ಬೆಳಗಾವಿ: ಕೆಪಿಸಿಸಿ ಕಾರ್ಯಾಧ್ಯಕ್ಷ ಸತೀಶ ಜಾರಕಿಹೊಳಿ, ಅಶೊಕ ಪಟ್ಟಣ , ಶಾಸಕಿ ಲಕ್ಷ್ಮಿ ಹೆಬ್ಬಾಳಕರ್ ಅವರು ತನ್ನಗೆ ಕಾಂಗ್ರೆಸ್ ಸೇರ್ಪಡೆ ವಿಚಾರವಾಗಿ ಶಕ್ತಿ ತುಂಬಿದರು. ಇದಾದ ಬಳಿಕ ಡಿಕೆಶಿವಕುಮಾರ್ ಅವರು ಕೈ ಜೋಡಿಸುವಂತೆ ಆಹ್ವಾನ ನೀಡಿದರು. ಮುಂದಿನ ದಿನಗಳಲ್ಲಿ ಗೋಕಾಕ ಬದಲಾವಣೆ ಗಾಳಿ ಬಿಸಲಿದೆ. ಗೋಕಾಕ ನಲ್ಲಿ ಮತ್ತೆ ಕಾಂಗ್ರೆಸ್ ಅಧಿಕಾರಕ್ಕೆ ತರೋಣ ಎಂದು ಜೆಡಿಎಸ್ ಮುಖಂಡ ಅಶೋಕ ಪೂಜೇರಿ ಹೇಳಿದರು.
ಇಲ್ಲಿನ ಕಾಂಗ್ರೆಸ್ ಭವನದಲ್ಲಿ ವಿಪಕ್ಷ ಸಿದ್ದರಾಮಯ್ಯ , ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್ , ಕಾರ್ಯಧ್ಯಕ್ಷ , ಶಾಸಕ, ಸತೀಶ ಜಾರಕಿಹೊಳಿ , ಶಾಸಕಿ ಲಕ್ಷ್ಮಿ ಹೆಬ್ಬಾಳಕರ್ ಹಾಗೂ ಇನ್ನಿತರ ಕಾಂಗ್ರೆಸ್ ನಾಯಕರ ಸಮ್ಮುಖದಲ್ಲಿ ಮಂಗಳವಾರ ಅಧಿಕೃತವಾಗಿ ಕಾಂಗ್ರೆಸ್ ಪಕ್ಷಕ್ಕೆ ಸೇರ್ಪಡೆಗೊಂಡು ಅವರು ಮಾತನಾಡಿದರು.
ಹೋರಾಟದ ಮೂಲಕ ಜನರ ವಿಶ್ವಾಸ ಗಳಿಸಿರುವೆ. ಜನಬೆಂಬಲ ನನಗಿದೆ ಹಣಬೆಂಬವಿಲ್ಲ. ಪಕ್ಷ ಹಾಗೂ ಕಾರ್ಯಕರ್ತರು ತಾಯಿ ಇದ್ದ ಹಾಗೇ , ಕೈ ಮುಗಿದು ಕಾಂಗ್ರೆಸ್ ಭವನಕ್ಕೆ ಬಂದಿರುವೆ ಎಂದರು.ನಮ್ಮ ಕಾರ್ಯಕರ್ತರನ್ನು ವಿಶ್ವಾಸಕ್ಕೆ ತೆಗೆದುಕೊಂಡು , ಅವರ ಒಮ್ಮತದಿಂದ ಕಾಂಗ್ರೆಸ್ ಸೇರ್ಪಡೆಗೊಂಡಿರುವೆ.
ತಲೆ ಮೇಲೆ ನೀರು ಹಾಕಿಕೊಂಡು ಶಪಥಗೈಯಲು ಧೈರ್ಯ ಬೇಕು. ಅದು ನಿಷ್ಠಾವಂತ ಹೋರಾಟಗಾರರಿಂದ ಮಾತ್ರ ಸಾಧ್ಯ ಎಂದ ಅವರು,ಸತೀಶ ಜಾರಕಿಹೊಳಿ ನೇತೃತ್ವದಲ್ಲಿ ಗೋಕಾಕನಲ್ಲಿ ಬದಲಾವಣೆ ಗಾಳಿ ಬೀಸಲಿದೆ ಎಂದರು. ನನ್ನ ಮೇಲೆ ಆಪಾದನೆ ಕೇಳಿ ಬಂದಿವೆ ಅವುಗಳಿಗೆ ಕಿವಿಗೊಡಬೇಡಿ. ತತ್ವ ಸಿದ್ಧಾಂತಕ್ಕೆ ರಾಜಕೀಯ ಮಾಡುವೆ, ಹೊರತು ಹಣಕ್ಕಾಗಿ ಬಾಗುವ ಹೂವು ನಾನಲ್ಲ ಎಂದು ಹೇಳಿದರು.