Monthly Archives: August, 2025
ಸುದ್ದಿಗಳು
ಸಿಂದಗಿ : ಸುಪ್ರೀಮ್ ಆದೇಶದಂತೆ ಜಾಗ ತೆರವುಗೊಳಿಸಲು ಮನವಿ ಮಾಡಿದ ಅಧಿಕಾರಿಗಳು
ಸಿಂದಗಿ: ಪಟ್ಟಣದಲ್ಲಿನ ಸರ್ವೇ ನಂಬರ್ ೮೪೨/೨*೨ರ ೨ ಎಕರೆ ೧೦ ಗುಂಟೆ ಜಮೀನಿನಲ್ಲಿ ಕಳೇದ ೨೫ ವರ್ಷಗಳ ಹಿಂದೆ ಪುರಸಭೆ ನೀಡಿದ ನಿವೇಶನದಲ್ಲಿ ಇರುವ ೮೦ ಕುಟುಂಬಗಳ ಮನೆಗಳನ್ನು ಎರಡು ದಿನಗಳಲ್ಲಿ ತೆರವುಗೊಳಿಸಬೇಕು ಎಂದು ಸುಪ್ರೀಂ ಕೋರ್ಟ್ ಆದೇಶದ ಹಿನ್ನೆಲೆಯಲ್ಲಿ ಪುರಸಭೆ ವತಿಯಿಂದ ನೋಟೀಸ ನೀಡಿ ೨೩ ರಂದು ರೊಳಗಾಗಿ ಮನೆಗಳನ್ನು ತೆರವುಗೊಳಿಸಬೇಕು ಎಂದು...
ಸುದ್ದಿಗಳು
ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ ಜಯಂತಿ ನಿಮಿತ್ತ ೨೪ ರಂದು ಪ್ರತಿಭಾ ಪುರಸ್ಕಾರ
ಸಿಂದಗಿ; ತಾಲೂಕಾ ಕ್ರಾಂತಿವೀರ ಸಂಗೋಳ್ಳಿ ರಾಯಣ್ಣ ನೌಕರರ ಸಂಘದವತಿಯಿಂದ ೨೪ ರಂದು ಪಟ್ಟಣದ ಗುಂದಗಿ ಹಾಲ್ನಲ್ಲಿ ಬೆಳಿಗ್ಗೆ ೧೧ ಗಂಟೆಗೆ ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ ಜಯಂತಿ ಹಾಗೂ ಪ್ರತಿಭಾ ಪುರಸ್ಕಾರ ಹಮ್ಮಿಕೊಳ್ಳಲಾಗಿದೆ ಎಂದು ಅಧ್ಯಕ್ಷ ರಾಯಣ್ಣ ಇವಣಗಿ ಹೇಳಿದರು.ಪಟ್ಟಣದ ಪ್ರವಾಸಿ ಮಂದಿರದಲ್ಲಿ ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ ಜಯಂತಿ ಹಾಗೂ ಪ್ರತಿಭಾ ಪುರಸ್ಕಾರ ನಿಮಿತ್ತ ನಡೆಸಿದ...
ಸುದ್ದಿಗಳು
ಬೀದರ್ ಪೊಲೀಸರ ಭರ್ಜರಿ ಕಾರ್ಯಾಚರಣೆ 15.5 ಲಕ್ಷ ಮೌಲ್ಯದ ಸ್ವತ್ತು ವಶ
ಬೀದರ - ಬೀದರ ಜಿಲ್ಲೆಯ 4 ಪೊಲೀಸ್ ಠಾಣೆಗಳಲ್ಲಿ ದಾಖಲಾಗಿದ್ದ ಐದು ಪ್ರಕರಣಗಳನ್ನು ಬೇಧಿಸಿರುವ ಪೊಲೀಸರು ಸುಮಾರು 15.5 ಲಕ್ಷ ಮೌಲ್ಯದ ವಿವಿಧ ವಸ್ತುಗಳನ್ನು ವಶಪಡಿಸಿಕೊಂಡಿದ್ದಾರೆ.ನಗರದ ಮಾಗರವಾಡಿ ಗಲ್ಲಿಯ ಮನೆಯಲ್ಲಿ ಅಕ್ರಮವಾಗಿ ಇಟ್ಟು ಮಾರಾಟ ಮಾಡುತ್ತಿದ್ದ ಮಾದಕ ದ್ರವ್ಯ ಹಾಗೂ ನಶೆ ಗುಳಿಗೆ, ಎಸ್ಕಫ್ ಸಿರಪ್ 36 ಬಾಟಲ್ಸ ಸೆನ್ಕೋಫ್ ಸಿರಪ್ 28 ಬಾಟಲ್ ...
ಸುದ್ದಿಗಳು
ಮಹಾಸಾಧ್ವಿ ಮಲ್ಲಮ್ಮ ಹಾಗೆ ಪ್ರತಿಯೊಬ್ಬ ಮಹಿಳೆಯರು ಬದುಕಬೇಕು-ಕಳ್ಳಿಗುದ್ದಿ
ಮೂಡಲಗಿ -ಕನ್ನಡ ಸಾಹಿತ್ಯ ಪರಿಷತ್ತು ಮೂಡಲಗಿ ಹಾಗೂ ರೆಡ್ಡಿ ಸಮಾಜದವರ ಸಹಯೋಗದಲ್ಲಿ ಮೂಡಲಗಿ ಪಟ್ಟಣದ ಎಮ್.ಇ.ಎಸ್.ಶಿಕ್ಷಣ ಸಂಸ್ಥೆಯ ಸಭಾಭವನದಲ್ಲಿ ಶ್ರಾವಣ ಮಾಸದ ನಿಮಿತ್ತ “ಹೇಮರಡ್ಡಿ ಮಲ್ಲಮ್ಮ ”ನ ಕುರಿತು ವಿಶೇಷ ಉಪನ್ಯಾಸ ಕಾರ್ಯಕ್ರಮ ಜರುಗಿತು.ಉಪನ್ಯಾಸಕರಾದ ಹಳ್ಳೂರಿನ ಸರಕಾರಿ ಪದವಿಪೂರ್ವ ಕಾಲೇಜು ಪ್ರಭಾರಿ ಪ್ರಾಚಾರ್ಯರಾದ ವಾಯ್. ಬಿ. ಕಳ್ಳಿಗುದ್ದಿಯವರು ಮಾತನಾಡುತ್ತಾ, ಹೇಮರೆಡ್ಡಿ ಮಲ್ಲಮ್ಮಳು ಶ್ರೀಶೈಲದ ಚೆನ್ನಮಲ್ಲಿಕಾರ್ಜುನ...
ಸುದ್ದಿಗಳು
ಮುಗಳಖೋಡದ ವಿದ್ಯಾರ್ಥಿಗಳಿಗೆ 2.16 ಲಕ್ಷ ಶಿಷ್ಯ ವೇತನ ವಿತರಣೆ
ಮುಧೋಳ - ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ {ರಿ} ಮುಧೋಳ ಇವರಿಂದ ಮುಗಳಖೋಡದ ಏಳು ವಿದ್ಯಾರ್ಥಿಗಳಿಗೆ ವೃತ್ತಿಪರ ಶಿಕ್ಷಣಕ್ಕೆ 2ಲಕ್ಷ 16 ಸಾವಿರ ಮೊತ್ತದ ಸುಜ್ಞಾನ ನಿಧಿ ಶಿಷ್ಯವೇತನದ ಮಂಜೂರಾತಿ ಪತ್ರವನ್ನು ವಿತರಣೆಯನ್ನು ಮಾಡಲಾಯಿತು.ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಯ ಕಚೇರಿಯಲ್ಲಿ ಶ್ರಾವಣ ಸಂಭ್ರಮ ಕೊನೆಯ ಶುಕ್ರವಾರ ತನ್ನಿಮಿತ್ತ ಲಕ್ಷ್ಮಿ ಪೂಜೆಯನ್ನ ಮಾಡಿ ಕೃಷಿ...
ಕವನ
ಕವನ : ಚೆಂದುಳ್ಳಿ ಮಿಂಚುಳ್ಳಿ
ಚೆಂದುಳ್ಳಿ ಮಿಂಚುಳ್ಳಿ
ಬೆಳ್ಳಿಯ ಬಣ್ಣದವಳು
ಮೊಗ್ಗಿನ ಜಡೆಯವಳು
ಅಲ್ಲೂ ಇಲ್ಲೂ
ಎಲ್ಲೂ ಎಲ್ಲೆಲ್ಲೂ
ಕಾಣುತಿರುವೆ
ಒಳಗೂ ಹೊರಗೂ
ಒಳಗೊಳಗೂ
ಕಾಡುತಿರುವೆ
ಮನದರಸಿಯೆ ಪಟ್ಟದರಸಿಯೆ
ಕಾಣುತಿರುವೆ ಕಾಡುತಿರುವೆಬಾಗಿ ಬಳುಕಿ
ತುಂಬಿ ತುಳುಕಿ
ಜಗದಗಲಕೆ ಪ್ರೀತಿ ಹಬ್ಬಿಸಿ
ಮಿರಿ ಮಿರಿ ಮಿನುಗುವ ನಗುವ ಚೆಲ್ಲಿ
ಕ್ಷಣ ಕ್ಷಣ ಅನುಕ್ಷಣ ಹಾಕಿ ಅನುರಾಗದ ರಂಗವಲ್ಲಿ
ರೆಕ್ಕೆ ಬಿಚ್ಚಿ ಹಾರಿತು ಉಲ್ಲಾಸದಿ ಉಕ್ಕಿತು ಹರೆಯ ಅಲ್ಲಿಬಾಗಿಲ ಬಳಿ
ಬಂದು ನಿಂದು
ಮಂದಾರ ಗಂಧ ತಂದು
ಕತ್ತಲನು ದೂರ ಸರಿಸಿ
ಎದೆಯೊಳಗೆ ಹೃದಯದೊಳಗೆ ಚೆಲ್ಲಿದೆ...
ಲೇಖನ
‘ಅನುಭವ ಕಳಶ ಅಮೃತ ವರುಷ’: ಅಭಿನಂದನ ಗ್ರಂಥ ವಿಮರ್ಶೆ ಲೇಖನ.
'ಅನುಭವ ಕಳಶ ಅಮೃತ ವರುಷ' ಎಪ್ಪತೈದು ವಸಂತಗಳ ಸವಿನೆನಪಿಗಾಗಿ 'ಅಮೃತ ಮಹೋತ್ಸವ' ಆಚರಣೆಯ ಪ್ರತಿಬಿಂಬದಂತಿಹ ಅಭಿನಂದನ ಗ್ರಂಥವಿದು. ಗುಲಬುರ್ಗಾ ವಿ ವಿ ಯ ಪ್ರಾಣಿಶಾಸ್ತ್ರ ವಿಭಾಗದ ಮುಖ್ಯಸ್ಥರು,ಕಲಬುರ್ಗಿಯ ವಿಶ್ರಾಂತ ಪ್ರಾಧ್ಯಾಪಕರಾದ ಡಾ.ಸರಸ್ವತಿ ಪಾಟೀಲ ಅವರು ಈ ಕೃತಿಯ ಗೌರವ ಸಂಪಾದಕರು.ಬಸವ ತತ್ವ ತಿಳಿವಳಿಕೆ ಮತ್ತು ಸಂಶೋಧನಾ...
ಸುದ್ದಿಗಳು
ಜೀವನಕ್ಕೆ ನಗು ಬೇಕು ಇಲ್ಲದಿದ್ದರೆ ಬಾಳು ತಲೆ ಭಾರವಾಗುವುದು – ಪೂಜ್ಯ ವಾಗ್ದೇವಿ ತಾಯಿ
ಬೆಳಗಾವಿ - ವಚನ ಪಿತಾಮಹ ಡಾ ಫ ಗು ಹಳಕಟ್ಟಿ ಭವನ ಮಹಾಂತೇಶ ನಗರ ಬೆಳಗಾವಿಯಲ್ಲಿ ದಿ.21.08.2025ರಂದು ಪೂಜ್ಯ ಕುಮದಿನಿ ತಾಯಿಯವರು ಗುರು ಜಗಜ್ಯೋತಿ ಬಸವಣ್ಣವರ ಭಕ್ತಿ ಗೀತೆ ಹಾಡಿದರು.ಪೂಜ್ಯವಾಗ್ದೇವಿ ತಾಯಿಯವರು ಉಪನ್ಯಾಸ ನಿಡುತ್ತಾ ಶಿವಶರಣ ನಗೆಯ ಮಾರಿತಂದೆ ಜೀವನಕ್ಕೆ ಹಾಸ್ಯಬೇಕು. ನಗೆ ಬೇಕು ಇವಿಲ್ಲದಿದ್ದರೆ ಬಾಳು ತಲೆ ಭಾರವಾಗುವುದು. ಹಾಸ್ಯ ಅಪಹಾಸ್ಯವಾಗ ಬಾರದು.ನಗೆ...
ಸುದ್ದಿಗಳು
ರಸ್ತೆ ಕಾಮಗಾರಿಗೆ ಗುದ್ದಲಿ ಪೂಜೆ ನೆರವೇರಿಸಿದ ಶಾಸಕ ಮಹೇಂದ್ರ ತಮ್ಮಣ್ಣವರ
ಹಳ್ಳೂರ : ಕಾಂಗ್ರೆಸ್ ಸರ್ಕಾರ ಜಾರಿಗೆ ತಂದಿರುವ ನಿಜವಾದ ಪಂಚ ಯೋಜನೆಗಳ ಯಶಸ್ವಿಯೊಂದಿಗೆ ರಾಜ್ಯದ ಸಂಪೂರ್ಣ ಅಭಿವೃದ್ಧಿಗಾಗಿ ಕಂಕಣ ಬದ್ಧವಾಗಿ ಹಲವಾರು ಯೋಜನೆ ಗಳನ್ನು ಜಾರಿಗೆ ತಂದಿದೆ.
ನಾನು ನಿಮ್ಮ ಆಶೀರ್ವಾದದಿಂದ ಕುಡಚಿ ಕ್ಷೇತ್ರದ ಸೇವಕನಾಗಿರುವ ದಿಟ್ಟತನದಿಂದ ಗಟ್ಟಿಯಾಗಿ ನಿಂತು ನಿಮ್ಮ ಸೇವೆ ಮಾಡುವೆ ಎಂದು ಶಾಸಕ ಮಹೇಂದ್ರ ತಮ್ಮಣ್ಣವರ ಹೇಳಿದರು.ಅವರು ರವಿವಾರ 17 ರಂದು...
Uncategorized
ಸಂಗೊಳ್ಳಿ ರಾಯಣ್ಣ ಸೊಸಾಯಿಟಿ ಹಗರಣ – ಗ್ರಾಹಕರನ್ನು ಕೊಲ್ಲುತ್ತಿರುವ ಕರ್ನಾಟಕ ಸರಕಾರ
ನೊಂದ ಗ್ರಾಹಕರಿಗೆ ನ್ಯಾಯ ಸಿಗುವುದು ಯಾವಾಗ ? ಬೆಳಗಾವಿಯ ಚಲನಚಿತ್ರ ನಿರ್ಮಾಪಕ ಸಂಗೊಳ್ಳಿ ರಾಯಣ್ಣ ಚಿತ್ರದ ಖ್ಯಾತಿಯ ಆನಂದ ಅಪ್ಪುಗೋಳ ಎಂಬ ನಯವಂಚಕ ಸುಮಾರು ಹತ್ತು ಸಾವಿರ ಗ್ರಾಹಕರಿಗೆ ಮೋಸ ವಂಚನೆ ಮಾಡಿ ಜೈಲು ಸೇರಿ ಈಗ ಬೆಲ್ ಮೇಲೆ ಹೊರಗಡೆ ಬಂದಿದ್ದಾನೆ. ಅವನ ಹತ್ತಿರ ಸಾವಿರಾರು ಕೋಟಿ ಆಸ್ತಿ ಇದೆ. ಸರಕಾರ ಇದನ್ನು ಮುಟ್ಟುಗೋಲು...
Latest News
ಕವನ : ಬೆಳಕಿನ ದೀಪಾವಳಿ
ಬೆಳಕಿನ ದೀಪಾವಳಿ
ಬೆಳಕು ಸರಿದು ನೇಸರನ
ಅಸ್ತದೊಡನೆ
ಜಗಕೆ ಜಗಮಗಿಸುವ
ದೀಪಗಳ ದರ್ಶನ
ಬಾನಂಚಿನಲಿ ಶಬ್ದಗಳ ನಡುವೆ
ಬೆಳಕಿನ ಚಿತ್ತಾರ
ಮೂಡಿಸುವ ಹಬ್ಬ
ಬೆಳಕಿನ ದೀಪಾವಳಿತಮವ ಕಳೆದು
ಜ್ಯೋತಿ ಬೆಳಗುವ
ನಾಡಿನಪವಿತ್ರ ಹಬ್ಬ
ತಳಿರು ತೋರಣ ಕಟ್ಟಿ
ಮನೆಯನು ಸಿಂಗರಿಸಿ
ಹಬ್ಬದಡುಗೆಯ ಸವಿಯುಣ್ಣುವ
ಮನದ ಖುಷಿಯ...