Homeಕಥೆಪುಸ್ತಕ ಪರಿಚಯ

ಪುಸ್ತಕ ಪರಿಚಯ

ಪುಸ್ತಕದ ಹೆಸರು : *ದಿಲ್ಲಿ ಕಸ ಮತ್ತು ಇತರ ಕಥೆಗಳು*

ಲೇಖಕರು : ಆಗುಂಬೆ ಎಸ್. ನಟರಾಜ್

ಮೊದಲ ಮುದ್ರಣ : 2020, ಪುಟ 2.8, ಬೆಲೆ ರೂ. 150=00

ಪ್ರಕಾಶಕರು : ಎ.ಎಸ್.ಬಿ. ಮೆಮೋರಿಯಲ್ ಟ್ರಸ್ಟ್ (ರಿ) ಬೆಂಗಳೂರು.

ಅನ್ವೇಷಕ ಪ್ರವಾಸಿ ಆಗುಂಬೆ ನಟರಾಜ್ ಅವರು 1939 ರಲ್ಲಿ ಜನಿಸಿದರು. ಕೆನರಾ ಬ್ಯಾಂಕಿನಿಂದ ನಿವೃತ್ತರು 82 ವಯಸ್ಸಿನಲ್ಲಿ ಕಥಾ ಸಂಕಲನ ಪ್ರಕಟಿಸಿದ್ದಾರೆ. ಇದು ಹೆಮ್ಮೆಯ ವಿಷಯ ಅವರು ಇಲ್ಲಿಯವರೆಗೆ 34 ಕೃತಿಗಳನ್ನು ಬರೆದಿದ್ದಾರೆ. ಆಡು ಮುಟ್ಟದ ಸೊಪ್ಪಿಲ್ಲ ಎನ್ನುವಂತೆ ಎಲ್ಲದರಲ್ಲೂ ಸೈ ಎನಿಸಿಕೊಂಡಿದ್ದಾರೆ. ಇದು ಇವರ ಎರಡನೇ ಕಥಾ ಸಂಕಲನ. ಇವರ ಸುತ್ತಾಟಗಳಲ್ಲಿ ನೋಡಿದ, ಕೇಳಿದ ಅನುಭವ ಪಡೆದ ಸತ್ಯ ಕಥೆಗಳ ಆಧಾರದ ಮೇಲೆ ಈ ಕಥೆಗಳನ್ನು ರಚಿಸಿದ್ದಾರೆ. ಇದರಲ್ಲಿ 26 ಕಥೆಗಳಿವೆ. ಕಥೆಗಳು ಸತ್ಯವಾಗಿರುವುದರಿಂದ ಎಲ್ಲ ಕಥೆಗಳು ಓದಿದ ನಂತರ ನೆನಪಿನಲ್ಲಿ ಉಳಿಯುತ್ತವೆ. ಹಾಗೆ ಬರೆದಿದ್ದಾರೆ.

ಭಿಕ್ಷುಕಿ ಕಥೆಯಲ್ಲಿ ಅವಳ ಗಂಡ ತೀರಿಕೊಂಡ ನಂತರ ಅವಳಿಗೆ ಬುದ್ಧಿ ಭ್ರಮಣೆ ಆಯಿತು. ಅವಳು ಭಿಕ್ಷುಕಿಯಲ್ಲ ದುಡಿದು ತಿನ್ನುತ್ತಾ ಇದ್ದಾಳೆ ಕಷ್ಟ ಪಟ್ಟು ಜೀವನ ಮಾಡುತ್ತಿದ್ದರೂ ಮನೆ ಇರಲಿಲ್ಲ ಸಂತೋಷದಿಂದ ಕಾಲ ಕಳೆಯುತ್ತಿದ್ದರು….ಕಥೆ ಓದಿಸಿಕೊಂಡು ಹೋಗುತ್ತದೆ.

ಬಾ. . . . ಬನ್ನಿ . . . . . ಬನ್ನಿ . . . . . ಕಥೆಯಲ್ಲಿ ದೇವರ ಮೇಲಿನ ಅನನ್ಯ ಭಕ್ತಿ ಇರಿಸಿದ ಈ ಧಾರ್ಮಿಕ ಭಕ್ತರಿಗೆ ಬುದ್ಧಿ ಮಾಂದ್ಯ ಮಗುವಿನ ಜನನ ಆಗಬೇಕಾ? ದಯೇ? ಇಲ್ಲ ಯಾರ ತಪ್ಪು? ಓದಿ ನೀವೇ ನಿರ್ಧರಿಸಿರಿ.

ರಿಪೋರ್ಟರ್ ಕಥೆಯಲ್ಲಿ ಅವನಿಗೆ ಗಾಡಿ ಮೇಲೆ ಬಿದ್ದು ಮೆದುಳಿಗೆ ಪೆಟ್ಟಾಗಿ ಪ್ರೆಸ್ ಕೆಲಸ ಬಿಟ್ಟು ಅಲೆಮಾರಿಯಾಗಿದ್ದ ಇವನಿಗೆ ಅಲ್ಲಿ ಇಲ್ಲಿ ಬೇರೆ ಬೇರೆ ಕೆಲಸ ಕೇಳಲು ನಿಲ್ಲುತ್ತಿರಲಿಲ್ಲ. ಕೊನೆಗೆ ದೇವರನ್ನು ಕಾಯುವ ಕೆಲಸ ಅದು ಸೆಕ್ಯುರಿಟಿ ಆಗಿ ಕೆಲಸ ಸೇರಿ ತನ್ನ ಕಾಲು ಮೇಲೆ ತಾನು ನಿಲ್ಲುವ ಕಥೆ ನಿಜ ಜೀವನದಲ್ಲಿ ಅದರ ಘಟನೆಯಂತಿದೆ.

ಸ್ವತಂತ್ರ ಕಥೆಯಲ್ಲಿ ಮಗ-ಮಗಳು ತಂದೆಯ ಆಸ್ತಿ ಮೇಲೆನೆ ಕಟ್ಟು ಅವರು ಸ್ವತಂತ್ರವಾಗಿರುತ್ತೇನೆ. ನನಗೆ ಯಾರ ಆಸ್ತಿ ಬೇಡ ಸ್ವತಂತ್ರವಾಗಿ ಸಾವನ್ನಪ್ಪಿದ ಕಥೆ ನಿಜವಾಗಿ ಕಣ್ಣಲ್ಲಿ ನೀರು ತರಿಸುತ್ತದೆ.

ಸಹಸ್ರ ಗಣಪತಿ ಆರಾಧನೆ ಕಥೆಯಲ್ಲಿ ಬ್ಯಾಂಕಿನಲ್ಲಿ ಉದ್ಯೋಗ ಮಾಡುತ್ತಾ ಕೇವಲ ಮೇಟ್ರಿಕ್ ಮಾಡಿ ಡಿವ್ಹಿಜನಲ್ ಮ್ಯಾನೇಜರ್ ಆಗಿ ಪೂಜೆ ಪುನಸ್ಕಾರ ವೃತ ಆರಾಧನೆ ಭಜನೆ ನೆರವೇರಿಸುತ್ತಿದ್ದ. ಅಧಿಕಾರಿಗಳ ಮಡದಿಯರ ಮನ ಗೆದ್ದಿದ್ದ ಅಲ್ಲದೇ ಸಾವಿರ ಗಣಪತಿ ವಿಗ್ರಹಗಳು ಸಂಗ್ರಹಿಸಿದ್ದ. ಪತ್ನಿ ಉಪವಾಸ ಇದ್ದು ಪೂಜೆ ನೈವೇಧ್ಯ ತಯಾರಿಸುತ್ತಿದ್ದಳು ಹಾಗೂ ಪೂಜೆ ಮಾಡಿ ಸಾಕಷ್ಟು ಸಂಪಾದಿಸಿದ್ದ ಬ್ಯಾಂಕಿನಲ್ಲಿ ಒಮ್ಮೆ ಮಹಿಳಾ ಮಣಿಯನ್ನು ತನ್ನ ಕ್ಯಾಬಿನ್‍ಗೆ ಕರೆಸಿಕೊಂಡು ಅವನು ಹೆಗಲ ಮೇಲೆ ಕೈ ಹಾಕಿದ್ದಾಗ ಅವಳು ಚೀರಿದಳು ಜನ ಕೂಡಿದರು ಈ ಶಾಸ್ತ್ರೀ ಅಂಗಾತ ಮಲಗಿ ಬಿದ್ದ ಆ ಬ್ಯಾಂಕಿನವರ ಅಂಬುಲೆನ್ಸ್ ಕರೆಸಿ ಆಸ್ಪತ್ರೆಗೆ ಸಾಗಿಸಿದರು. ಒಂದು ವಾರವಿದ್ದು ಚೇತರಿಸಿಕೊಂಡ ಕಾರಣ ಕೇಳಿದಾಗ ಬಿ.ಪಿ. ಜಾಸ್ತಿಯಾಗಿ ತಲೆ ತಿರುಗಿ ಕೆಳಗೆ ಬಿದ್ದೆ ಎಂದು ಹಳೆ ಮನೆಯಲ್ಲಿ ಇದ್ದಾಗ ಗಣಪತಿ ವಿಗ್ರಹ ಕಳುವಾದಾಗ ಕಂಪ್ಲೇಟ ಕೊಟ್ಟು ಇನ್ಸುರನ್ಸ್ ಪಡೆದ ಎಂದ ಪಾಪ ಪತ್ನಿ ನಿಧನಳಾದಳು ಕಥೆ ಕೊನೆಗೆ ಬಹಳ ಸಸ್ಪೆನ್ಸ್ ಇಟ್ಟಿದ್ದಾರೆ.

ಹೆಂಡತಿಯ ಆಭರಣ ಶೆಟ್ಟರ ಅಂಗಡಿ ಇದ್ದು, ಸಾಕಷ್ಟು ಶ್ರೀಮಂತಿಕೆ ಪಡೆದಿದ್ದರು, 6 ಗಂಡು, 1 ಹೆಣ್ಣು ಮಕ್ಕಳು ಇದ್ದರು ಹೆಂಡತಿ ತೀರಿಕೊಂಡ ನಂತರ ಶೆಟ್ಟರ ಪಾಡು ನಾಯಿ ಪಾಡು ಒಬ್ಬಬ್ಬರ ಮನೆಯಲ್ಲಿ ಎರಡು ತಿಂಗಳು ಕಳೆಯ ಬೇಕು ಹೀಗೆ ಕಾಲ ಕಳೆಯಬೇಕಾಯಿತು. ಕೊನೆಗೆ ಮಗಳು ಮನೆಗೆ ಹೋದಾಗ ಮಗಳು ಅಪ್ಪಾ ತಾಯಿಯ ಆಭರಣ ಕೊಡು ಎನ್ನುತ್ತಾಳೆ ಆಗ ಶೆಟ್ಟರು ಅದನ್ನು ಬ್ಯಾಂಕ್ ಲಾಕರ್‍ನಲ್ಲಿಟ್ಟಿದ್ದೇನೆ. ಅಲ್ಲೇಕೆ ನಮ್ಮ ಮನೆಯಲ್ಲಿ ಇಡು ಎಂದಳು. ಮಗಳು ಶೆಟ್ಟರು ಅಲ್ಲಿ ಹೋಗಿ ಅವುಗಳನ್ನು ನೋಡಿದಾಗ ನಿಮ್ಮ ತಾಯಿ ನೆನಪಾಗುತ್ತದೆ. ಅದರಲ್ಲಿ ತೃಪ್ತಿ ಪಡುತ್ತೇನೆ ಎಂದಾಗ ಮಗಳು ಮರುದಿನ ಆಟೋ ಕರೆದು ಮೊದಲು ಮಗನ ಮನೆಗೆ ಕಳುಹಿಸುತ್ತಾಳೆ. ಶೆಟ್ಟರ ಪಾಡು ಹೇಳತೀರದು.

ಭವಿಷ್ಯ ಈ ಕಥೆ ಮಲೆನಾಡಿನ ರಾಮಪ್ಪ ಕೈ ತೋಟ ಮಾಡುತ್ತ ಸುಖವಾಗಿದ್ದ ಆದರೆ ಅವಳು ಮಗಳಿಗೆ 30 ವರ್ಷ ಆದರೂ ವರ ಸಿಕ್ಕಿರಲಿಲ್ಲ ಅದರ ಸಲುವಾಗಿ ಭವಿಷ್ಯ ಕೇಳಲು ಹೋದ ಭವಿಷ್ಯಗಾರ ಇವಳಿಗೆ ಈ ಜನ್ಮದಲ್ಲಿ ನಿಮ್ಮ ಮಗಳಿಗೆ ತಾನಾಗಿ ಭಾಗ್ಯ ಕೂಡಿ ಬರುವುದಿಲ್ಲ ಎಂದಾಗ ಗೆಳೆಯ ದೈವದ ಹೇಳಿದ ಪ್ರಯತ್ನ ಮಾಡೋಣ ಎಂದಾಗ ಪ್ರಯತ್ನಕ್ಕೆ ಪ್ರತಿಫಲ ಸಿಕ್ಕಿತು ಲಗ್ನ ಆಯಿತು. ಜ್ಯೋತಿಷಿಗೆ ಈ ವಿಷಯ ಹೇಳಲು ಹೋಗೋಣ ಎಂದು ಹೋದರು ಆದರೆ ಅಲ್ಲಿ ಅಪಘಾತದಲ್ಲಿ ಸತ್ತು ಹೋಗಿದ್ದ ಭವಿಷ್ಯ ಹೇಳುವವರು ತಮ್ಮ ಹೊಟ್ಟೆ ಪಾಡಿಗೆ ಎನ್ನುವುದು ಸುಳ್ಳು ಹೇಳುತ್ತಾರೆ ಎಂದು ಕಥೆಯಲ್ಲಿ ತೆರೆದಿಟ್ಟಿದ್ದಾರೆ.

ಪೋಲಿಸ್ ಇನ್ಸಪೆಕ್ಟರ್ ಕಥೆಯಲ್ಲಿ ಬ್ಯಾಂಕಿನ ಮ್ಯಾನೇಜರ ಆದ ಪೋಲಿಸ್ ಅಧಿಕಾರಿಯಾಗಿ ಬಿಟ್ಟಿದ್ದಾಗಲೂ ವಿಚಿತ್ರ ಆದರೆ ಅಯ್ಯೋ ಸ್ವಾಮೀ ಸಾಲ ತೆಗೆದುಕೊಂಡವರಿಗೂ ಜಾಮೀನುದಾರರಿಗೂ ಹಣ ವಸೂಲಿ ಮಾಡಲು ಹೆಡ್ ಆಫೀಸ್‍ಗೆ ಕರೆದುಕೊಂಡು ಹೋಗುವ ಪ್ರಸಂಗ ಚೆನ್ನಾಗಿದೆ.

ದಿಲ್ಲಿ ಕಸದ ಕಥೆ ಯಲ್ಲಿ ಸ್ವಚ್ಚಗೊಳಿಸುವ ಕಾರ್ಯಕ್ಕೆ ಜಮೇದಾರ್ (ಜಾಡ ಮಾಲಿಗಳಿಗೆ ದಿಲ್ಲಿಯಲ್ಲಿ ಜಮೇದಾರ ಎಂದು ಕರೆಯುವರು) ಅಲ್ಲಿ ನಿಯಮ ಎಂದರೆ ಪ್ರತಿ ಮೊಹಲ್ಲಾದ ಪ್ರತಿ ಗಲ್ಲಿಗೂ ರಸ್ತೆಗೊಬ್ಬ ಜಮೇದಾರ್ ಕೆಲಸ ಮಾಡುತ್ತಾ ಇರುತ್ತಾನೆ. ಅವರ ಕುಟುಂಬ ಮಾತ್ರ ಆ ಬೀದಿಯಲ್ಲಿ ಕೆಲಸ ಮಾಡುವ ಹಕ್ಕನ್ನು ಪಡೆದಕೊಂಡಿರುತ್ತಾರೆ. ಬೇರೆ ಯಾರೂ ಎಷ್ಟೇ ಪ್ರತಿಭಾಶಾಲಿಯಾಗಿರಲಿ ಪರಿಚಯವಿರಲಿ, ಶಕ್ತಿವಂತನಾಗಿರಲಿ ಕೆಲಸ ಮಾಡಲು ಕಾಲಿಡುವಂತಿಲ್ಲ. ಜಾಡ ಮಾಲಿಗಳ ಸಂಘದ ಗುರುತು ಕಸಬರಗಿ ಇರುತ್ತದೆ. ಅವರು ಯಾವ ರೀತಿ ತಮ್ಮ ಹಕ್ಕು ಪಡೆಯುತ್ತಾರೆ ಹಾಗೂ ಬೇರೊಂದು ಗಲ್ಲಿಗೆ ಬ್ಯಾಂಕ್ ಸಿಪ್ಟ್ ಆದಾಗ ಆಗಿನ ಕಥೆ ನಿಜವಾಗಿ ಆದ ಘಟನೆಯಂತಿದೆ ಈಗ ದಿಲ್ಲಿಯಲ್ಲಿ ಇರುವ ಪಕ್ಷದ ಚಿನ್ಹೆ ಪೊರಕೆ ಇದೆ ಆದರೆ ಇದಕ್ಕೂ ಅದಕ್ಕೂ ಸಂಬಂಧವಿಲ್ಲ ಕೊನೆಗೆ ಆತ ಎಂ.ಪಿ. ಮನೆ ಮುಂದೆ ಗಲಾಟೆ ಮಾಡಿ ಅವರು ಇವನಿಗೆ ಪೋಲಿಸ್ ಪೇದೆ ಕೆಲಸ ಶಿಫಾರಸ್ಸು ಮಾಡುತ್ತಾರೆ. ಒಂದು ದಿನ ಆತನನ್ನು ಮಾತನಾಡಿಸಿದಾಗ ನಿಮ್ಮ ಬ್ಯಾಂಕಿನಲ್ಲಿ ಕೆಲಸ ಸಿಕ್ಕಿದರೆ ದಿನವಹಿ ಕಸಗುಡಿಸಿ ಸ್ವಚ್ಛ ಮಾಡಬೇಕಾಗುತ್ತಿತ್ತು. ಈ ಕಸ ಗುಡಿಸುವ ಕೆಲಸ ಯಾರಿಗೆ ಬೇಕು ಸಾಬ್! ಯಾವ ದುಶ್ಮನ್ ಗೂ ಬೇಡ! ನಿಮ್ಮಿಂದ ತುಂಬಾ ಉಪಕಾರವಾಯಿತು. ಸಾಬ್ ಎಂದು ಬ್ಯಾಂಕ್ ಮ್ಯಾನೇಜರ್‍ಗೆ ಹೇಳಿದಾಗ ಹಿಂದಿನದೆಲ್ಲಾ ನೆನಪಾಯಿತು ಬಿಡುವುದ ಬಿಟ್ಟು ಮೊದಲು ಓದಬೇಕಾದ ಕಥೆಯಿದು.

ಪತಿ ಪೀಡಕರ ಕಥೆ ನನ್ನ ಹೆಂಡತಿ ತಪ್ಪಿಸಿಕೊಂಡು ಬಿಟ್ಟಿದ್ದಾಳೆ? ಒಬ್ಬ ಗುಜರಾತಿ ಬೊಬ್ಬೆ ಹೊಡೆದ ಎಲ್ಲರೂ ಆತನನ್ನು ಮುಖಮಾಡಿ ನಿಂತರು ಗುಂಪಿನಲ್ಲಿದ್ದ ಒಬ್ಬನನ್ನು ನಿಲ್ಲಿಸಿ ಕೇಳಿದೆ ಪೋಲಿಸ್ ಸ್ಟೇಷನ್ ಹತ್ತಿರದಲ್ಲಿದೆ ದೂರು ನೀಡಿ ಎಂದೆ ಯಾಕೆ ದೂರು ನೀಡಬೇಕು? ಹೆಂಡತಿ ತಪ್ಪಿಸಿಕೊಂಡರೆ ತೊಂದರೆ ಇಲ್ಲಾ ಸುಖವಾಯಿತಲ್ಲಾ ಅವನಿಗೆ ಪೀಡೆ ಮುಗೀತಲ್ಲಾ ಅಂತಾ ಸುಮ್ಮನಾಗಬೇಕು. ಬೇವ್ ಕೂಫ್! ಎಂದು ಬೈದು ಮುಂದೆ ಸಾಗಿದ ಆತ.

ಶವ ಕಥೆಯಲ್ಲಿ ಬ್ಯಾಂಕ್ ಅಡಿಟರ್ (ತಪಾಸಣೆಗೆ) ಹೋದಾಗ ಇಬ್ಬರೂ ಸೇರಿ ಬ್ಯಾಂಕ್ ತಪಾಸಣೆಗೆ ಮಾಡಿ ಸಂಜೆ ಪಾರ್ಟಿ ಮಾಡುತ್ತಾರೆ. ಆದರೆ ಗೆಳೆಯನಿಗೆ ಟ್ಯಾಕ್ಸಿ ಮಾಡು ಹುಷಾರಿಲ್ಲ ಎಂದು ಮಾಡಿ ಹೋಗುವಾಗ ಆತ ನಿಧನವಾಗುತ್ತಾನೆ. ಶವ ಅವರ ಮನೆ ಮುಟ್ಟಿಸಲು ಹೋದಾಗ ಆದ ಫಜೀತಿ ಓದಿನೇ ತಿಳಿಯಬೇಕು. ಬಂಗಾಳಿ ಬಾಬುನಿಗೆ ಮದುವೆ ಆಗಿರಲಿಲ್ಲವಂತೆ ಆಕೆ ಅವನ ಹೆಂಡತಿ ಅಲ್ಲವಂತೆ ಅವಳ ಮನೆಯಲ್ಲಿ ವಾಸವಾಗಿದ್ದ ಅಷ್ಟೇ ಅವನ ಹೆಂಡತಿ ಎಂದು ಹೇಳಿಕೊಂಡು ನನ್ನಿಂದ ಹಣ ಪಡೆಯಲು ಯತ್ನಿಸುತ್ತಿದ್ದಾಳೆ. ಪೋಲಿಸರಿಗೆ ದೂರ ಕೊಟ್ಟರೆ ನಂಬುತ್ತಾರೆ. ಏನು ಮಾಡುವುದು? ಮ್ಯಾನೇಜರ ಫಜೀತಿ ಹಾಗೂ ಉಪಾಯ ಫಲಿಸಿದೆ ಒಟ್ಟಿನ ಮೇಲೆ ಬ್ಯಾಂಕ್ ಸಿಬ್ಬಂದಿಯ ಕಥೆಗಳೆ ಈ ಪುಸ್ತಕದಲ್ಲಿ ಹೆಚ್ಚಿವೆ ಆದರೆ ಅವು ನಿಜ ಜೀವನದಲ್ಲಿ ಆದ ಘಟನೆಗಳೆ ಆಗಿರಬೇಕು. 25 ಕಥೆಗಳು ನಿಜವಾಗಿ ಓದಿಸಿಕೊಂಡು ನಮ್ಮ ಜೀವನದಲ್ಲಿ ಮಾರ್ಗದರ್ಶಿಯಾಗಿವೆ.

80 ವರ್ಷ ದಾಟಿದರೂ ಲೇಖಕರ ಮನಸ್ಸು ಇನ್ನೂ 25ರ ಚೈತನ್ಯದಲ್ಲಿದೆ.

ಕನ್ನಡ ಸಾಹಿತ್ಯದಲ್ಲಿ ಕಥಾ ಸಾಹಿತ್ಯ ಹೆಮ್ಮರವಾಗಿ ಬೆಳೆದಿದೆ. ಅನುಭವ ಪ್ರತ್ಯಕ್ಷ ದರ್ಶನ ಮನುಷ್ಯನ ಮೇಲೆ ಅಸಾಧಾರಣ ಬೆಳಕಿನ ಕಿರಣಗಳನ್ನು ಹರಿಸುತ್ತವೆ. ಈ ಕಥೆಗಳು ಓದುಗರಿಗೆ ಮನರಂಜನೆಯನ್ನು ನೀಡುವುದರ ಜೊತೆಗೆ ಅಲ್ಲ ಸ್ವಲ್ಪ ಚಿಂತನೆಗೂ ಈಡು ಮಾಡಲಿ ಎಂಬ ಉದ್ದೇಶವೂ ಇದೆ.
ವೃತ್ತಿಯಲ್ಲಿ ಬ್ಯಾಂಕ್ ನೌಕರರಾದ ಲೇಖಕರ ಬದುಕಲ್ಲಿ ಸಾರ್ವಜನಿಕರನ್ನು ಕಾಣುವ ದೃಷ್ಟಿನೆ ಬೇರೆ ಒಬ್ಬ ಬ್ಯಾಂಕ್ ನೌಕರ ಪುಸ್ತಕಗಳನ್ನು ಬರೆದು ತಾನೇ ಸ್ವತಃ ತನ್ನ ಸ್ವಂತದ ಹಣದಲ್ಲಿ ಮುದ್ರಿಸಿ ಉಚಿತವಾಗಿ ಕೊಟ್ಟು ಓದಿ ಎಂದರು. ಓದದ ಜನರನ್ನು ಕಂಡು ಅವರ ಮನಸ್ಸು ಘಾಸಿಯಾಗಿದ್ದನ್ನು ಊಹಿಸಲು ಸಾಧ್ಯ.
ಹೆಗ್ಗದ್ದೆ ಪ್ರಕಾಶನ ಆರ್.ಎಸ್. ಪಾಳ್ಯ ಬೆಂಗಳೂರು ಉತ್ತರ 33 ಇವರು ತಪ್ಪಿಲ್ಲದೆ ಉತ್ತಮ ಮುದ್ರಣ ಮಾಡಿದ್ದಾರೆ. ಎ.ಎಸ್.ಬಿ ಮೆಮೋರಿಯಲ್ ಟ್ರಸ್ಟ್ (ರಿ) 3ನೇ ಮುಖ್ಯ ರಸ್ತೆ, ವಿಜಯ ನಗರ ಬೆಂಗಳೂರು-40. ಪ್ರಕಾಶಕರು ಕೇವಲ ಮೌಖಿಕ ಇತಿಹಾಸವಾಗದಂತೆ ಈ ಕಥೆಗಳು ಮೌಖಿಕ ಕಥೆಗಳಾಗಿ ನಿಲ್ಲಬಾರದೆಂಬ ಉದ್ದೇಶದಿಂದ ಈ ಕೃತಿ ರಚಿಸಿದ್ದೇನೆ ಎಂದಿದ್ದಾರೆ.

ಈ ಪುಸ್ತಕ ಯಾವುದೇ ವಿಶ್ವವಿದ್ಯಾಲಯಕ್ಕೆ ಪಠ್ಯ ಪುಸ್ತಕ ಆಗುವಷ್ಟು ಚೆನ್ನಾಗಿದೆ ವಿಶ್ವವಿದ್ಯಾಲಯದವರು ಗಮನಿಸಬೇಕು. ಆಗುಂಬೆ ಎಸ್. ನಟರಾಜ ಅವರಿಂದ ಇನ್ನೂ ಉತ್ತಮ ಕೃತಿಗಳು ಬರಲಿ ಅವರಿಗೆ ಉತ್ತಮ ಆರೋಗ್ಯ ನೀಡಲಿ ಎಂದು ಪಾರ್ಥಿಸುತ್ತೇನೆ.

ಆಗುಂಬೆ ಎಸ್. ನಟರಾಜ ಅವರ ಸಂಚಾರ ವಾಣಿ-9481423004

*ಎಂ. ವೈ. ಮೆಣಸಿನಕಾಯಿ ಬೆಳಗಾವಿ*
ಮೋ: 9449209570

RELATED ARTICLES

Most Popular

error: Content is protected !!
Join WhatsApp Group