ಓದು ಕರ್ನಾಟಕ ಕಾರ್ಯಕ್ರಮ

Must Read

ಮುನವಳ್ಳಿ: ಪಟ್ಟಣದ ಸರಕಾರಿ ಹಿರಿಯ ಪ್ರಾಥಮಿಕ ಹೆಣ್ಣು ಮಕ್ಕಳ ಶಾಲೆಯಲ್ಲಿ ಮುನವಳ್ಳಿ ಸಿಂದೋಗಿ ಅರ್ಟಗಲ್ ಸಮೂಹ ಸಂಪನ್ಮೂಲ ಕೇಂದ್ರ ಗಳ ವ್ಯಾಪ್ತಿಯ 4 ಮತ್ತು 5 ತರಗತಿ ನಿರ್ವಹಿಸುವ ಶಿಕ್ಷಕ ಶಿಕ್ಷಕಿಯರಿಗೆ ಕೋವಿಡ್ ಮಾರ್ಗಸೂಚಿ ಅನ್ವಯ ಶಿಕ್ಷಣ ಇಲಾಖೆ ಮತ್ತು ಪ್ರಥಮ ಸಂಸ್ಥೆಯ ಸಹಯೋಗದಲ್ಲಿ ಮಕ್ಕಳಿಗೆ ಸ್ಪಷ್ಟ ಓದು, ಶುದ್ದ ಬರಹ , ಸರಳ ಲೆಕ್ಕಾಚಾರದಲ್ಲಿ ಸಾರ್ವತ್ರಿಕರಣ ಸಾಧಿಸುವ ಗುರಿಯೊಂದಿಗೆ ” ಓದು ಕರ್ನಾಟಕ” ಕಾರ್ಯಕ್ರಮದ ಸಾಮಗ್ರಿಗಳ ಪರಿಚಯಾತ್ಮಕ ಒಂದು ದಿನದ ಕಾರ್ಯಾಗಾರವನ್ನು ಹಮ್ಮಿಕೊಳ್ಳಲಾಗಿತ್ತು.

ಸಿಂದೋಗಿ ಸಂಪನ್ಮೂಲ ಕೇಂದ್ರದ ಎಸ್ ವಾಯ್ ನಿಪ್ಪಾಣಿ ಸ್ವಾಗತಿಸಿದರು . ಸಮನ್ವಯ ಶಿಕ್ಷಣ ದ ಬಿ. ಐ. ಇ. ಆರ್. ಟಿ ವಾಯ್ ಬಿ ಕಡಕೋಳ ಕಾರ್ಯಕ್ರಮದ ಕುರಿತು ಪ್ರಾಸ್ತಾವಿಕವಾಗಿ ಮಾತನಾಡಿ, ವಿಶೇಷ ಮಕ್ಮಳ ಕುರಿತು ಮಾಹಿತಿ ನೀಡಿದರು.

ಮುನವಳ್ಳಿ ಸಂಪನ್ಮೂಲ ಕೇಂದ್ರ ದ ಸಂಪನ್ಮೂಲ ವ್ಯಕ್ತಿ ಎಫ್ ಜಿ ನವಲಗುಂದ ಕನ್ನಡ ಮತ್ತು ಗಣಿತ ವಿಷಯಗಳನ್ನು ಓದು ಕರ್ನಾಟಕ ಕಾರ್ಯಕ್ರಮದಲ್ಲಿ ಹೇಗೆ ಚಟುವಟಿಕೆಗಳನ್ನು ಮತ್ತು ಆಟಗಳನ್ನು ಬಳಸಿಕೊಂಡು ಬೋಧಿಸಬೇಕೆಂಬುದನ್ನು ವಿವರಿಸಿದರು ನಂತರ ಓದು ಕರ್ನಾಟಕ ಕಿಟ್ ನ ಸಾಮಗ್ರಿಗಳನ್ನು ಪರಿಚಯಿಸಿ ಬಳಸಿಕೊಳ್ಳುವ ವಿಧಾನಗಳನ್ನು ತಿಳಿಸಿದರು.

Latest News

ಕವನ : ಅನುಬಂಧ

ಅನುಬಂಧಕಾಣದ ದಾರಿಯಲ್ಲಿ ಬೆಸೆದ ನಂಟು, ಹೆಸರಿಲ್ಲದಿದ್ದರೂ ಹೃದಯಕ್ಕೆ ಪರಿಚಿತವಾದ ಬಂಧ… ಕಾಲದ ಹೊಳೆ ಹರಿದರೂ ಕಳೆಯದ ಗುರುತು, ಗಂಟು ಅದು ಅನುಬಂಧ. ಮೌನದಲ್ಲೂ ಮಾತಾಡುವ ಸಂಬಂಧ, ಬಂಧ.. ಕಣ್ಣಂಚಿನ ನೀರನ್ನೂ ಓದುತ್ತದೆ ಒರೆಸುತ್ತದೆ. ಹೃದಯ ಮುರಿದು ನೊಂದ ಕ್ಷಣದಲ್ಲಿ ಅದೃಶ್ಯವಾಗಿ ಕೈ ಹಿಡಿದುಕೊಳ್ಳುತ್ತದೆ. ಮಣ್ಣಿನ ವಾಸನೆಯಂತೆ ಸಹಜ, ಬೆಳಗಿನ ಬೆಳಕಿನಂತೆ ಮೃದುವು. ನಗುವಿನಲ್ಲೂ,...

More Articles Like This

error: Content is protected !!
Join WhatsApp Group