ಮೀನು ಹಿಡಿಯಲು ಹೋಗಿ ಸಾವಿಗೀಡಾದ ಯುವಕ

Must Read

ಬೀದರ – ಬೀದರ್ ಜಿಲ್ಲೆಯ ಭಾಲ್ಕಿ ತಾಲ್ಲೂಕಿನ ದಾಡಗಿ ಗ್ರಾಮದ ಹತ್ತಿರದ ಕಾರಂಜಾ ನದಿಗೆ ಅಡ್ಡಲಾಗಿ ಮೀನು ಹಿಡಿಯಲು ಹೋದ ಯುವಕನೋರ್ವ ನೀರಿನ ಸುಳಿಯಲ್ಲಿ ಮುಳುಗಿ ಮೃತಪಟ್ಟ ಘಟನೆ ವರದಿಯಾಗಿದೆ.

ಪಟ್ಟಣದ ಹೊರ ವಲಯದ ಬಸವನಗರ ನಿವಾಸಿ ಸಂತೋಷ ಧರ್ಮರಾಜ ಕಟ್ಟಿಮನಿ (30) ಮೃತ ಯುವಕ.

ತನ್ನ ಸಹೋದರರರೊಂದಿಗೆ ರವಿವಾರ ಮೀನಿನ ಬಲೆಯೊಂದಿಗೆ ನೀರಿಗೆ ಇಳಿದಾಗ ಕಾಲು ಜಾರಿ ಬಿದ್ದು ನೀರಿನ ಸುಳಿಗೆ ಸಿಲುಕಿದ್ದಾನೆ. ಈಜು ಬಾರದಿರುವುದರಿಂದ ತುಂಬಾ ಹೊತ್ತು ನೀರಿನ ಸುಳಿಯಲ್ಲಿ ಸಿಕ್ಕು ಮೃತ ಪಟ್ಟಿದ್ದಾನೆ. ಈ ಕುರಿತು ಖಟಕ ಚಿಂಚೋಳಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಈ ಮುಂಚೆ ನೀರಿನಲ್ಲಿ ಮುಳುಗಿದ್ದ ಯುವಕನ ದೇಹವನ್ನು ಹೊತ್ತು ತಂದ ಯುವಕರಿಬ್ಬರು ಕೃತಕ ಉಸಿರಾಟ ನೀಡಿ ಆತನನ್ನು ಬದುಕಿಸಲು ನಡೆಸಿದ ಯತ್ನ ವಿಫಲವಾಯಿತು.

Latest News

ಶರಣರ ಪೂಜೆ ಮಾಡುವುದಕ್ಕಿಂತ ತತ್ವ ಅಳವಡಿಸಿಕೊಳ್ಳಬೇಕು

ಸಿಂದಗಿ; ೧೨ನೇ ಶತಮಾನದಲ್ಲಿ ಸಮ ಸಮಾಜದ ನಿರ್ಮಾಣ ಮಾಡಿದ ಶರಣರ ಜಯಂತಿಗಳ ಮೂಲಕ ಭಾವ ಚಿತ್ರಗಳನ್ನು ಪೂಜೆ ಮಾಡುವುದಕ್ಕಿಂತಲೂ ಶರಣರ ತತ್ವ ಸಿದಾಂತಗಳನ್ನು ನಾವೆಲ್ಲರು ಮೈಗೂಡಿಸಿಕೊಂಡು...

More Articles Like This

error: Content is protected !!
Join WhatsApp Group