ಜೂನ್ 7 ; ಇಂದು ” ಆಹಾರವನ್ನು ಸುರಕ್ಷತಾ ದಿನ “

Must Read

ನಾವು ಸೇವಿಸುವ ಆಹಾರ ಕೇವಲ ಜೀವರಕ್ಷಕವಾಗಿರದೇ ಆರೋಗ್ಯ, ಆಯುಷ್ಯವನ್ನೂ ನೀಡುವುದಾಗಿರಬೇಕು ಎಂಬ ಉದ್ದೇಶದಿಂದ ಎಲ್ಲರಲ್ಲಿ ಅರಿವು ಮೂಡಿಸಲು ಇಂದು ” ವಿಶ್ವ ಆಹಾರ ಸುರಕ್ಷತಾ ದಿನ ” ಆಚರಿಸಲಾಗುತ್ತಿದೆ.

ಹಿಂದಿನ ವರ್ಷವೇ ಅಂದರೆ ಜೂನ್ 7, 2019 ರಂದು ಆರಂಭಿಸಲ್ಪಟ್ಟ ಈ ದಿನವನ್ನು ನಾಗರಿಕರ ಆರೋಗ್ಯ ರಕ್ಷಣೆ ಆಹಾರದಲ್ಲಿದೆ ಎಂಬುದನ್ನು ತಿಳಿಸಲೋಸುಗ ಆಚರಿಸಲಾಗುತ್ತದೆ. ಡಾ.ಹರ್ಷವರ್ಧನ್ ಎಂಬುವವರು ” ಆಹಾರ ರಕ್ಷಣಾ ಮಿತ್ರ ” ಎಂಬ ಯೋಜನೆ ಆರಂಭಿಸಿದರು.
ವಿಶ್ವ ಆರೋಗ್ಯ ಸಂಸ್ಥೆಯು ಅಕ್ಟೋಬರ್ 16 ರಂದು ವಿಶ್ವ ಆಹಾರ ದಿನ ಆಚರಿಸಲು ಶಿಫಾರಸು ಮಾಡಿದೆ.

ಎಲ್ಲರಿಗೂ ” ವಿಶ್ವ ಆಹಾರ ಸುರಕ್ಷತಾ ದಿನ ” ದ ಶುಭಾಶಯಗಳು.
ಕೊರೋನಾದ ಈ ಸಂಕಟಮಯ ಪರಿಸ್ಥಿತಿಯಲ್ಲಿ ನಾವು ಕೆಲವು ಆಹಾರ ಸುರಕ್ಷತಾ ಪದ್ಧತಿಗಳನ್ನು ಅಳವಡಿಸಿಕೊಳ್ಳಬೇಕಾಗಿದೆ.

* ನಮ್ಮ ದೇಹದ ಪ್ರತಿ ಕಣವೂ ನಮ್ಮ ಆಹಾರದ ಮೇಲೆ ಅವಲಂಬಿಸಿದೆ. ಆರೋಗ್ಯಕರ ಆಹಾರ ಸೇವಿಸಿರಿ.
*ಒಂದು ಸಿಪ್ ದ್ರವಾಹಾರ ಕೂಡ ನಮ್ಮ ಮಿದುಳು, ಹೃದಯ, ಸೊಂಟಗಳ ಆರೋಗ್ಯದಲ್ಲಿ ಪಾತ್ರ ವಹಿಸುತ್ತದೆ
* ರೋಗ ನಿರೋಧಕವೆನಿಸುವ ಆಹಾರ ಸೇವಿಸಿರಿ
* ಪ್ರತಿದಿನ ರಾತ್ರಿ ಅರಿಷಿಣ ಹಾಲು ರಕ್ಷಕ
* ಬೆಳಿಗ್ಗೆ ಮೊಳಕೆ ಕಾಳು, ಉತ್ತಮ ಉಪಾಹಾರ, ಮಧ್ಯಾಹ್ನ ಉತ್ತಮ ಭೋಜನ, ರಾತ್ರಿ ಮಿತ ಭೋಜನ ಆರೋಗ್ಯಕ್ಕೆ ಸಹಕಾರಿ.
* ಹೊರಗಿನ ತಿಂಡಿ ಅಂದರೆ ಪಾನಿಪುರಿ, ಗಾಡಿ ಅಂಗಡಿಯ ತಿನಿಸುಗಳು, ಬೇಕರಿ ಪದಾರ್ಥ, ಹೊಟೇಲ್ ತಿನಿಸುಗಳನ್ನು ವರ್ಜಿಸಿ
* ರಾತ್ರಿ ಒಂದು ಹೊತ್ತು ಹಸಿ ಪದಾರ್ಥ ತಿಂದರೆ ಅತ್ಯುತ್ತಮ
ಆರೋಗ್ಯ ಕಾಪಾಡಿಕೊಳ್ಳಲು ಉತ್ತಮ ಆಹಾರ ಪದ್ಧತಿ ಅಳವಡಿಸಿಕೊಳ್ಳುವುದು ಒಳ್ಳೆಯದು

Latest News

ಕವನ : ಅನುಬಂಧ

ಅನುಬಂಧಕಾಣದ ದಾರಿಯಲ್ಲಿ ಬೆಸೆದ ನಂಟು, ಹೆಸರಿಲ್ಲದಿದ್ದರೂ ಹೃದಯಕ್ಕೆ ಪರಿಚಿತವಾದ ಬಂಧ… ಕಾಲದ ಹೊಳೆ ಹರಿದರೂ ಕಳೆಯದ ಗುರುತು, ಗಂಟು ಅದು ಅನುಬಂಧ. ಮೌನದಲ್ಲೂ ಮಾತಾಡುವ ಸಂಬಂಧ, ಬಂಧ.. ಕಣ್ಣಂಚಿನ ನೀರನ್ನೂ ಓದುತ್ತದೆ ಒರೆಸುತ್ತದೆ. ಹೃದಯ ಮುರಿದು ನೊಂದ ಕ್ಷಣದಲ್ಲಿ ಅದೃಶ್ಯವಾಗಿ ಕೈ ಹಿಡಿದುಕೊಳ್ಳುತ್ತದೆ. ಮಣ್ಣಿನ ವಾಸನೆಯಂತೆ ಸಹಜ, ಬೆಳಗಿನ ಬೆಳಕಿನಂತೆ ಮೃದುವು. ನಗುವಿನಲ್ಲೂ,...

More Articles Like This

error: Content is protected !!
Join WhatsApp Group