Homeಸುದ್ದಿಗಳುದಿ.ಮನಗೂಳಿಯವರ ಅಭಿವೃದ್ಧಿ ಕೆಲಸ ನೋಡಿ ಮತನೀಡಿ - ಡಿ ಕೆ ಶಿವಕುಮಾರ

ದಿ.ಮನಗೂಳಿಯವರ ಅಭಿವೃದ್ಧಿ ಕೆಲಸ ನೋಡಿ ಮತನೀಡಿ – ಡಿ ಕೆ ಶಿವಕುಮಾರ

ಸಿಂದಗಿ: ದಿ.ಮನಗೂಳಿಯವರು ಕ್ಷೇತ್ರದ ಅಭಿವೃದ್ದಿಯ ಚಿಂತಕರು ಜನರ ಸೇವೆ ಮಾಡುತ್ತಲೇ ಸಾಯುತ್ತೇನೆ ಕಾರಣ ಕ್ಷೇತ್ರದ ಅಭಿವೃದ್ಧಿಯೆ ನನ್ನುಸಿರು ಅದಕ್ಕೆ ನನ್ನ ಮಕ್ಕಳನ್ನು ನಿಮ್ಮ ಪಕ್ಷದಲ್ಲಿ ಬೆಳೆಸಿ ಎಂದು ಕೇಳಿದ್ದರಿಂದ ಸಮ್ಮಿಶ್ರ ಸರಕಾರದಲ್ಲಿ ನೀರಾವರಿಗೆ ಸಾಕಷ್ಟು ಕೊಡುಗೆಗಳನ್ನು ನೀಡಿದ್ದಾರೆ ಆದರಿಂದ ಅವರ ಮಗ ಅಶೋಕನಿಗೆ ಹೆಚ್ಚಿನ ಮತಗಳನ್ನು ನೀಡುವ ಮೂಲಕ ಆಯ್ಕೆ ಮಾಡಿದರೆ ನಿಮ್ಮೆಲ್ಲರ ಗೆಲುವಾಗುತ್ತದೆ ಎಂದು ಕೆಪಿಸಿಸಿ ರಾಜ್ಯಾಧ್ಯಕ್ಷ ಡಿ.ಕೆ.ಶಿವಕುಮಾರ ಹೇಳಿದರು.

ಪಟ್ಟಣದ ಮಾಂಗಲ್ಯ ಭವನದಲ್ಲಿ ಕಾಂಗ್ರೆಸ್ ಪಕ್ಷದ ಕಾರ್ಯಕರ್ತರ ಸಭೆಯನ್ನುದ್ದೇಶಿಸಿ ಮಾತನಾಡಿ, ಕಳೆದ 7 ವರ್ಷಗಳಿಂದ ಆಡಳಿತ ನಡೆಸುತ್ತಿರುವ ಬಿಜೆಪಿ ಅಚ್ಚೆ ದಿನ್ ತರುತ್ತೇವೆ ಪ್ರತಿ ವರ್ಷ ಯುವಕರಿಗೆ 2ಕೋಟಿ ಉದ್ಯೋಗ ಸೃಷ್ಟಿಸುತ್ತೇವೆ ಎಂದು ಹೇಳಿ 14 ಕೋಟಿ ಯುವಕರ ಭವಿಷ್ಯವನ್ನು ಹಾಳುಮಾಡಿದೆ. ಕೂಲಿಕಾರ್ಮಿಕರಿಗೆ, ರೈತರಿಗೆ, ಗ್ಯಾಸ್, ಪೆಟ್ರೋಲ, ಡಿಜೆಲ್ ಬೆಲೆಗಳನ್ನು ಗಗನಕ್ಕೇರಿಸಿ ಸಾಮಾನ್ಯ ಜನರ ಜೀವನದ ಜೊತೆ ಚಲ್ಲಾಟವಾಡುತ್ತಿದೆ. ರೈತರಿಗೆ ಪರಿಹಾರ, ಅತೀವೃಷ್ಠಿಯಿಂದ ಹಾಳಾದ ಜನರಿಗೆ ಪರಿಹಾರ ಬಿಡಿಗಾಸು ಪರಿಹಾರ ನೀಡಿಲ್ಲ. ಅಧಿಕಾರವಿದ್ದಾಗ ಅಭಿವೃದ್ಧಿ ಕಡೆ ಒತ್ತು ಕೊಡದೇ ಇರುವಂತ ಸರಕಾರ ಇದ್ದರೆಷ್ಟು ಬಿಟ್ಟರೆಷ್ಟು ಎನ್ನುವ ರೀತಿಯಲ್ಲಿ ಈ ದೇಶದ ಜನತೆ ಬಿಜೆಪಿ ಸರಕಾರವನ್ನು ಶಪಿಸುತ್ತಿದ್ದಾರೆ. ಕಾರಣ ಮುಂಬರುವ 2023 ಸಾರ್ವತ್ರಿಕ ಚುನಾವಣೆಗೆ ದಿಕ್ಸೂಚಿಯಂತೆ ಎರಡು ಉಪ ಚುನಾವಣೆಯಲ್ಲಿ ಬರೀ ವ್ಯಕ್ತಿ ಮುಖ್ಯವಲ್ಲ ಪಕ್ಷದ ಸಿದ್ದಾಂತಗಳನ್ನು ಗೆಲ್ಲಿಸಿ ಈ ಭ್ರಷ್ಟ ಸರಕಾರಕ್ಕೆ ಪಾಠ ಕಲಿಸಬೇಕು ಎಂದರು.

ಕಾರ್ಯಾಧ್ಯಕ್ಷ ಈಶ್ವರ ಖಂಡ್ರೆ ಮಾತನಾಡಿ, ಇದು ಅಭ್ಯರ್ಥಿ ಅಶೋಕ ಮನಗೂಳಿಯ ಚುನಾವಣೆಯಲ್ಲ ಎಲ್ಲ ಪ್ರಜ್ಞಾವಂತ ಮತದಾರರ ಚುನಾವಣೆಯಾಗಿದ್ದು ಅವರು ಗೆದ್ದರೆ ನಿಮ್ಮೆಲ್ಲರ ಗೆಲುವಾಗುತ್ತದೆ. ಕಳೆದ ಮೂರುವರೆ ವರ್ಷದಲ್ಲಿ ಉಳಿದ ಕಾರ್ಯಕ್ರಮಗಳಿಗೆ ಒಳ್ಳೆ ಸಂದೇಶ ನೀಡಿದಂತಾಗುತ್ತದೆ. ದಿ.ಮನಗೂಳೀಯವರು ಜಾತ್ಯತೀತ ನಾಯಕರು ಅವರು ಜಾತಿ ಬೇಧ ಎಂದು ಮಾಡಿದವರಲ್ಲ ಅಭಿವೃದ್ಧಿಯ ಚಿಂತಕರಾಗಿದ್ದರು. ಬಿಜೆಪಿ ಹಿಂಬಾಗಿಲಿನಿಂದ ಅಧಿಕಾರಕ್ಕೆ ಬಂದವರು ಅವರು ನುಡಿದಂತೆ ನಡೆದಿದ್ದಾರಾ, ಬರೀ ರೈತ ವಿರೋಧಿ ನೀತಿ, ಶೋಷಿತರ ವಿರೋಧಿ ನೀತಿ, ಕಾರ್ಮಿಕರ ವಿರೋಧಿ ನೀತಿ ಅನುಸರಿಸಿದಂತವರು. ಕರೋನಾ ಸಂದರ್ಭದಲ್ಲಿ ಈ ರಾಜ್ಯದಲ್ಲಿ 50 ಲಕ್ಷ ಜನರು ತಮ್ಮ ಪ್ರಾಣ ಕಳೆದು ಕೊಂಡಿದ್ದಾರೆ ಆದರೆ ಸರಕಾರಿ ದಾಖಲೆಯಲ್ಲಿ ಮಾತ್ರ 4 ಲಕ್ಷ ಜನ ಸತ್ತಿದ್ದಾರೆ ಎಂದು ದಾಖಲೆ ಸೃಷ್ಟಿಸಿ ದುಡ್ಡಿಗಾಗಿ ಜನರಿಗೆ ನೀಡುವ ಔಷಧಿಗಳನ್ನು ಮಾರಾಟ ಮಾಡಿಕೊಂಡಿದ್ದಾರೆ. ಅವರ ಸಾವಿಗೆ ಬಿಜೆಪಿನೆ ನೆರ ಹೊಣೆಯಾಗಿದೆ ಇಂತಹ ಸುಳ್ಳು ಸರಕಾರಕ್ಕೆ ತಕ್ಕ ಪಾಠ ಕಲಿಸುವ ಸಂದರ್ಭವಿದು ಅವರಿಗೆ ತಕ್ಕ ಉತ್ತರ ನೀಡಿ ಕಾಂಗ್ರೆಸ್ ಪಕ್ಷದ ಅಭ್ಯರ್ಥಿಯ ಗೆಲುವಿಗೆ ಕಾರಣರಾಗಬೇಕು ಎಂದು ಮನವಿ ಮಾಡಿಕೊಂಡರು.

ಮಾಜಿ ಜಲಸಂಪನ್ಮೂಲ ಸಚಿವ ಎಂ.ಬಿ.ಪಾಟೀಲ ಮಾತನಾಡಿ, ಬಿಜೆಪಿ ಸರಕಾರ ಅನೈತಿಕವಾಗಿ ಸಂಬಂಧದ ಸರಕಾರವಾಗಿದೆ. ಈ ರಾಜ್ಯದಲ್ಲಿ 10 ಲಕ್ಷ ಮನೆಗಳನ್ನು ಕೊಟ್ಟಿದ್ದೇವೆ ಆದರೆ ಒಂದು ಮನೆ ಕೊಡದೇ ಪುಕ್ಕಟೆ ಪ್ರಚಾರ ಗಿಟ್ಟಿಸಿಕೊಳ್ಳುತ್ತಿದೆ ಜನರು ಪ್ರಜ್ಞಾವಂತರಿದ್ದಾರೆ ಇವೆಲ್ಲವುಗಳನ್ನು ಗಮನಿಸಿದ್ದಾರೆ ಕಳೆದ 7 ವರ್ಷಗಳಿಂದ ಅಚ್ಚೇ ದಿನ್ ಅಚ್ಚೇ ದಿನ್ ಇಲ್ಲಿ ಯಾರಿಗೂ ಬಂದಿಲ್ಲ ಬರೀ ಅದಾನಿ, ಅಂದೋನಿ ಜೆಬಿಗೆ ಬಂದಿದೆ ಎಂದು ಆರೋಪಿಸಿದರು.

ಅಭ್ಯರ್ಥಿ ಅಶೋಕ ಮನಗೂಳಿ ಮಾತನಾಡಿ, ಕ್ಷೇತ್ರದ ಜನರು ನಮ್ಮ ತಂದೆಯವರ ಗೆಲುವಿನಲ್ಲಿ ಎಂತಹ ಬೆಂಬಲ ನೀಡಿದ್ದರೋ ಅದಕ್ಕಿಂತ ಹೆಚ್ಚಿನ ಸಂಖ್ಯೆಯಲ್ಲಿ ಬೆಂಬಲಕ್ಕೆ ನಿಂತ ನಿಮ್ಮಲ್ಲರಿಗೆ ಮನಗೂಳಿ ಮನೆತನ ಚಿರಋಣಿಯಾಗಿದೆ ದಿ.ಎಂ.ಸಿ.ಮನಗೂಳಿ ಅವರ ಅಗಲಿಕೆ ಇನ್ನೂ ಕ್ಷೇತ್ರದ ಜನತೆಯ ಮನದಾಳದಿಂದ ಮಾಸಿಲ್ಲ ಅವರ ಅಗಲಿಕೆಯಿಂದ ಉಳಿದ ಕಾಮಗಾರಿಗಳನ್ನು ಮುಂದುವರೆಸಲು ಅವಕಾಶ ಕಲ್ಪಿಸಿಕೊಡಿ ನನ್ನಿಂದ ಏನಾದರು ತಪ್ಪಾಗಿದ್ದರೆ ನಿಮ್ಮ ಮಗನ ತಪ್ಪೆಂದು ಭಾವಿಸಿ ನನ್ನನ್ನು ಕ್ಷಮಿಸಿ ಎಂದು ಕೇಳಿದ ಅವರು ಈ ಕ್ಷೇತ್ರದಲ್ಲಿ ಕಳೆದ ಸಮ್ಮಿಶ್ರ ಸರಕಾರದಲ್ಲಿ ಮಾಡಿದ ಸಾಧನೆಗಳನ್ನು ಅವಲೋಕಿಸಿ ಮತ ನೀಡಿ ಎಂದು ಮನವಿ ಮಾಡಿಕೊಂಡರು.

ಮಾಜಿ ಶಾಸಕ ಶರಣಪ್ಪ ಸುಣಗಾರ, ಚಿತ್ರನಟ ರಾಜು ತಾಳಿಕೋಟಿ ಮಾತನಾಡಿದರು.

ಈ ಸಂದರ್ಭದಲ್ಲಿ ಕಾರ್ಯಾಧ್ಯಕ್ಷ ದ್ರುವ ನಾರಾಯಣ, ಶಾಸಕರಾದ ಶಿವಾನಂದ ಪಾಟೀಲ, ಯಶವಂತ್ರಾಯಗೌಡ ಪಾಟೀಲ, ಅಜೇಯಸಿಂಗ್, ಆನಂದ ನ್ಯಾಮಗೋಡ, ಮಾಜಿ ಶಾಸಕರಾದ ಅಲ್ಲಮಪ್ರಭು ಪಾಟೀಲ, ಸಿ.ಎಸ್.ನಾಡಗೌಡ, ಪ್ರಕಾಶ ರಾಠೋಡ ಬ್ಲಾಕ್ ಸಮಿತಿ ಅಧ್ಯಕ್ಷರಾದ ವಿಠ್ಠಲ ಕೊಳ್ಳುರ, ಅಯುಬ ದೇವರಮನಿ, ಮುಖಂಡರಾದ ಎಂ.ಅರ್.ಟಿ, ಜಿಲ್ಲಾಧ್ಯಕ್ಷ ರಾಜು ಅಲಗೂರ, ಪುಷ್ಪಾ ಅಮರಪ್ಪನವರ, ವಿಧ್ಯಾರಾಣಿ ತುಂಗಳ, ಸುಭಾಷ ಛಾಯಾಗೋಳ, ಶಿವಪ್ಪಗೌಡ ಬಿರಾದಾರ, ಅರುಣಕುಮಾರ ಪಾಟೀಲ, ಎಸ್.ಎಂ.ಪಾಟೀಲ ಗಣಿಹಾರ, ಹಾಸೀಪೀರ ವಾಲಿಕಾರ, ರಫೀಕ ಕಾಣೆ ಸೇರಿದಂತೆ ಹಲವರು ವೇದಿಕೆ ಮೇಲಿದ್ದರು.


ಜಲಸಂಪನ್ಮೂಲ ಸಚಿವ ಗೋವಿಂದ ಕಾರಜೋಳ ಟೈಮ್ ಯಾಕೇ ವೇಸ್ಟ್ ಮಾಡ್ತಾರೆ. ಟೈಮ್ ವೇಸ್ಟ್ ಮಾಡದೇ ನೀರಾವರಿ ಇಲಾಖೆಯ ಪರ್ಸೆಂಟೇಜ್ ಬಗ್ಗೆ ತಕ್ಷಣವೇ ಕ್ರಮಕ್ಕೆ ಮುಂದಾಗಬೇಕು. ರಾಜಕಾರಣದಲ್ಲಿ ತಂತ್ರ ಮಾಡುವುದನ್ನು ಪಕ್ಷ ಹೇಳೋದಿಲ್ಲ. ನಾವು ಮಾಹಿತಿ ಪಡೆದುಕೊಂಡು ಮತದಾರರ ಹತ್ತಿರ ಹೋಗುತ್ತೇವೆ ಅಲ್ಲದೇ, ಬಿಜೆಪಿಗೆ ಮತದಾರರು ತಕ್ಕಪಾಠ ಕಲಿಸಲು ತೀರ್ಮಾನಿಸಿದ್ದಾರೆ. ಬಿಜೆಪಿ ಸರ್ಕಾರದಿಂದ ಯಾರಿಗೂ ನೆಮ್ಮದಿ ಇಲ್ಲ ಇನ್ನು ನಮ್ಮ ಪಕ್ಷದಲ್ಲಿ ಒಗ್ಗಟ್ಟು ಇದೆ

-ಕೆಪಿಸಿಸಿ ರಾಜ್ಯಾಧ್ಯಕ್ಷ ಡಿ.ಕೆ.ಶಿವಕುಮಾರ


ವರದಿ: ಪಂಡಿತ್ ಯಂಪೂರೆ, ಸಿಂದಗಿ

RELATED ARTICLES

Most Popular

error: Content is protected !!
Join WhatsApp Group