ಚಂಪಾ ಹೆಸರಿನಲ್ಲಿ ವೈಚಾರಿಕ ಲೇಖಕರಿಗೆ ಪ್ರಶಸ್ತಿ ಸ್ಥಾಪನೆಗೆ ಆಗ್ರಹ

Must Read

ಮೈಸೂರು – ಹಿರಿಯ ಸಾಹಿತಿ ಚಂಪಾ ಅವರ ನಿಧನಕ್ಕೆ ಸಾಹಿತಿ ಹಾಗೂ ಮೈಸೂರು ಜಿಲ್ಲಾ ಕನ್ನಡ ಜಾಗೃತಿ ಸಮಿತಿ ಸದಸ್ಯರಾದ ಡಾ.ಭೇರ್ಯ ರಾಮಕುಮಾರ್ ತೀವ್ರ ಶೋಕ ವ್ಯಕ್ತಪಡಿಸಿದ್ದಾರೆ.

‌ಚಂಪಾ ಅವರು ತಮ್ಮ ವಿಪುಲ ಸಾಹಿತ್ಯ ಕೃತಿಗಳ ಮೂಲಕ ಹಾಗೂ ತಮ್ಮ ಸಂಕ್ರಮಣ ವೈಚಾರಿಕ ಪತ್ರಿಕೆಯ ಮೂಲಕ ಯುವ ಲೇಖಕ-ಲೇಖಕಿಯರ ಬರವಣಿಗೆ ಮೇಲೆ ಹಾಗೂ ಬದುಕಿನ ಮೇಲೆ ಅಪಾರ ಪ್ರಭಾವ ಬೀರಿದ್ದಾರೆ. ಅವರ ಬದುಕು ಹಾಗೂ ಬರವಣಿಗೆಯೇ ವೈಚಾರಿಕ ಚಿಂತನೆಗಳಿಂದ ಕೂಡಿದುದು. ಜೊತೆಗೆ ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷರಾಗಿ ಸಹ ಕನ್ನಡ ನಾಡು-ನುಡಿಯ ಅಭ್ಯುದಯಕ್ಕೆ ಅಪಾರ ಶ್ರಮಿಸಿದ್ದಾರೆ. ಅವರ ನೆನಪಿನಲ್ಲಿ ರಾಜ್ಯಮಟ್ಟದ ಪ್ರಶಸ್ತಿ ಯನ್ನು ರಾಜ್ಯಸರ್ಕಾರ ಆರಂಭಿಸಬೇಕು.ಪ್ರತಿ ವರ್ಷವೂ ವೈಚಾರಿಕ ಲೇಖಕರೊಬ್ಬರಿಗೆ ಆ ಪ್ರಶಸ್ತಿ ನೀಡಬೇಕು ಎಂದವರು ಒತ್ತಾಯಿಸಿದ್ದಾರೆ.

Latest News

ಪ್ರಜಾಪ್ರಭುತ್ವದ ಮೌಲ್ಯಗಳಿಗೆ ಸಂವಿಧಾನವೇ ಆಧಾರ – ಈರಣ್ಣ ಕಡಾಡಿ

ಮೂಡಲಗಿ: ಬಲಿಷ್ಠ ಪ್ರಜಾಪ್ರಭುತ್ವ ಮೌಲ್ಯಗಳಿಗೆ ನಮ್ಮ ದೇಶದ ಶ್ರೇಷ್ಟ ಸಂವಿಧಾನವೇ ಆಧಾರ ಸ್ತಂಭವಾಗಿದೆ. ಪವಿತ್ರ ಸಂವಿಧಾನದ ಮೌಲ್ಯಗಳನ್ನು ಸದಾ ಪಾಲಿಸುವ ಜೊತೆಗೆ ದೇಶದ ಏಕತೆ, ವೈವಿಧ್ಯತೆ...

More Articles Like This

error: Content is protected !!
Join WhatsApp Group