spot_img
spot_img

ಕವನ: ಅನ್ನ ನೀಡಿ ಧನ್ಯರಾಗಿ

Must Read

- Advertisement -

ಅನ್ನ ನೀಡಿ ಧನ್ಯರಾಗಿ

ಆಡಂಬರ ಬಿಡಿ ಅನ್ನ ನೀಡಿ
ವಿಲಾಸಕ್ಕೆ ಎಲ್ಲೆ ಇಲ್ಲ ನೆನಪಿಡಿ
ವಕ್ಕರಿಸಿರಲು ಮಹಾಮಾರಿ
ಎಲ್ಲಿಹುದು ನೆಮ್ಮದಿ
ಹೋಮ ಹವನಗಳನ್ನು ತ್ಯಜಿಸಿ
ಹಸಿದವನಿಗೆ ಅನ್ನ ಉಣಿಸಿ
ಕೈಚಾಚಿರುವಾಗ ಹಸಿದು
ಫೋಟೋ ಕ್ಲಿಕ್ಕಿಸಬೇಡಿ ನೆಗೆದು
ಬಯಕೆಗಳಿಗೆಲ್ಲಿ ಕೊನೆ
ಮನಸ್ಸು ಹುಚ್ಚುತನದ ಕೋಣೆ
ತೃಪ್ತ ಭಾವ ಬೇಕಿದೆ
ನೆಮ್ಮದಿಯ ಬದುಕಿಗೆ
ದಾನ ಧರ್ಮದಲ್ಲಿರಲು ನೀನು
ಮನದ ಸಂತಸಕ್ಕೆ ಕೊರತೆ ಇಹುದೇನು
ಒಂದು ಸಾರಿ ದಾನ ಮಾಡು
ಸಿಗುವ ಸಂತಸ ನೋಡು
ಮುಗುಳು ನಕ್ಕಾಗ ಆ ಜೀವ
ಜಗತ್ತನ್ನೇ ಗೆದ್ದಂತಾಗುವದು ನಿನ್ನ ಜೀವ


ಶ್ರೀಮತಿ ಜ್ಯೋತಿ ಸಿ ಕೋಟಗಿ
ಸಹ ಶಿಕ್ಷಕಿ
ಸರಕಾರಿ ಪ್ರಾಥಮಿಕ ಶಾಲೆ ತಲ್ಲೂರ
ತಾ: ಸವದತ್ತಿ ಜಿ: ಬೆಳಗಾವಿ
9980801993

- Advertisement -
- Advertisement -

Latest News

ಅಣಕವಾಡು : ಮದನಾರಿ ಸತಿ ರೇಣುಕೆ

ಮದನಾರಿ ಸತಿ ರೇಣುಕ ಮದ‌ವೇರಿದ ತುಂಬಿದ ತನು ತಂದಳು ಸತಿ ರೇಣುಕೆ ಮನೆಮುಂದಿನ ಅಂಗಳದಲಿ ಕಸಬಳಿದಳು‌ ಬಳಲಿಕೆ ಏದುಸಿರನು‌ ಬಿಡುಬಿಡುತಲಿ ನೀರನು ಚಳೆಹೊಡೆದಳು ಆಯಾಸದಿ ಬಾಗುತ್ತಲಿ ರಂಗೋಲಿಯ ಬರೆದಳು ಮಹಾಮನೆಯ ಮಹಾದೇವಿ ಮಹಾಕಾಯ ಹೊತ್ತಳು ಬೇಸರದಲಿ ಬುಸುಗುಡುತಲಿ ನಿಟ್ಟುಸಿರನು‌ ಬಿಟ್ಟಳು ಹಾದಾಡುವ ಹೊಸತಿಲಲ್ಲಿ ಬಂದಳು ಹೊಯ್ದಾಡುತ ಮನೆಬಾಗಿಲ...
- Advertisement -

More Articles Like This

- Advertisement -
close
error: Content is protected !!
Join WhatsApp Group