Homeಸುದ್ದಿಗಳುರೈತರಿಂದ ಉತ್ಪನ್ನ ಖರೀದದಿಸಿ ಅವರ ಬೆಂಬಲಕ್ಕೆ ನಿಲ್ಲಬೇಕು

ರೈತರಿಂದ ಉತ್ಪನ್ನ ಖರೀದದಿಸಿ ಅವರ ಬೆಂಬಲಕ್ಕೆ ನಿಲ್ಲಬೇಕು

ಸಿಂದಗಿ: ಜಿಲ್ಲೆಯಲ್ಲಿ ಉಪ್ಪಿನಕಾಯಿ ಇಂಡಸ್ಟ್ರೀಸ್ ಗಳನ್ನು ಸ್ಥಾಪಿಸಿ ರಾಜ್ಯ ಸರಕಾರ ನ್ಯಾಯಬೆಲೆ ಅಂಗಡಿ ,ಅಂಗನವಾಡಿ ಕೇಂದ್ರ  ಹಾಗೂ ಬಿಸಿಯೂಟ ಮತ್ತು  ಹಾಸ್ಟೆಲುಗಳಿಗೂ ಸ್ವಸಹಾಯ ಸಂಘಗಳು ಹಾಗೂ  ಎಫ್‍ಪಿಓ ಗಳಿಂದ  ತಯಾರಿಸಿದ ಉತ್ಪನ್ನಗಳನ್ನು ನೇರವಾಗಿ ರೈತರಿಂದ ಖರೀದಿಸಿ ರೈತರ ಬೆಂಬಲಕ್ಕೆ ನಿಂತರೆ ಜಿಲ್ಲೆಯ ಬೆಳೆಗಾರರಿಗೆ ಪ್ರೋತ್ಸಾಹಿಸಿದಂತೆ ಆಗುತ್ತದೆ ಎಂದು ಲಿಂಬೆ ಅಭಿವೃದ್ಧಿ ಮಂಡಳಿ ಅಧ್ಯಕ್ಷ ಅಶೋಕ ಅಲ್ಲಾಪುರ ಹೇಳಿದರು.

ಕರ್ನಾಟಕ ರಾಜ್ಯ ಆಹಾರ ನಿಗಮದ ಅಧ್ಯಕ್ಷರು ಮುದ್ದೇಬಿಹಾಳದ ಶಾಸಕ ಎ ಎಸ್ ಪಾಟೀಲ್ ನಡಹಳ್ಳಿಯವರನ್ನು ಭೇಟಿಯಾಗಿ ಮನವಿ ಮಾಡಿಕೊಂಡ ಅವರು ಉಪ್ಪಿನಕಾಯಿ ಸೇವನೆಯಿಂದ ರೋಗ ನಿರೋಧಕ ಶಕ್ತಿಯೂ ವೃದ್ಧಿಯಾಗುತ್ತದೆ ಇದನ್ನು ಸದನದಲ್ಲಿ ಚರ್ಚಿಸಿ ಜಿಲ್ಲೆಯ ಎಲ್ಲ ಎಂಎಲ್‍ಎ ಮತ್ತು  ಸಂಸದರ ಗಮನಕ್ಕೆ ತರಲಾಗಿದೆ ಇದನ್ನು ರಾಜ್ಯ ಸರಕಾರಕ್ಕೆ ಗಮನಿಸಬೇಕೆಂದು  ವಿನಂತಿಸಿಕೊಂಡಿದ್ದಾರೆ.

ಈ ಸಂದರ್ಭದಲ್ಲಿ ಎಂ ಡಿ  ಸಂತೋಷ ಸಪ್ಪಂಡಿ, ಸುರೇಶ್ ಮಾಟಲದಿನ್ನಿ, ಸಿದ್ದು ಪೂಜಾರಿ, ಮಹದೇವ್ ಅಂಬ್ಲಿ ರವರು ಇದ್ದರು.

RELATED ARTICLES

Most Popular

error: Content is protected !!
Join WhatsApp Group