ಬೆಂಗಳೂರು: ಬನಶಂಕರಿ 3 ನೇ ಹಂತದ ಗುರುದತ್ತ ಬಡವಾಣೆಯ ಶ್ರೀಮತಿ ಶಾಲಿನಿ ವಿಜಯ್ ಕುಮಾರ್ ಅವರ ಮನೆಯಲ್ಲಿ ಅರಿಶಿಣದಲ್ಲಿ ಅರಳಿದ ಪರಿಸರ ಸ್ನೇಹಿ ಗೌರಿ – ಗಣಪ ಕೂರಿಸಿ ಸರಳವಾಗಿ ಗೌರಿ – ಗಣಪ ಹಬ್ಬವನ್ನು ಆಚರಿಸಲಾಯಿತು.
ಈ ಬಗ್ಗೆ ಶ್ರೀಮತಿ ಶಾಲಿನಿ ವಿಜಯ್ ಕುಮಾರ್ ಜೊತೆ ಪತ್ರಿಕೆ ಮಾತುಕತೆ ನಡೆಸಿದ್ದು ಪತ್ರಿಕೆಯ ಓದುಗಾರಿಗಾಗಿ ಇಲ್ಲಿದೆ.
“ಅರಿಶಿಣದಲ್ಲಿ ಗೌರಿ – ಗಣಪ ಮಾಡುವ ವಿಧಾನ” ಬಗ್ಗೆ ಮಾಹಿತಿ:
ಶ್ರೀಮತಿ ಶಾಲಿನಿ ವಿಜಯ್ ಕುಮಾರ್ ಅವರ ಕೈ ಚಳಕದಲ್ಲಿ ಅರಳಿದೆ ಪರಿಸರ ಸ್ನೇಹಿ ಗೌರಿ ಮತ್ತು ಗಣೇಶ – ಒಟ್ಟಿನಲ್ಲಿ ನಮ್ಮ ಮನೆಯಲ್ಲಿ ಈ ಬಾರಿ ನನ್ನ ಮಗಳಾದ ಪ್ರತಿಕ್ಷಾ ಹಾಗೂ ನನ್ನ ಮಗ ಲಿಶಾಂತ್ ಹಾಗು ನನ್ನ ಪತಿ ವಿಜಯ್ ಕುಮಾರ್ ಎಲ್ಲರೂ ಸೇರಿ ಪರಿಸರ ಸ್ನೇಹಿ ಗೌರಿ ಗಣೇಶ ಚತುರ್ಥಿ ಹಬ್ಬವನ್ನು ಆಚರಿಸುತ್ತಾ ಇದ್ದೇವೆ ಎನ್ನುತ್ತಾರೆ ಶ್ರೀಮತಿ ಶಾಲಿನಿ ವಿಜಯ್ ಕುಮಾರ್.
ಅರಿಶಿಣದಲ್ಲಿ ಗೌರಿ – ಗಣಪ ಮಾಡುವ ವಿಧಾನ:
ಅರಿಶಿಣವನ್ನು ಹಾಲಿನಲ್ಲಿ ಕಲೆಸಿ 15 ನಿಮಿಷ ನೆನೆಸಿಟ್ಟು ನಂತರ ಅರಳುತ್ತದೆ ಪರಿಸರ ಸ್ನೇಹಿ ಗೌರಿ – ಗಣಪ – ಗಣಪತಿಯ ಸೊಂಡಲಿಗೆ ಚಿಕ್ಕ ಗಾತ್ರದ ಮರದ ಕಡ್ಡಿ ಹಾಗೂ ಕಣ್ಣಿಗೆ ಮೆಣಿಸಿನ ಬೀಜ ಇಟ್ಟು ಪರಿಸರ ಸ್ನೇಹಿ ಗಣಪನನ್ನು ಮಾಡಿದ್ದೇನೆ ಎನ್ನುತ್ತಾರೆ ಶ್ರೀಮತಿ ಶಾಲಿನಿ ವಿಜಯ್ ಕುಮಾರ್.
ಅರಿಶಿಣದಿಂದ ಮಾಡಿದ ಗೌರಿ – ಗಣಪ ಪರಿಸರ ಸ್ನೇಹಿ ಯಾಗಿದ್ದು ವಿಸರ್ಜನೆ ಮಾಡಲು ಸುಲಭ !! ಒಂದು ಸಣ್ಣ ಬಕೆಟ್ ನಲ್ಲಿ ನೀರು ತುಂಬಿ ಅದರಲ್ಲಿ ವಿಸರ್ಜನೆ ಮಾಡಿ ನಂತರ ಆ ನೀರನ್ನು ಗಿಡಕ್ಕೆ ಹಾಕುವುದರಿಂದ ಮನಸ್ಸಿಗೆ ನೆಮ್ಮದಿ ಎನ್ನುತ್ತಾರೆ ಪರಿಸರ ಪ್ರೇಮಿ ವಿಜಯ್ ಕುಮಾರ್
ಅರಿಶಿಣದಲ್ಲಿ ಗೌರಿ – ಗಣಪ ಮಾಡುವ ವಿಧಾನ ನೀವು ಕಲಿತಿದ್ದು ಹೇಗೆ ? ಎಂಬ ಪ್ರಶ್ನೆಗೆ, ಶ್ರೀಮತಿ ಶಾಲಿನಿ ವಿಜಯ್ ಕುಮಾರ್ ಅವರು ವಿಡಿಯೋ ನೋಡಿ ಪರಿಸರ ಸ್ನೇಹಿ ಗೌರಿ ಮತ್ತು ಗಣಪ ನನ್ನು ಮಾಡುವುದನ್ನು ಕಲಿತಿದ್ದೇನೆ ಎಂದು ನುಡಿದರು.
“ಪರಿಸರ ರಕ್ಷಣೆ ನಮ್ಮ ಹೊಣೆ”
ಮುಂಬರುವ ದಿನಗಳಲ್ಲಿ ಪರಿಸರ ಸ್ನೇಹಿ ಗೌರಿ – ಗಣಪನನ್ನು ಇಟ್ಟು ಆಚರಿಸುವ ಮೂಲಕ ಪರಿಸರವನ್ನು ಉಳಿಸುವ ನಿಟ್ಟಿನಲ್ಲಿ ದಿಟ್ಟ ಹೆಜ್ಜೆ ಇಡಲು ನಮ್ಮೆಲ್ಲರಿಗೂ ಶ್ರೀಮತಿ ಶಾಲಿನಿ ವಿಜಯ್ ಕುಮಾರ್ ಸ್ಪೂರ್ತಿ ಎಂದರೆ ತಪ್ಪಾಗಲಾರದು ಅಲ್ಲವೇ ??
ಬರಹ: ತೀರ್ಥಹಳ್ಳಿ ಅನಂತ ಕಲ್ಲಾಪುರ