ಗಝಲ್

Must Read

ಚಾರುಹಾಸದ ರಾಣಿಗಾಗಿ ಬೀದಿಯಲ್ಲಿ

ಸುಮವನ್ನು ಹಾಸುವೆನು ಸಖಿ
ಜಾರುತಿರುವ ಹಿಮಮಣಿಯ ಪೋಣಿಸಿ
ಕೊರಳಿಗೆ ಹಾಕುವೆನು ಸಖಿ

ಅರಳಿದ ಪುಷ್ಪಗಳ ಸುಗಂಧವನು
ಅರಸಿ ಆರಿಸಿ ತರುವೆನು
ಹರಳಿನ ಬೆಟ್ಟದಲಿ ಚೆಂಬವಳವನು
ಶೋಧಿಸಿ ತರುವೆನು ಸಖಿ

ಕನ್ನಿಕೆಯ ಚುಬುಕಕ್ಕೆ ಢಾಳಕಾಂತಿಯ
ಗೌರವರ್ಣವು ನೀಡುತಿದೆ
ಚೆನ್ನಿಕೆಯ ಹೆರಳಿಗೆ ಮುಡಿಸಲು ಮಲ್ಲಿಗೆ
ಮಾಲೆಯ ಇಡುವೆನು ಸಖಿ

ದ್ಯುಮಣಿಯ ಬೆಳಕನ್ನು ಗೊತ್ತಿಲ್ಲದೆ
ಕದ್ದಿರುವ ಸಾದ್ವಿಶಿರೋಮಣಿ
ರಮಣನನು ನೋಟದಲ್ಲಿ ಗೆದ್ದಿರುವ
ಚೆಲುವೆಯ ಅಪ್ಪುವೆನು ಸಖಿ

ತೋಳಿನಲಿ ಬಲವಾಗಿ ಹಿಡಿದಿಟ್ಟು
ಕೋಮಲೆಯ ಚುಂಬಿಸುವೆ
ಪೌಳಿಯಲಿ ಅಭಿನವನ ಆಗಮನಕೆ
ಅಹರ್ನಿಶಿ ಕಾಯುವೆನು ಸಖಿ

ಶಂಕರಾನಂದ ಹೆಬ್ಬಾಳ

Latest News

ಬಸವ ಸಮಿತಿಯಿಂದ ಶರಣ ಸಂದೇಶ ಜಗತ್ತಿಗೆ ಮುಟ್ಟಿದೆ – ಯಾಪಲಪರವಿ

ಜನಸಾಮಾನ್ಯರಿಂದ ಸ್ಥಾಪಿತವಾದ ಧರ್ಮ ಲಿಂಗಾಯತಕಲಬುರ್ಗಿ - ಕಲಬುರ್ಗಿ ಬಸವ ಸಮಿತಿ ಅನುಭವ ಮಂಟಪ , ಡಾ. ಬಿ ಡಿ ಜತ್ತಿ ವಚನ ಅಧ್ಯಯನ ಮತ್ತು ಸಂಶೋಧನ...

More Articles Like This

error: Content is protected !!
Join WhatsApp Group