“ವಾಗೀರ್ ” ದೇಶಾರ್ಪಣೆ

Must Read

ನೌಕಾಪಡೆಗೆ ಹೊಸ ಸುಧಾರಿತ ಜಲಾಂತರ್ಗಾಮಿ ನೌಕೆ

ಶಬ್ದಸಂವೇದಿಯಾಗಿರುವ ಸುಧಾರಿತ ಜಲಾಂತರ್ಗಾಮಿ ನೌಕೆ “ವಾಗೀರ್” ಅನ್ನು ಇಂದು ಲೋಕಾರ್ಪಣೆಗೊಳಿಸುವ ಮೂಲಕ ನೌಕಾಪಡೆಯ ಸೇವೆಗೆ ನೀಡಲಾಯಿತು.

ಮುಂಬೈನ ಮಜಗಾಂವ್ ಬಂದರಿನಲ್ಲಿ ಗುರುವಾರದಂದು ವಾಗೀರ್ ಅನ್ನು ಸೇವೆಗೆ ಅಣಿಗೊಳಿಸಲಾಯಿತು.

ರಾಜ್ಯ ರಕ್ಷಣಾ ಸಚಿವ ಶ್ರೀಪಾದ ನಾಯಕ ಅವರ ಪತ್ನಿ ವಿಜಯಾ ಅವರು ಈ ಜಲಾಂತರ್ಗಾಮಿ ಯನ್ನು ಲೋಕಾರ್ಪಣೆಗೊಳಿಸಿದರು. ಶ್ರೀಪಾದ ನಾಯಕ ಅವರು ವಿಡಿಯೋ ಕಾನ್ಫರೆನ್ಸ್ ಮೂಲಕ ಅತಿಥಿಯಾಗಿ ಪಾಲ್ಗೊಂಡರು.

ಫ್ರಾನ್ಸ್ ನೌಕಾ ಪಡೆಯಿಂದ ವಿನ್ಯಾಸಗೊಳಿಸಿದ ವಾಗೀರ್ ಐದನೆಯ ಸ್ಕಾರ್ಪಿಯನ್ ವರ್ಗಕ್ಕೆ ಸೇರಿದ್ದು ಭಾರತೀಯ ನೌಕಾಪಡೆಗೆ ಮತ್ತೊಂದು ಬಲ ತುಂಬಿದಂತಾಗಿದೆ. ಜಲ ಯುದ್ಧ, ಗುಪ್ತಚರ ಮಾಹಿತಿ ಸಂಗ್ರಹ ಅಲ್ಲದೆ ಕಣ್ಗಾವಲು ಕಾರ್ಯಗಳನ್ನು ಈ ಜಲಾಂತರ್ಗಾಮಿ ಯಶಸ್ವಿಯಾಗಿ ನೆರವೇರಿಸಲಿದೆ ಎಂದು ನೌಕಾಪಡೆಯ ಮೂಲಗಳು ತಿಳಿಸಿವೆ

Latest News

ಬೆಳ್ಳಿ ಬಂಗಾರ ಕದ್ದ ಖದೀಮರ ಹೆಡೆಮುರಿ ಕಟ್ಟಿದ ಗೋಕಾಕ ಪೋಲಿಸರು

ಗೋಕಾಕ ನಗರದ ಬೀಗ ಹಾಕಿದ್ದ ಮನೆಯೊಂದರ ಕೀಲಿ ಮುರಿದು ಬೆಳ್ಳಿ ಬಂಗಾರ ಸೇರಿದಂತೆ ನಗದು ಹಣ ಕದ್ದು ಪರಾರಿಯಾಗಿದ್ದ ಕುಖ್ಯಾತ ಖದೀಮರನ್ನು ಗೋಕಾಕ ಪೋಲಿಸರು ಬಂಧಿಸುವಲ್ಲಿ...

More Articles Like This

error: Content is protected !!
Join WhatsApp Group