ವಿದ್ಯಾರ್ಥಿ ವೇತನ, ಅಂರ್ತಜಾತಿ ವಿವಾಹ ಪ್ರೋತ್ಸಾಹ ಧನ ಕಾರ್ಯಕ್ರಮಗಳ ಅಭಿಯಾನ

Must Read

ಸಿಂದಗಿ: ಮಾನ್ಯ ಆಯುಕ್ತರು ಸಮಾಜ ಇಲಾಖೆ ಬೆಂಗಳೂರು ರವರು ಹಾಗೂ ಉಪ ನಿರ್ದೇಶಕರು ಸಮಾಜ ಕಲ್ಯಾಣ ಇಲಾಖೆ ವಿಜಯಪುರ ರವರ ಆದೇಶದ ಮೇರೆಗೆ ಅ. 28 ರಿಂದ ನ. 17 ರ ವರೆಗೆ ವಿದ್ಯಾರ್ಥಿ ವೇತನ, ಅಂರ್ತಜಾತಿ ವಿವಾಹ ವಿವಿಧ ವಿವಾಹಗಳ ಮತ್ತು ಪ್ರೋತ್ಸಾಹ ಧನ ಈ ಕಾರ್ಯಕ್ರಮಗಳ ಅಭಿಯಾನವನ್ನು ಹಮ್ಮಿಕೊಂಡು ಸಮಾಜ ಕಲ್ಯಾಣ ಇಲಾಖೆಗೆ ಸಂಬಂಧಿಸಿದ ಕಾರ್ಯಕ್ರಮಗಳನ್ನು ಮುಗಿಸುವಂತೆ ತಾಲೂಕಾ ಅಧಿಕಾರಿ ಎಸ್.ಎನ್.ಭೂಸಗೊಂಡ ಅವರು ನಿರ್ದೇಶನ ನೀಡಿದರು.

ವಿಶೇಷವಾಗಿ ವಿದ್ಯಾರ್ಥಿ ವೇತನವನ್ನು ತಾಲೂಕಿನ ವ್ಯಾಪ್ತಿಯಲ್ಲಿ ಬರುವ ಕಾಲೇಜುಗಳಲ್ಲಿ ಓದುತ್ತಿರುವ ಎಲ್ಲಾ ವಿದ್ಯಾರ್ಥಿಗಳಿಗೆ ಶಿಷ್ಯ ವೇತನ ಮಂಜೂರು ಮಾಡಲು ಆನ್‍ಲೈನ್ ಹಾಕುವಂತೆ ಕಾಲೇಜು ವಸತಿ ನಿಲಯಗಳಲ್ಲಿ ವಾಸವಿರುವ ವಿದ್ಯಾರ್ಥಿಗಳಿಗೆ ಸಹಿತ ವಿದ್ಯಾರ್ಥಿ ವೇತನ ಅರ್ಜಿ ಹಾಕಲು ಕಾಲೇಜು ಪ್ರಾಂಶುಪಾಲರನ್ನು ಮತ್ತು ಕಚೇರಿಯಲ್ಲಿ ಹಾಗೂ ಕಾಲೇಜು ಹಾಸ್ಟೇಲಗಳಲ್ಲಿ ಸಹಾಯಕ ಕೇಂದ್ರ ತೆರಯಲಾಯಿತು. ಎಲ್ಲ ವಿದ್ಯಾರ್ಥಿಗಳಿಗೆ ಶಿಷ್ಯವೇತನ ಹಾಕುವ ಅರ್ಜಿಗಳಿಗೆ ಹಾಕಲು ಸಹಾಯವಾಗುವ ದೃಷ್ಟಿಯಿಂದ ಸಹಾಯಕ ಕೇಂದ್ರದ ಸದುಪಯೋಗ ಪಡಿಸಿಕೊಳ್ಳಲು ಹಾಗೂ ಇತರೆ ಕಾರ್ಯಕ್ರಮಗಳನ್ನು ನ.17 ರ ಒಳಗಾಗಿ ಮುಗಿಸಿ ಅಭಿಯಾನವನ್ನು ಕಚೇರಿ ಸಿಬ್ಬಂದಿಯವರಿಗೆ ಮತ್ತು ನಿಲಯದ ಮೇಲ್ವಿಚಾರಕರಿಗೆ ಯಶಸ್ವಿಗೊಳಿಸಲು ಸೂಚಿಸಿದರು.

ಈ ಸಂದರ್ಭದಲ್ಲಿ ದಲಿತ ವಿದ್ಯಾರ್ಥಿ ಪರಿಷತ್ತಿನ ಜಿಲ್ಲಾ ಸಂಚಾಲಕ ಹರ್ಷವರ್ಧನ ಪೂಜಾರಿ, ಹಾಗೂ ಇಲಾಖೆಗೆ ಸಂಬಂಧಪಟ್ಟಂತಹ ವಸತಿ ನಿಲಯಪಾಲಕರು ಮತ್ತು ತಾಲೂಕು ಅಧಿಕಾರಿಗಳು ಒಳಗೊಂಡಂತೆ ಅನೇಕರು ಉಪಸ್ಥಿತರಿದ್ದರು.

Latest News

ಶರಣರ ಪೂಜೆ ಮಾಡುವುದಕ್ಕಿಂತ ತತ್ವ ಅಳವಡಿಸಿಕೊಳ್ಳಬೇಕು

ಸಿಂದಗಿ; ೧೨ನೇ ಶತಮಾನದಲ್ಲಿ ಸಮ ಸಮಾಜದ ನಿರ್ಮಾಣ ಮಾಡಿದ ಶರಣರ ಜಯಂತಿಗಳ ಮೂಲಕ ಭಾವ ಚಿತ್ರಗಳನ್ನು ಪೂಜೆ ಮಾಡುವುದಕ್ಕಿಂತಲೂ ಶರಣರ ತತ್ವ ಸಿದಾಂತಗಳನ್ನು ನಾವೆಲ್ಲರು ಮೈಗೂಡಿಸಿಕೊಂಡು...

More Articles Like This

error: Content is protected !!
Join WhatsApp Group