Monthly Archives: July, 2025
ಸುದ್ದಿಗಳು
ರಸ್ತೆ ಸುಧಾರಣೆಗೆ ಆರ್ ಡಿಪಿಆರ್ ನಿಂದ ೧೦ ಕೋ. ರೂ. ಬಿಡುಗಡೆ – ಬಾಲಚಂದ್ರ ಜಾರಕಿಹೊಳಿ
ಗೋಕಾಕ- ಆರ್ ಡಿಪಿಆರ್ ಇಲಾಖೆಯಿಂದ ರಸ್ತೆ ಸುಧಾರಣಾ ಕಾಮಗಾರಿಗಳಿಗಾಗಿ ೧೦ ಕೋಟಿ ರೂಪಾಯಿ ಅನುದಾನ ಬಿಡುಗಡೆಯಾಗಿದೆ ಎಂದು ಶಾಸಕ ಮತ್ತು ಬೆಮುಲ್ ಅಧ್ಯಕ್ಷ ಬಾಲಚಂದ್ರ ಜಾರಕಿಹೊಳಿ ಅವರು ಹೇಳಿದರು.ಮಂಗಳವಾರದಂದು ೧.೨೦ ಕೋಟಿ ರೂಪಾಯಿ ವೆಚ್ಚದ ತಾಲ್ಲೂಕಿನ ಕೌಜಲಗಿ- ಹೊನಕುಪ್ಪಿ ರಸ್ತೆ ಸುಧಾರಣೆಗೆ ಗುದ್ದಲಿ ಪೂಜೆ ನೆರವೇರಿಸಿ ಅವರು ಮಾತನಾಡಿದರು.ಯಾದವಾಡ ಮುಖ್ಯ ರಸ್ತೆಯಿಂದ ಕುಲಗೋಡ ಹಣಮಂತ...
ಸುದ್ದಿಗಳು
ಮಕ್ಕಳಿಗೆ ಹಾಲು ಕುಡಿಸಿ ನಾಗ ಪಂಚಮಿ ಆಚರಣೆ
ಬೆಳಗಾವಿ - ಸಂಚಾರಿ ಗುರುಬಸವ ಬಳಗ ಬೆಳಗಾವಿ ವತಿಯಿಂದ ಬಸವ ಪಂಚಮಿ ನಿಮಿತ್ತ ಪ್ರತಿ ವರ್ಷದಂತೆ ಸಮೃದ್ಧ ಅಂಗವಿಕಲರ ಸಂಸ್ಥೆ ಜಯನಗರ ಬೆಳಗಾವಿ ಇಲ್ಲಿನ ವಿಕಲಚೇತನ ಮಕ್ಕಳಿಗೆ ಹಾಲು ಕುಡಿಸುವ ಮೂಲಕ ವೈಚಾರಿಕತೆಯಿಂದ ಆಚರಿಸಲಾಯಿತು.ಅಧ್ಯಕ್ಷತೆಯನ್ನು ಸಂಸ್ಥೆಯ ಅಧ್ಯಕ್ಷರಾದ ಶಿವನಗೌಡ ಪಾಟೀಲ ವಹಿಸಿದ್ದರು. ಪ್ರಶಾಂತ ಪೋತದಾರ ಸ್ವಾಗತಿಸಿದರು.ಸಂಚಾರಿ ಗುರು ಬಸವ ಬಳಗದ ಶಿವಾನಂದ ಲಾಳಸಿಂಗಿ ಪ್ರಾಸ್ತಾವಿಕವಾಗಿ...
ಲೇಖನ
ಲೇಖನ : ಗೌಡಗೆರೆಯ ಶ್ರೀ ಚಾಮುಂಡೇಶ್ವರಿ ಬಸವಪ್ಪನವರ ಕ್ಷೇತ್ರಕ್ಕೆ ಒಂದು ಭೇಟಿ
ರಾಮನಗರ ಜಿಲ್ಲೆ ಗೊಂಬೆನಾಡು ಚನ್ನಪಟ್ಟಣ ತಾಲ್ಲೂಕಿನ ಗೌಡಗೆರೆಯಲ್ಲಿ ಪಂಚಲೋಹದ ೬೦ ಅಡಿ ಎತ್ತರದ ಶ್ರೀ ಚಾಮುಂಡೇಶ್ವರಿ ವಿಗ್ರಹ ರಾಜ್ಯದ ಗಮನ ಸೆಳೆದ ಕ್ಷೇತ್ರವಾಗಿ ನನ್ನ ಮಡದಿಯು ಶ್ರೀಕ್ಷೇತ್ರಕ್ಕೆ ಹೋಗಿಬರುವ ಬಯಕೆ ವ್ಯಕ್ತಪಡಿಸಿದಳು. ನಾವು ಭಾನುವಾರ ಬೆಳಿಗ್ಗೆ ಮೈಸೂರಿಗೆ ಹೋಗಿ ರಾತ್ರಿ ಅಲ್ಲಿಯ ಬೆಳವಾಡಿಯಲ್ಲಿ ತಂಗಿದ್ದು ಸೋಮವಾರ ಬೆಳಿಗ್ಗೆ ಬೇಗನೆ ಎದ್ದು ಸ್ನಾನ ಮಾಡಿ ಮಡಿಯಾಗಿ...
ಸುದ್ದಿಗಳು
ಮೋಳಿಗೆ ಮಾರಯ್ಯ ಕಾಯಕನಿಷ್ಠ ಶರಣ – ಸಾಹಿತಿ ಸಂಗಮೇಶ ಗುಜಗೊಂಡ
ಮೂಡಲಗಿ: ಬಸವಣ್ಣನವರ ತತ್ವ, ವ್ಯಕ್ತಿತ್ವದಿಂದ ಪ್ರಭಾವಿತರಾದ ಮೋಳಿಗೆ ಮಾರಯ್ಯ ತಮ್ಮ ವಚನಗಳಲ್ಲಿ ಡಂಭಾಚಾರವನ್ನು ಕಟುವಾಗಿ ಟೀಕಿಸಿದ ಕಾಯಕನಿಷ್ಠ ಶರಣ ಎಂದು ಗುರುತಿಸಿಕೊಂಡಿದ್ದರು ಎಂದು ಮಕ್ಕಳ ಸಾಹಿತಿ ಪ್ರೊ. ಸಂಗಮೇಶ ಗುಜಗೊಂಡ ಹೇಳಿದರು.ತಾಲ್ಲೂಕಿನ ಅರಭಾವಿಯ ಜಗದ್ಗುರು ದುರದುಂಡೀಶ್ವರ ಮಠದ ೧೯ನೇ ಮಾಸಿಕ ಶಿವಾನುಭವ ಗೋಷ್ಠಿಯಲ್ಲಿ ಮೋಳಿಗೆ ಮಾರಯ್ಯ ಅವರ ಜೀವನ ಚರಿತ್ರೆ ಕುರಿತು ಉಪನ್ಯಾಸ ನೀಡಿದ...
Uncategorized
ಅರಣ್ಯ ನಾಶದಿಂದ ಇಂದು ಚಿಂತಾಜನಕ ಸ್ಥಿತಿ ; ಈಶ್ವರ ಖಂಡ್ರೆ ಕಳವಳ
ಸಾಲುಮರದ ತಿಮ್ಮಕ್ಕ ವೃಕ್ಷೋದ್ಯಾನ ಲೋಕಾರ್ಪಣೆ ಸಿಂದಗಿ: ನಮ್ಮ ಪೂರ್ವಜರು ನೈಸರ್ಗಿಕ ಸಂಪತ್ತನ್ನು ಹೆಚ್ಚಾಗಿ ಬಳಕೆ ಮಾಡಿ ಆರೋಗ್ಯಕರವಾದ ಬದುಕನ್ನ ನಡೆಸುತ್ತಿದ್ದರು. ಆದರೆ ಇಂದು ನಾವೆಲ್ಲ ಐಷಾರಾಮಿ ಬದುಕಿನ ಕಡೆಗೆ ವಾಲುತ್ತಿದ್ದೇವೆ. ನಾವು ಬಳಕೆ ಮಾಡುವ ಪ್ರತಿ ವಸ್ತುವಿನಲ್ಲಿ ಮತ್ತು ಸೇವನೆ ಮಾಡುವ ಪ್ರತಿ ಆಹಾರ ಪದಾರ್ಥದಲ್ಲಿ ಮಾಲಿನ್ಯವಿದೆ. ಆರೋಗ್ಯವನ್ನು ಹೇಗೆ ಕಾಪಾಡಲು ಸಾಧ್ಯ. ಕೋವಿಡ್ ಸಮಯದಲ್ಲಿ...
ಲೇಖನ
ತಂಬೂರಿ ಜನಪದ ಗಾಯಕರು ಮಹದೇವ ಪೂರಿಗಾಲಿ
ಜನಪದ ಪ್ರಕಾರಗಳಲ್ಲಿ ವಿಭಿನ್ನ ಶೈಲಿಯ ಕಲೆ ಎನಿಸಿಕೊಂಡಿರುವ ತಂಬೂರಿ ಜನಪದ ಕಲೆಯನ್ನು ಕರಗತ ಮಾಡಿಕೊಂಡಿರುವ ಕಲಾವಿದರಲ್ಲಿ ಮಹದೇವ ಪೂರಿಗಾಲಿ ಕೂಡ ಒಬ್ಬರು. ಜನಪದ ಕ್ಷೇತ್ರಕಾರ್ಯದಲ್ಲಿ ಕ್ರಿಯಾಶೀಲರಾಗಿರುವ ಮಳವಳ್ಳಿಯ ಪಿ.ನಾಗರತ್ನಮ್ಮನವರು ಇವರನ್ನು ನನಗೆ ಪರಿಚಯಿಸಿ ಇವರು ಈ ಭಾಗದಲ್ಲಿ ಹೆಸರು ಮಾಡಿರುವ ಜನಪದ ಕಲಾವಿದರು ಎಂದು ತಿಳಿಸಿದರು.ಮಳವಳ್ಳಿ ತಾಲ್ಲೂಕು ಬಿ.ಜಿ.ಪುರ ಹೋಬಳಿ ಪೂರಿಗಾಲಿ ಗ್ರಾಮದ ತಮ್ಮಣ್ಣಯ್ಯ...
ಸುದ್ದಿಗಳು
ಕೌಜಲಗಿಯಲ್ಲಿ ೧೨ ಕೋಟಿ ರೂಪಾಯಿ ವೆಚ್ಚದ ಸಮುದಾಯ ಆರೋಗ್ಯ ಕೇಂದ್ರವನ್ನು ಉದ್ಘಾಟಿಸಿದ ಶಾಸಕ ಬಾಲಚಂದ್ರ ಜಾರಕಿಹೊಳಿ
ಕೌಜಲಗಿ- ಕೌಜಲಗಿ ಭಾಗದಲ್ಲಿ ಬಡ ರೋಗಿಗಳ ಅನುಕೂಲಕ್ಕಾಗಿ ಅತ್ಯಾಧುನಿಕ ಸೌಲಭ್ಯಗಳುಳ್ಳ ಸಮುದಾಯ ಆರೋಗ್ಯ ಕೇಂದ್ರವನ್ನು ಲೋಕಾರ್ಪಣೆ ಮಾಡಿದ್ದು, ಇದನ್ನು ಸಾರ್ವಜನಿಕರು ಸದುಪಯೋಗಪಡಿಸಿಕೊಳ್ಳುವಂತೆ ಶಾಸಕ ಹಾಗೂ ಬೆಮುಲ್ ಅಧ್ಯಕ್ಷ ಬಾಲಚಂದ್ರ ಜಾರಕಿಹೊಳಿ ತಿಳಿಸಿದರು.ಮಂಗಳವಾರದಂದು ಗೋಕಾಕ ತಾಲೂಕಿನ ಕೌಜಲಗಿ ಪಟ್ಟಣದಲ್ಲಿ ೧೨ ಕೋಟಿ ರೂಪಾಯಿ ವೆಚ್ಚದಲ್ಲಿ ನೂತನವಾಗಿ ನಿರ್ಮಿಸಿರುವ ೩೦ ಹಾಸಿಗೆಗಳ ಸಮುದಾಯ ಆರೋಗ್ಯ ಕೇಂದ್ರವನ್ನು ಉದ್ಘಾಟಿಸಿ...
ಸುದ್ದಿಗಳು
ಬೆಳಗಾವಿ ವಿಮಾನ ನಿಲ್ದಾಣ ಅಂತಾರಾಷ್ಟ್ರೀಯ ನಿಲ್ದಾಣವಾಗಿಸಲು ಕಡಾಡಿ ಮನವಿ
ಬೆಳಗಾವಿ: 1824 ರಲ್ಲಿ ಬ್ರಿಟಿಷರ ವಿರುದ್ಧ ಹೋರಾಡಿ ಜಯ ಸಾಧಿಸಿದ ಕಿತ್ತೂರು ರಾಣಿ ಚನ್ನಮ್ಮ ಅವರ ಶೌರ್ಯದ ವಿಜಯೋತ್ಸವದ 201ನೇ ವರ್ಷದ ಹಿನ್ನೆಲೆ ಬೆಳಗಾವಿ ವಿಮಾನ ನಿಲ್ದಾಣಕ್ಕೆ “ಕಿತ್ತೂರು ರಾಣಿ ಚೆನ್ನಮ್ಮ ವಿಮಾನ ನಿಲ್ದಾಣ’' ಎಂದು ನಾಮಕರಣ ಮಾಡುವುದು ಹಾಗೂ ವಿಮಾನ ನಿಲ್ದಾಣದ ಮುಂಭಾಗದಲ್ಲಿ ಕಿತ್ತೂರು ರಾಣಿ ಚನ್ನಮ್ಮನ ಭವ್ಯವಾದ ಪ್ರತಿಮೆ ಸ್ಥಾಪನೆ ಜೊತೆಗೆ...
Uncategorized
ರಮೇಶ ಬಿರಾದಾರರ ಸಮಾಜ ಸೇವೆಗೆ ಅರಸಿ ಬಂದ ‘ಸಿದ್ಧಶ್ರೀ’ ರಾಜ್ಯ ಪ್ರಶಸ್ತಿ
ಮೂಡಲಗಿ:-ಪಟ್ಟಣದ ಮೂಡಲಗಿ ಶಿಕ್ಷಣ ಸಂಸ್ಥೆಯಲ್ಲಿ ಶಿಕ್ಷಕರಾಗಿ ಕಾರ್ಯ ನಿರ್ವಹಿಸುತ್ತಿರುವ ರಮೇಶ ಬಿರಾದರರವರ ಪ್ರಾಮಾಣಿಕ ಸಮಾಜ ಸೇವೆಗೆ ಒಲಿದ "ಸಿದ್ಧಶ್ರೀ" ರಾಜ್ಯ ಪ್ರಶಸ್ತಿ.ಸಮಾಜ ಸೇವೆ ಎಂದರೆ, ಸಮಾಜದ ಕಲ್ಯಾಣಕ್ಕಾಗಿ ಮಾಡುವ ನಿಸ್ವಾರ್ಥ ಕಾರ್ಯ. ಬಡವರಿಗೆ, ಅನಾಥರಿಗೆ, ವೃದ್ಧರಿಗೆ ಸಹಾಯ ಮಾಡುವುದು, ಪರಿಸರ ಸಂರಕ್ಷಣೆ, ರಕ್ತದಾನ, ಶಿಕ್ಷಣ ಪ್ರಚಾರ, ಆರೋಗ್ಯ ಜಾಗೃತಿ ಹೀಗೆ ಅನೇಕ ಕಾರ್ಯಗಳು ಸಮಾಜ...
ಲೇಖನ
ಪ್ರೇಮ ಪಯಣ : ಕಾದಿದೆ ಮನ ಒಪ್ಪಿಗೆಗೆ ಸಿಹಿ ಅಪ್ಪುಗೆಗೆ
ಪ್ರಿಯ ಪ್ರಿಯಾ,
ಬೆನ್ನಿನ ತುಂಬ ದಟ್ಟನೆಯ ಕರಿಮೋಡ ಕವಿದಂತಿರುವ ಇಳಿಬಿಟ್ಟಿರುವ ಕೇಶರಾಶಿ, ರಂಭೆ ಊರ್ವಶಿಯರ ನಾಚಿಸುವ ಸುಂದರ ನೀಳ ಕಾಯ. ಬಳಕುವ ಬಳ್ಳಿಯಂತಿರುವ ನಡಿಗೆ ಪೂರ್ಣ ಹುಣ್ಣಿಮೆಯ ದಿನ ನಿನ್ನ ಬರುವ ಕಂಡು ಚೆಲುವ ಚಂದಿರ ಮೋಡಗಳ ಮರೆಯಲ್ಲಿ ನಾಚಿ ಮರೆಯಾದ.ನಮ್ಮಿಬ್ಬರ ಮಿಲನದ ವೇಳೆಗೆ ಅರೆಮುಖ ತೋರಿ ಮರೆಯಿಂದಲೇ ನೋಡಿ ನಸುನಕ್ಕ. ಅತಿ ಸಲುಗೆಯ ಮಧುರ...
Latest News
ಕವನ : ಬೆಳಕಿನ ದೀಪಾವಳಿ
ಬೆಳಕಿನ ದೀಪಾವಳಿ
ಬೆಳಕು ಸರಿದು ನೇಸರನ
ಅಸ್ತದೊಡನೆ
ಜಗಕೆ ಜಗಮಗಿಸುವ
ದೀಪಗಳ ದರ್ಶನ
ಬಾನಂಚಿನಲಿ ಶಬ್ದಗಳ ನಡುವೆ
ಬೆಳಕಿನ ಚಿತ್ತಾರ
ಮೂಡಿಸುವ ಹಬ್ಬ
ಬೆಳಕಿನ ದೀಪಾವಳಿತಮವ ಕಳೆದು
ಜ್ಯೋತಿ ಬೆಳಗುವ
ನಾಡಿನಪವಿತ್ರ ಹಬ್ಬ
ತಳಿರು ತೋರಣ ಕಟ್ಟಿ
ಮನೆಯನು ಸಿಂಗರಿಸಿ
ಹಬ್ಬದಡುಗೆಯ ಸವಿಯುಣ್ಣುವ
ಮನದ ಖುಷಿಯ...