡಿ ಸಂಭ್ರಮಿಸುವುದು ಯಾವುದೇ ಜಾತಿ-ಧರ್ಮಗಳ ಕಟ್ಟುಪಾಡಿಗೆ ಬೀಳದೇ ಪರಸ್ಪರ ಒಬ್ಬರಿಗೊಬ್ಬರು ಬಣ್ಣ ಎರಚಿಕೊಂಡು ಸಂಭ್ರಮಿಸಿದರು. ಇದರಲ್ಲಿ ನಿಷ್ಕಲ್ಮಶವಾದ ಮನಸ್ಸಿನ ಪುಟಾಣಿ ಮಕ್ಕಳು ಹಾಗೂ ಹೆಣ್ಣು ಮಕ್ಕಳು ಬಣ್ಣ ಆಡುತ್ತ ಸಂಭ್ರಮಿಸುವುದೇ ಓಕುಳಿ ಹಬ್ಬದ ವಿಶೇಷವಾಗಿದೆ.


ದೇಶದಲ್ಲಿ ಸೌಹಾರ್ದತೆಯಿಂದ ಬದುಕು ಸಾಗಿಸುತ್ತಿರುವ ಸಂದರ್ಭದಲ್ಲಿ ಹಿಜಾಬ್, ಕೇಸರಿ ಬೇಕು ಎಂಬ ಎರಡು ಕೋಮುಗಳ ಗಲಭೆಗಳು ನಡೆಯುತ್ತಿವೆ ಆದರೆ ಇಲ್ಲಿ ಯಾವುದೇ ಜಾತಿ ಭೇದವಿಲ್ಲದೆ ಎಲ್ಲರು ಒಬ್ಬರನೊಬ್ಬರು ಅಪ್ಪಿಕೊಂಡು ಹಲವು ಬಣ್ಣಗಳನ್ನು ಎರಚುತ್ತಾ ಹೋಳಿ ಹಬ್ಬದಲ್ಲಿ ಪಾಲ್ಗೊಂಡಿದನ್ನು ನೋಡಿದರೆ ಭಾರತೀಯ ಸಂಸ್ಕೃತಿಯನ್ನು ಎತ್ತಿ ಹಿಡಿದಂತಿದೆ.

-ಡಾ. ಚನ್ನವೀರ(ಮುತ್ತು) ಮನಗೂಳಿ
ಚಿಕ್ಕ ಮಕ್ಕಳ ತಜ್ಞರು


ದೇಶದೆಲ್ಲೆಡೆ ಕಳೆದ 2 ವರ್ಷದಿಂದ ಮಹಾಮಾರಿ ಕರೋನಾ ಭೀತಿಯಿಂದ ಸಾಮರಸ್ಯ ಹಬ್ಬಗಳಿಗೆ ತೆರೆಬಿದ್ದಂತಾಗಿತ್ತು ಆದರೆ ಈ ಬಾರಿ ಕರೋನಾ ಹಾವಳಿ ಇಲ್ಲವಾದರು ಕೂಡಾ ಆ ಭಯ ಇನ್ನೂ ದೂರವಾಗಿಲ್ಲ ಅದಕ್ಕೆ ಈ ಹಬ್ಬ ಮಂದಗತಿಯಿಂದ ಜರುಗುತ್ತಿದೆ.

-ಪ್ರತಿಭಾ ಶಿವಕುಮಾರ ಕಲ್ಲೂರ
ಪುರಸಭೆ ಸದಸ್ಯರು 1ನೇ ವಾರ್ಡ

RELATED ARTICLES

Most Popular

error: Content is protected !!
Join WhatsApp Group