ಡಾ. ಫ ಗು ಹಳಕಟ್ಟಿ ಜನ್ಮ ದಿನ ; ಕವನಗಳು

Must Read

ಬಸವ ಬೆಳಕು

ಅಂದು ಒಬ್ಬರೇ
ಹೊರಟರು
ಹಗಲು ಇರುಳು
ಕಾಡು ಕತ್ತಲೆ
ಒಂಟಿ ಸಲಗ
ಬಿಡದ ಛಲ
ಶರಣರ ಸೂಳ್ನುಡಿ
ಅನುಭಾವ ದರ್ಶನ
ಕಲ್ಯಾಣ ಕೂಡಲ
ಬಯಲು ಧಾಮ
ಹುಡುಕಾಟ ಅನ್ವೇಷಣೆ
ಆರು ದಶಕದ ಪಯಣ
ಬೇಡಿದರು ಮಠ ಮನೆಗಳಲಿ
ತಾಡೋಲೆಗಳ ಸಂಗ್ರಹ
ಇದ್ದುದೆಲ್ಲವ ಕೊಟ್ಟು
ಪದವಿ ವಕಾಲತ್ತು ಬಿಟ್ಟು
ಹಿಡಿದರು ವಚನಗಳ ಕಟ್ಟು
ಅಕ್ಷರ ಶಬ್ದಗಳ ಜಾಲ
ಪರಿಷ್ಕರಣೆ ಸಂಪಾದನೆ
ಹರಕು ರುಮಾಲು
ಕನ್ನಡಕ ಒಡೆದಿತ್ತು
ಹರಿದ ಕೋಟು
ಮಾಸಿದ ದೋತುರ
ಹೆಂಡತಿ ಮಗ
ಇಹಲೋಕ ಬಿಟ್ಟರು .
ಗಟ್ಟಿ ಕುಳ ಘನ ಫಕೀರ
ಡಾ.ಫ ಗು ಹಳಕಟ್ಟಿ
ನಾಮಧೇಯ
ವಚನ ಗುಮ್ಮಟದ
ಪಿತಾಮಹ
ಮರೆಯಲಾದು ನಿಮ್ಮನು
ಬಸವ ಭೂಮಿಯ ಬೆಳಕನು
############################
ಹಳಕಟ್ಟಿ ಅವರ ನೆನೆದು.

ಹುಟ್ಟುತ್ತಲೇ ಇಲ್ಲವಾದಳು
ಹೆತ್ತ ಕರುಳಿನ ಅವ್ವ
ಮಾವನ ಪ್ರೀತಿ .
ಅಪ್ಪನ ಕರುಣೆ ನೀತಿ
ಓದು ಆಟ ಪಾಠ
ವಿಜ್ಞಾನ ಕಾನೂನು ಪದವಿ
ವೃತ್ತಿ ವಕಾಲತ್ತು
ಅದೇಕೋ ವಚನಗಳ
ಅಧ್ಯಯನ ಆಸಕ್ತಿ .
ಹುಡುಕಿದರು ತಾಡೋಲೆ
ಮನೆ ಮಠಗಳ ಹೊಕ್ಕು
ಕಳೆದು ಕೊಂಡರು ದುಡ್ಡು
ವಾಚು ಬಂಗಾರದ ಚೈನು
ಬೆರಳು ಕಾಣುವ ಬೂಟು
ಹರಿದ ಕೋಟು
ಮಾಸಿತ್ತು ಧೋತುರ
ಚಿಂದಿಯಾದ ಅಂಗಿ
ತಲೆಗೆ ಹಳೆಯ ರುಮಾಲು
ಸೈಕಲ್ಲಿನ ಹಿಂದೆ
ವಚನಗಳ ಕಟ್ಟು
ಒಡೆದ ಕನ್ನಡಕದ ದೃಷ್ಟಿ
ಪ್ರೀತಿ ಜಂಗಮ ಸಮಷ್ಟಿ.
ಸತ್ತರೂ ಮಗ ಮಡದಿ
ಬಿಡದ ಸಂಕಲನ
ಕನ್ನಡಕೆ ಒಬ್ಬನೇ
ವಚನ ಘನ ಫಕೀರ .
ಬೇಡಲಿಲ್ಲ ಕೈಯೊಡ್ಡಿ
ತುಂಬಿದ ಜೋಳಿಗೆಗೆ
ಅನುಭಾವದ ನುಡಿಗಳನ್ನು.
ನಿಮ್ಮ ನೆನಹೆ ಮಾನ
ನಿಮ್ಮ ನೆರಳೆ ಪ್ರಾಣ.

ಡಾ.ಶಶಿಕಾಂತ.ಪಟ್ಟಣ ಪುಣೆ

Latest News

ಅನ್ನದಾನೇಶ್ವರ ಶ್ರೀಗಳು ಪಂಚಭೂತಗಳಲ್ಲಿ ಲೀನ

ಶ್ರೀಶೈಲ ಜಗದ್ಗುರುಗಳು, ನಾಡಿನ ಹರಗುರು ಚರಮೂರ್ತಿಗಳು ಭಕ್ತರು ಭಾಗಿಮೂಡಲಗಿ - ರಬಕವಿ ಬನಹಟ್ಟಿ ತಾಲೂಕಿನ ಬಂಡಿಗಣಿ ಗ್ರಾಮದ ಶ್ರೀ ಬಸವ ಗೋಪಾಲ ನೀಲಮಾಣಿಕ ಮಠದ ಶ್ರೀ...

More Articles Like This

error: Content is protected !!
Join WhatsApp Group