ಸಿಂದಗಿ: ಕಾಂಗ್ರೆಸ್ ಪಕ್ಷ 65 ವರ್ಷಗಳಿಂದ ಹಣ, ಹೆಂಡ, ತೋಳ್ಬಲ, ಜಾತಿಬಲದಿಂದ ಸರ್ವಾಧಿಕಾರಿ ಧೋರಣೆಯಿಂದ ಗೆದ್ದು ದುರಾಡಳಿತ ನಡೆಸಿತ್ತು ಅದು ಜನರಿಗೆ ಅರ್ಥವಾಗಿ ದೇಶದ 26 ರಾಜ್ಯಗಳಲ್ಲಿ ಬಿಜೆಪಿಗೆ ನಿಚ್ಚಳ ಅಧಿಕಾರ ನೀಡಿದ್ದಾರೆ ಎಂದು ಮಾಜಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಗುಡುಗಿದರು.
ತಾಲೂಕಿನ ಮೋರಟಗಿ ಗ್ರಾಮದಲ್ಲಿ ಉಪಚುನಾವಣೆ ಪ್ರಚಾರಾತ್ಮಕ ಬಿಜೆಪಿ ಕಾರ್ಯಕರ್ತರ ಸಭೆಯನ್ನು ಉದ್ಘಾಟಿಸಿ ಮಾತನಾಡಿ, ನನ್ನ ಅಧಿಕಾರದ ಅವಧಿಯಲ್ಲಿ ಪ್ರತಿಯೊಬ್ಬ ಮಹಿಳೆಯರಿಗೆ ಅನುಕೂಲವಾಗುವಂಥ ಹತ್ತು ಹಲವಾರು ಯೋಜನೆಗಳನ್ನು ಕೊಟ್ಟಿದ್ದೇನೆ ಬಡತನವಿರುವ ಕುಟುಂಬದಲ್ಲಿ ಹೆಣ್ಣು ಹುಟ್ಟಿದರೆ ಹುಣ್ಣು ಹುಟ್ಟಿತು ಎಂದು ಎದೆಗುಂದಬಾರದು ಭಾಗ್ಯಲಕ್ಷ್ಮಿ ಯೋಜನೆ, ಮಾಶಾಸನ, ಕೊಟ್ಟಿದ್ದು. ನಾನು ಈಗ ಬಡಜನರು ಗುಡಿಸಲಲ್ಲಿ ಇರಬಾರದು ಎಂಬ ಉದ್ದೇಶದಿಂದ ನಿವೇಶನ ನೀಡಿ ಮನೆ ಕಟ್ಟಿಸುವ ಕೆಲಸ ಪ್ರಾರಂಬಿಸಿದ್ದೇವೆ. ಗ್ರಾಮೀಣ ಭಾಗದ ಜನರು ಸರಕಾರಿ ಕಛೇರಿಗೆ ಅಲೆದಾಡಬಾರದು ಎಂದು ಸರಕಾರದ ಯೋಜನೆಗಳು ನಿಮ್ಮ ಮನೆ ಬಾಗಿಲಿಗೆ ತಲುಪಿಸುವ ಕಾರ್ಯಗಳನ್ನು ಮಾಡುತ್ತಿದ್ದೇವೆ ರೈತರಿಗೆ ಕಿಸಾನ ಸಮ್ಮಾನ್ ಯೋಜನೆಯಡಿ ಕೇಂದ್ರ ರೂ. 6 ಸಾವಿರ ರಾಜ್ಯ ಸರಕಾರ ರೂ.4 ಸಾವಿರ ಒಟ್ಟು ಹತ್ತು ಸಾವಿರ ಹಣ ನೇರವಾಗಿ ರೈತರ ಖಾತೆಗಳಿಗೆ ಹಾಕಿದ್ದೇವೆ ಹಾಗೂ ಕೋವಿಡ್ ಸಂಕಷ್ಟಕ್ಕೆ ಸಿಲುಕಿರುವ ಕೆಲ ಸಮುದಾಯದ ಬಡಜನರಿಗೆ ರೂ.5 ಸಾವಿರ ಹಣ ಕೊಟ್ಟಿದ್ದೇನೆ. ಮೋದೀಜಿ ಅವರ ಕಾರ್ಯ ವೈಕರಿಗಳು ವಿಶ್ವವನ್ನೇ ಬೆಚ್ಚಿ ಬೀಳಿಸಿವೆ. 180 ರಾಷ್ಟ್ರದ ನಾಯಕರುಗಳು ನಮ್ಮ ದೇಶಕ್ಕೆ ಬಂದು ಹೋಗಿ ಎಂದು ಕರೆಯುತ್ತಿದ್ದಾರೆ. ಎಲ್ಲ ಸಚಿವರು ಉಪಚುನಾವಣೆ ಪ್ರಚಾರಕ್ಕಾಗಿ ಮಾತ್ರ ಬಂದಿಲ್ಲ ಅದರ ಜೊತೆ ಪಟ್ಟಣ ಸೇರಿದಂತೆ ಹಳ್ಳಿ ಹಳ್ಳಿಗಳಲ್ಲಿ ಸಮಸ್ಯೆಗಳನ್ನು ಪರಿಶೀಲಿಸಿ ಸಿಂದಗಿ ಕ್ಷೇತ್ರವನ್ನು ಮಾದರಿ ಕ್ಷೇತ್ರವನ್ನಾಗಿಸುವ ಗುರಿಯನ್ನು ಹೊಂದಿದ್ದಾರೆ 10 ವರ್ಷ ಶಾಸಕರಾಗಿದ್ದಾಗ ರಮೇಶ ಭೂಸನೂರ ಪಟ್ಟಣ ಸೇರಿದಂತೆ ಗ್ರಾಮೀಣ ಭಾಗಗಳಲ್ಲಿ ಮಾಡಿದ ಅಭಿವೃದ್ದಿ ಕಾರ್ಯಗಳು ಈ ಉಪಚುನಾವಣೆಯಲ್ಲಿ ಪ್ರೇರಣೆ ಆಗಲಿವೆ ಸಿಂದಗಿ ಸರ್ವಾಂಗೀಣ ಅಭಿವೃದ್ದಿಗಾಗಿ ಬಿಜೆಪಿಗೆ ಮತ ನೀಡಿ ಎಂದು ಹೇಳಿದರು.
ಪೌರಾಡಳಿತ ಸಚಿವ ಎಂ ಟಿ ಬಿ ನಾಗರಾಜ ಮಾತನಾಡಿ, ಬಿಜೆಪಿ ಪಕ್ಷ ಸರ್ವ ಧರ್ಮದವರನ್ನು ಸರಿ ಸಮನಾಗಿ ನೋಡುವ ಪಕ್ಷ ನಾನು ಉಪಚುನಾವಣೆಯಲ್ಲಿ ಸೋತ ನಂತರ ನನ್ನನ್ನು ಯಡಿಯೂರಪ್ಪನವರು ವಿಧಾನ ಪರಿಷತ್ ಸದಸ್ಯನಾಗಿ ಮಾಡಿ ಸಚಿವ ಸ್ಥಾನ ನೀಡಿದ್ದಾರೆ ಸಿಂದಗಿ ಕ್ಷೇತ್ರದಲ್ಲಿ ಹಾಲುಮತ ಸಮಾಜದ ಬಾಂಧವರು ಹೆಚ್ಚಿನ ಸಂಖ್ಯೆಯಲ್ಲಿ ಮತಗಳನ್ನು ಹೊಂದಿದ್ದರೆ ಬಿಜೆಪಿ ಪಕ್ಷ ನಮ್ಮ ಸಮುದಾಯದ ಮೂರು ನಾಯಕರುಗಳಿಗೆ ಸಚಿವ ಸ್ಥಾನ ನೀಡಿದೆ ಗೊಡ್ಡು ಬೆದರಿಕೆಗೆ ಅಂಜಬೇಡಿ ನಿಮ್ಮೊಂದಿಗೆ ನಾವಿದ್ದೇವೆ ಹಾಲುಮತ ಸಮಾಜದ ಗುಡಿ ಗುಂಡಾರ, ರಸ್ತೆ ಅಭಿವೃದ್ದಿ ಸೇರಿದಂತೆ ಹಾಲುಮತ ಬಾಂಧವರ ಜೊತೆ ಉತ್ತಮವಾದ ಒಡನಾಟ ಹೊಂದಿರುವ ರಮೇಶ ಭೂಸನೂರ ಅವರಿಗೆ ಮತ ನೀಡಿ ಎಂದು ಮನವಿ ಮಾಡಿಕೊಂಡರು.
ಅಭ್ಯರ್ಥಿ ರಮೇಶ ಭೂಸನೂರ ಮಾತನಾಡಿ, ಸಿಂದಗಿಯ ರಾಜಕೀಯ ಇತಿಹಾಸದಲ್ಲಿ ಒಂದು ಬಾರಿ ಶಾಸಕರಾದವರು ಮರಳಿ ಶಾಸಕರಾಗಿದ್ದು ಇತಿಹಾಸದಲ್ಲೆ ಇರಲಿಲ್ಲ ಕ್ಷೇತ್ರದ ಮಹಾಜನತೆ ನನಗೆ ಸತತ ಎರಡು ಬಾರಿ ಶಾಸಕನಾಗಿ ಕಾರ್ಯ ನಿರ್ವಹಿಸಲು ಆಯ್ಕೆಮಾಡಿ ಕಳಿಸಿದ್ದೀರಿ 2018 ರ ಚುನಾವಣೆಯಲ್ಲಿ ಅನುಕಂಪದ ಕಣ್ಣಿರಿಟ್ಟ ದಿ; ಎಂ.ಸಿ.ಮನಗೂಳಿ ಎದುರು ಅಲ್ಪ ಮತಗಳಿಂದ ಸೋಲುಂಡ ನಾನು ರಾಜ್ಯ ಮತ್ತು ಕೇಂದ್ರದಲ್ಲಿ ಬಿಜೆಪಿ ಸರಕಾರ ಇರುವುದರಿಂದ ಹಲವಾರು ಅನುದಾನವನ್ನು ತಂದು ಅಭಿವೃದ್ದಿ ಮಾಡಿದ್ದೇನೆ ಈ ಉಪಚುನಾವಣೆಯಲ್ಲಿ ಅವಕಾಶ ನೀಡಿ ನಿಮ್ಮ ಮನೆ ಸೇವಕನಾಗಿ ಕಾರ್ಯ ನಿರ್ವಹಿಸುತ್ತೇನೆ ಎಂದರು.
ಮಾಜಿ ಉಪಮುಖ್ಯಮಂತ್ರಿ ಲಕ್ಷ್ಮಣ ಸವದಿ, ಜಲಸಂಪನ್ಮೂಲ ಸಚಿವ ಗೋವಿಂದ ಕಾರಜೋಳ ಮಾತನಾಡಿದರು.
ಕಾರ್ಯಕ್ರಮದಲ್ಲಿ ಜಿಲ್ಲಾಧ್ಯಕ್ಷ ಆರ್.ಎಸ್.ಪಾಟೀಲ ಕೂಚಬಾಳ, ಮಂಡಲ ಅಧ್ಯಕ್ಷ ಈರಣ್ಣ ರಾವೂರ, ಎಸ್.ಕೆ ಬೆಳ್ಳುಬ್ಬಿ, ಶಾಸಕರುಗಳಾದ ಶರಣು ಸಲಗರ, ಸೋಮನಗೌಡ ಪಾಟೀಲ, ಎ.ಎಸ್.ಪಾಟೀಲ ನಡಹಳ್ಳಿ, ನಿಗಮ ಅದ್ಯಕ್ಷರಾದ ಅಶೋಕ ಅಲ್ಲಾಪೂರ, ವಿಜುಗೌಡ ಪಾಟೀಲ, ಮುಖಂಡರಾದ ದೊಡಪ್ಪಗೌಡ ಪಾಟೀಲ, ಶಿವಶರಣಗೌಡ ಬಿರಾದಾರ, ಎಂ.ಆರ್.ಬೋನಾಳ, ರವಿಕುಮಾರ ನಾಯ್ಕೋಡಿ, ಪರಶುರಾಮ ದೇಸುಣಗಿ, ಸೇರಿದಂತೆ ಅನೇಕರು ಇದ್ದರು,
ವರದಿ: ಪಂಡಿತ್ ಯಂಪೂರೆ, ಸಿಂದಗಿ