Homeಲೇಖನಪುಸ್ತಕ ಪರಿಚಯ: ಮುಂಬಯಿ ಕನ್ನಡಿಗರ ದೇವಾಲಯಗಳ ಮಾಹಿತಿ ಕೋಶ

ಪುಸ್ತಕ ಪರಿಚಯ: ಮುಂಬಯಿ ಕನ್ನಡಿಗರ ದೇವಾಲಯಗಳ ಮಾಹಿತಿ ಕೋಶ

ಮುಂಬಯಿ ಕನ್ನಡಿಗರ ದೇವಾಲಯಗಳ ಮಾಹಿತಿ ಕೋಶ

ಸಂಪಾದಕರು : ವಿಶ್ವನಾಥ ದೊಡ್ಮನೆ
ಪ್ರಕಾಶಕರು : ಮಯೂರ ವರ್ಮ ಸಾಂಸ್ಕೃತಿಕ ಪ್ರತಿಷ್ಠಾನ
ಪುಟಗಳು : 168 ಬೆಲೆ : 170
ಮುದ್ರಣ : ನವೀನ ಪ್ರಿಂಟರ್ಸ್ ಮುಂಬಯಿ 16
ಮುಖಪುಟ ವಿನ್ಯಾಸ: ಅಶೋಕ ಕುಮಾರ ಕೊಡ್ಯಡ್ಕ

ಡಿ. ವೀರೇಂದ್ರ ಹೆಗ್ಗಡೆಯವರು ಶ್ರೀಕ್ಷೇತ್ರ ಧರ್ಮಸ್ಥಳ ಹಾಗೂ ಅನೇಕ ಮಹಾ ಸ್ವಾಮಿಗಳ ಶುಭ ಸಂದೇಶಗಳಿವೆ, ಮುನ್ನುಡಿಯನ್ನು ಬಿ. ಬಾಲಚಂದ್ರ ರಾವ್ ಗೌ. ಸಂಪಾದಕರು ಬರೆದಿದ್ದಾರೆ. ಇದರಲ್ಲಿ 13 ಭಾಗಗಳನ್ನು ಮಾಡಿದ್ದು ಶುಭ ಸಂದೇಶ, ಮುನ್ನುಡಿ, ಪ್ರಕಾಶಕರ ನುಡಿ, ಅರಿಕೆ, ದೇವಾಲಯಗಳ ಪರಿಚಯ, ಮಠಗಳ, ಧಾರ್ಮಿಕ ಆಧ್ಯಾತ್ಮಿಕ ಸಂಸ್ಥೆಗಳು, ಮುಂಬಯಿ ಕನ್ನಡಿಗರ ಭಜನಾ ಮಂಡಳಿಗಳು, ಸನಾತನ ಕಾಲಮಾನ (ಸಂಕಲ್ಪ) ಪೋಟೋ ಗ್ಯಾಲರಿ, ಭಾರತೀಯ ಶಾಸ್ತ್ರ ಪರಂಪರೆ, ದೇವಾಲಯಗಳ ಆಡಳಿತ, ದೇವಾಲಯ ವಾಸ್ತು 88 ದೇವಾಲಯಗಳ ಸಂಪೂರ್ಣವಿವರ ಹಾಗೂ ದೂರವಾಣಿ, ಚರವಾಣಿ, ವಿಳಾಸಗಳ ತಿಳಿಸಿದ್ದಾರೆ. ಎಂಟು ಮಠಗಳು ಅವುಗಳ ಸಂಪೂರ್ಣ ಮಾಹಿತಿಗಳು ಇವುಗಳನ್ನೆಲ್ಲ ಸಂಗ್ರಹಿಸಲು ಎರಡು ವರ್ಷಗಳ ತೆಗೆದುಕೊಂಡಿದೆ.

ದೇವಸ್ಥಾನಗಳ ಮಾಹಿತಿಯೊಂದಿಗೆ ಸನಾತನ ಕಾಲಮಾನ ದೇವಾಲಯಗಳ ಆಡಳಿತ, ದೇವಾಲಯ ವಾಸ್ತು, ಭಾರತೀಯ ಶಾಸ್ತ್ರ ಪರಂಪರೆಯಂತಹ ಉಪಯುಕ್ತ ಲೇಖನಗಳನ್ನು ಈ ಹೊತ್ತಗೆಯಲ್ಲಿ ಅಳವಡಿಸಿದ್ದಾರೆ. ಈಗ ಇರುವ ಮುಂಬಯಿ ತುಳು-ಕನ್ನಡಿಗರಿಗೆ ಹೊಸದಾಗಿ ಮುಂಬಯಿಗೆ ಬರುವ ಯಾತ್ರಿಕರಿಗೆ ಈ ಹೊತ್ತಗೆ ಅತ್ಯಂತ ಉಪಯುಕ್ತವಾದ ಮಾಹಿತಿ ಕೈಪಿಡಿ ಆಗಿದೆ.

ಇಲ್ಲಿಯ ದೇವಾಲಯಗಳಲ್ಲಿ ನಡೆಯುವ ಉತ್ಸವ, ಭಜನೆ ತಾಳಮದ್ದಳೆ, ಯಕ್ಷಗಾನ, ಹರಿಕಥೆಗಳು, ಕನ್ನಡ, ತುಳು ಭಾಷೆಯನ್ನು ಜೀವಂತವಾಗಿಡುವಲ್ಲಿ ಸಹಕಾರಿಯಾಗಿದೆ. ಮುಲುಂಡ್ ಪಶ್ಚಿಮಯದ ರೈಲ್ವೆ ನಿಲ್ದಾಣದ ಹೊರಗಡೆ ಕಣ್ಣಳತೆ ದೂರದಲ್ಲಿರುವ ಸತ್ಯಧ್ಯಾನ ವಿದ್ಯಾಪೀಠವು ಪುರಾಣ ಕಾಲದ ಗುರುಕುಲ ಮಾದರಿಯನ್ನು ನೆನಪಿಸುತ್ತದೆ ಅಲ್ಲಿಯ ವಾತಾವರಣ ವೇದ ಕಾಲದ ಸಂಸ್ಕೃತಿಯ ನೆನಪನ್ನು ತರುತ್ತದೆ.

ಕನ್ನಡಿಗ ಅರಸರಿಂದ ನಿರ್ಮಾಣವಾದುದೆಂದು ಶಿಲಾಶಾಸನದಿಂದ ತಿಳಿದು ಬರುವ ಅಂಬರನಾಥ ಪ್ರಾಚೀನ ಶಿವ ದೇವಾಲಯ ವಿದ್ಯಾವಿಹಾರನ್ ಅಂಬಿಕಾ ದೇವಾಲಯ ಘನ್ಯೋಲಿಯ ಮೂಕಾಂಬಿಕಾ ದೇವಾಲಯ, ಕಾಂಜೂರ್ ಮಾರ್ಗದ ಅಂಬಿಕಾ ಅನ್ನಪೂರ್ಣೇಶ್ವರಿ ಮಂದಿರ, ಜೋಗೇಶ್ವರಿ ಪೂರ್ವದ ಜಗದಂಬಾ ಕಾಳಭೈರವ ದೇವಾಲಯ, ಬೊರಿವಲಿಯ ಮಹಿಷಮರ್ದಿನಿ ದೇವಾಲಯ, ಓರಿಮರಿಯ ಉಮಾಮಹೇಶ್ವರಿ ದೇವಾಲಯ, ಬಂಟರ ಭವನದ ವಿಷ್ಣುಮೂರ್ತಿ ದೇವಾಲಯ, ದಹಿಸಾರಿನ ದುರ್ಗಾ ಪರಮೇಶ್ವರಿ, ಶನೀಶ್ವರ ದೇವಾಲಯ, ಸಾಂತಾಕ್ರೂಜ್ ನ ಮಹಾಕಾಳಿ ಮಂದಿರ, ನಾಗಿಂದಾಸಪಾದದ ಶ್ರೀ ದುರ್ಗಾಮಾತಾ ಮಂದಿರಗಳಲ್ಲಿ ಶಿಲಾಮಯ ಗರ್ಭಗೃಹ ನಿರ್ಮಾಣ ಮಾಡಿದ್ದಾರೆ.

ಯುನೆಸ್ಕೋ ಗುರುತಿಸಿದ ಅನೇಕ ಐತಿಹಾಸಿಕ ಹಿನ್ನೆಲೆಯುಳ್ಳ ದೇವಾಲಯಗಳಲ್ಲಿ ಥಾಣಾ ಜಿಲ್ಲೆಯ ಅಂಬರನಾಥ ಶಿವ ದೇವಾಲಯವು ಒಂದು ಕಲ್ಯಾಣಿ ಚಾಲುಕ್ಯರಲ್ಲಿ ಪ್ರಸಿದ್ಧವಾದ ಸೋಮೇಶ್ವರನ ಸಾವಂತ ರಾಜರಾದ ಶಿಲ್ದಾರ ವಂಶದ ಮುಮ್ವಾನಿ ಅರಸರಿಂದ 1061 ರಲ್ಲಿ ದೇವಾಲಯ ನಿರ್ಮಿಸಲಾಗಿದೆ. 1850 ರ ವೇಳೆಗೆ ಈ ದೇವಾಲಯ ಬಾಹ್ಯ ಪ್ರಪಂಚಕ್ಕೆ ಪರಿಚಯವಿರಲಿಲ್ಲ. 1852 ರಲ್ಲಿ ಡಾ. ವಿಲ್ಸನ ಈ ದೇವಾಲಯವನ್ನು ಸಂದರ್ಶಿಸಿ ಹೊರಜಗತ್ತಿಗೆ ಪರಿಚಯಿಸಿದ ಮೇಲೆ ಇದು ಬಹು ಪ್ರಸಿದ್ಧಿಯನ್ನು ಪಡೆಯಿತು. ಈ ಶಿಲಾಮಯ ದೇವಾಲಯ ಕನ್ನಡಿಗರ ಕೊಡುಗೆಯೆಂದು ಇತಿಹಾಸಕಾರರು ಇಲ್ಲಿಯ ಶಾಸನಗಳ ಆಧಾರದಿಂದ ಉಲ್ಲೇಖಿಸಿರುತ್ತಾರೆ.

ಮುಂಬಯಿ ಮತ್ತು ಉಪನಗರಗಳಲ್ಲಿ ಹರಡಿಕೊಂಡರುವ ಇಂತಹ ಧಾರ್ಮಿಕ ಕೇಂದ್ರಗಳ ಸಮಗ್ರ ಮಾಹಿತಿಯನ್ನು ಕಲೆ ಹಾಕಿ ದಾಖಲಿಸುವ ಕಾರ್ಯ ಈ ವರೆಗೆ ನಡೆದಂತಿಲ್ಲ ಇದು ಸುಲಭದ ಕೆಲಸವೂ ಅಲ್ಲ ಆದರೆ ಇದೀಗ ಶ್ರೀ ವಿಶ್ವನಾಥ ದೊಡ್ಮನೆಯವರ ಮುಂದಾಳುತ್ವದಲ್ಲಿ ನಗರದ ಮಯೂರ ವರ್ಮ ಪ್ರತಿಷ್ಠಾನವು ಇಂತಹ ಕೆಲಸವನ್ನು ಕೆಲಸವನ್ನು ಕೈಗೆತ್ತಿ ಕೊಂಡಿರುವುದು ಶ್ಲಾಘನೀಯ ಮಯೂರವರ್ಮ ಪ್ರತಿಷ್ಠಾನದಿಂದ ಇಂತಹ ಐತಿಹಾಸಿಕ ಕೃತಿಗಳು ಮುಂದೆಯೂ ಲೋಕಾರ್ಪಣೆಗೊಳ್ಳಲಿ ಒಂಭತ್ತು ಪುಟಗಳಲ್ಲಿ ಆಕರ್ಷಕ ಚಿತ್ರಗಳಿವೆ ಗೌ. ಸಂಪಾದಕರಾದ ಬಿ. ಬಾಲಚಂದ್ರರಾವ್. ಸಂಪಾದಕರಾದ ವಿಶ್ವನಾಥ ದೊಡ್ಮನೆ ಅನೇಕರು ಇದಕ್ಕೆ ಕೈಜೊಡಿಸಿದ್ದಾರೆ. ಸನಾತನ ಕಾಲಮಾನ ಕಿರುಪರಿಚಯವು ಇದೆ. 78 ಭಜನಾ ಮಂಡಳಿಗಳು ಇವೆ. ವಿಶ್ವನಾಥ ಅವರ ಚಿರವಾಣಿ 9222137634

ಲೇಖಕರು:
ಶ್ರೀ ಎಂ.ವೈ. ಮೆಣಸಿನಕಾಯಿ
9449209570
ಬೆಳಗಾವಿ

RELATED ARTICLES

Most Popular

error: Content is protected !!
Join WhatsApp Group