Homeಸುದ್ದಿಗಳುಸಿಡಿ ಪ್ರಕರಣದ ನಂತರ ಆರು ಸಚಿವರಿಗೆ ಟೆನ್ಷನ್ ; ಕೋರ್ಟಿಗೆ ಅರ್ಜಿ ಸಲ್ಲಿಸಿದ ಸಚಿವರು

ಸಿಡಿ ಪ್ರಕರಣದ ನಂತರ ಆರು ಸಚಿವರಿಗೆ ಟೆನ್ಷನ್ ; ಕೋರ್ಟಿಗೆ ಅರ್ಜಿ ಸಲ್ಲಿಸಿದ ಸಚಿವರು

ಬೆಂಗಳೂರು – ಜಲ ಸಂಪನ್ಮೂಲ ಸಚಿವ ರಮೇಶ ಜಾರಕಿಹೊಳಿಯವರ ಸಿಡಿ ಹೊರಬೀಳುತ್ತಿದ್ದಂತೆಯೇ ಬಿಜೆಪಿಯ ವಲಸಿಗ ಸಚಿವರಲ್ಲಿ ಆತಂಕ ಹೆಚ್ಚಿದ್ದು ತಮ್ಮ ಬಗ್ಗೆ ಮಾಧ್ಯಮಗಳಲ್ಲಿ ಯಾವುದೇ ರೀತಿಯ ವರದಿಗಳು ಬರದಂತೆ ಮಾಧ್ಯಮಗಳಿಗೆ ತಡೆ ನೀಡಬೇಕು ಎಂದು ಆರು ಜನ ಸಚಿವರು ಸಿಟಿ ಸಿವಿಲ್ ಕೋರ್ಟಿಗೆ ಮನವಿ ಸಲ್ಲಿಸಿದ್ದಾರೆ.

ಸಹಕಾರ ಸಚಿವ ಎಸ್ ಟಿ ಸೋಮಶೇಖರ, ಕೃಷಿ ಸಚಿವ ಬಿ ಸಿ ಪಾಟೀಲ, ನಗರಾಭಿವೃದ್ಧಿ ಸಚಿವ ಭೈರತಿ ಬಸವರಾಜ್, ಆರೋಗ್ಯ ಸಚಿವ ಡಾ.ಕೆ ಸುಧಾಕರ, ಕಾರ್ಮಿಕ ಸಚಿವ ಶಿವರಾಮ ಹೆಬ್ಬಾರ, ಕ್ರೀಡಾ ಸಚಿವ ಕೆ ಸಿ ನಾರಾಯಣ ಗೌಡ ಇವರೇ ಆ ಆರು ಸಚಿವರು.

ತಮ್ಮ ವಿರುದ್ಧ ಯಾವುದೇ ವರದಿಗಳನ್ನು ಪ್ರಸಾರ ಮಾಡದಂತೆ ಮಾಧ್ಯಮಗಳಿಗೆ ನಿರ್ಬಂಧ ಹೇರಬೇಕೆಂದು ಒಂದೇ ಫಾರ್ಮ್ ನಲ್ಲಿ ಇವರು ಅರ್ಜಿ ಸಲ್ಲಿಸಿದ್ದು ಜನತೆಯಲ್ಲಿ ಅಚ್ಚರಿ ಮೂಡಿಸಿದೆ.

ಜಾರಕಿಹೊಳಿ ಸಿಡಿ ಬಾಂಬ್ ಸಿಡಿದ ನಂತರ ಇವರು ಕೋರ್ಟಿಗೆ ಅರ್ಜಿ ಸಲ್ಲಿಸಿದ್ದು ಯಾವ ಕಾರಣಕ್ಕೆ ಎಂಬ ಜಿಜ್ಞಾಸೆ ಜನತೆಯಲ್ಲಿ ಶುರುವಾಗಿದ್ದು ಇವರೇಕೆ ಕೋರ್ಟಿಗೆ ಅರ್ಜಿ ಸಲ್ಲಿಸಬೇಕು ಅಂಥ ತಪ್ಪು ಇವರೇನು ಮಾಡಿದ್ದಾರೆ ಎಂದು ವಿಚಾರ ಮಾಡುವಂತಾಗಿದೆ.

RELATED ARTICLES

Most Popular

error: Content is protected !!
Join WhatsApp Group