ಇದನ್ನು ತರಕಾರಿ ರೂಪದಲ್ಲಿ ಉಪಯೋಗಿಸುತ್ತಾರೆ. ಹೊಟ್ಟೆಗೆ ತೆಗೆದುಕೊಳ್ಳುವುದು ಸ್ವಲ್ಪ ಉಷ್ಣ ಆದರೂ ಉತ್ತಮ ಔಷಧಿ ಗುಣಗಳನ್ನು ಹೊಂದಿದೆ.
ಪುನರ್ನವ ಯಾವ ಅವಯವ ಡ್ಯಾಮೇಜ್ ಆದರೂ ಪುನಃ ಮೊದಲಿನ ಸ್ಥಿತಿಗೆ ತರುತ್ತದೆ.
- ಕೊಮ್ಮೆಗಿಡ ಅಥವಾ ಪುನರ್ನವ ಬೇರಿನ ಕಷಾಯವನ್ನು ಕುಡಿದರೆ ಕಾಲುಗಳ ಊತ ಕಡಿಮೆಯಾಗುತ್ತದೆ.
- ಎಲೆಗಳನ್ನು ಪಲ್ಯ ಮಾಡಿ ಸೇವಿಸಿದರೆ ರುಮ್ಯಾಟಿಕ್(ಸಂಧಿವಾತ) ಸಮಸ್ಯೆ ದೂರವಾಗುತ್ತದೆ.
- ಬೇರನ್ನು ನೀರಲ್ಲಿ ಅರೆದು ಚರ್ಮಕ್ಕೆ ಹಚ್ಚಿದರೆ ಚರ್ಮದ ಸಮಸ್ಯೆ ನಿವಾರಣೆಯಾಗುತ್ತದೆ.
- ಬೇರಿನ ಪುಡಿಗೆ ಬಿಸಿ ನೀರು ಸೇರಿಸಿ ಕುಡಿದರೆ ಹೊಟ್ಟೆ ಹುಳು ನಿವಾರಣೆಯಾಗುತ್ತದೆ.
- ಬೇರಿನ ಪುಡಿಗೆ ಜೇನುತುಪ್ಪ ಹಾಗೂ ಬಜೆ ಪುಡಿ ಸೇರಿಸಿ ಮಿಶ್ರಣ ಮಾಡಿ ಸೇವಿಸಿದರೆ ಕಫ ಹಾಗೂ ಕೆಮ್ಮು ವಾಸಿಯಾಗುತ್ತದೆ.
- ಕಷಾಯವನ್ನು ಮಲಗುವ ಮುನ್ನ ಕುಡಿದರೆ ಚೆನ್ನಾಗಿ ನಿದ್ದೆ ಬರುತ್ತದೆ.
- ಬೇರಿನ ಪುಡಿಗೆ ಅರಿಶಿಣ ಪುಡಿ ಬೆರೆಸಿ ಬಿಸಿ ನೀರಿನಲ್ಲಿ ಕಲಸಿ ಕುಡಿದರೆ, ಆಸ್ತಮಾ ಕಡಿಮೆಯಾಗುತ್ತದೆ.
- ಮೂಳೆ ಸಂಬಂಧಿತ ಸಮಸ್ಯೆಗಳಿದ್ದರೆ ಪುನರ್ನವದ ಕಷಾಯಕ್ಕೆ ಶುಂಠಿ ಮತ್ತು ಕರ್ಪೂರ ಸೇರಿಸಿ ಸೇವಿಸಿದರೆ ನೋವು ಕಡಿಮೆಯಾಗುತ್ತದೆ.
- ನಾನು ತಯಾರಿಸುವ ನೋವಿನ ಎಣ್ಣೆಯಲ್ಲಿ ಇದನ್ನು ಉಪಯೋಗಿಸುತ್ತೇನೆ.
- ಬೇರಿನ ಪುಡಿಯನ್ನು ಹರಳೆಣ್ಣೆ ಜತೆ ನಿಯಮಿತ ಪ್ರಮಾಣದಲ್ಲಿ ಸೇವಿಸಿದರೆ ಮಲಬದ್ಧತೆ ಸಮಸ್ಯೆ ನಿವಾರಣೆಯಾಗುತ್ತದೆ.
- ನಾನು ತಯಾರಿಸುವ ಕುಡಿಯಲು ಉತ್ತಮ ಪೇಯವಾದ ಕಷಾಯದ ಪುಡಿಯಲ್ಲಿ ಪುನರ್ನವ ಇರುತ್ತದೆ.
- ನಿಯಮಿತ ಸೇವನೆ ಯಿಂದ ಮೂತ್ರ ವಿಸರ್ಜನೆ ಸರಿಯಾಗುತ್ತದೆ.
ಸುಮನಾ ಮಳಲಗದ್ದೆ 9980182883.