Homeಸುದ್ದಿಗಳುಶಿವಯೋಗಿ ಶ್ರೀ ಸಿದ್ದರಾಮೇಶ್ವರ ಜಯಂತಿ ಆಚರಣೆ

ಶಿವಯೋಗಿ ಶ್ರೀ ಸಿದ್ದರಾಮೇಶ್ವರ ಜಯಂತಿ ಆಚರಣೆ

ಮೂಡಲಗಿ – ತಹಶೀಲ್ದಾರ ಕಚೇರಿಯಲ್ಲಿ ಅತ್ಯಂತ ಸರಳ ರೀತಿಯಲ್ಲಿ ಶಿವಯೋಗಿ ಶ್ರೀ ಸಿದ್ಧರಾಮೇಶ್ವರ ಜಯಂತಿ ಆಚರಿಸಲಾಯಿತು.

ತಹಶೀಲ್ದಾರ ಶ್ರೀಯುತ ಡಿ. ಜಿ. ಮಹಾತ ಅವರು ಶ್ರೀ ಸಿದ್ಧರಾಮೇಶ್ವರ ಅವರ ಭಾವಚಿತ್ರಕ್ಕೆ ಪುಷ್ಪ ಅರ್ಪಿಸಿ, ಪೂಜೆಯನ್ನು ಮಾಡಿ, ಕಾರ್ಯಕ್ರಮಕ್ಕೆ ಆಗಮಿಸಿದ ಎಲ್ಲರನ್ನು ಸ್ವಾಗತಿಸಿದರು. ನಂತರ ಶ್ರೀ ಸಿದ್ಧರಾಮೇಶ್ವರ ಅವರ ಪವಾಡಗಳ ಕುರಿತು,ಅವರ ಇತಿಹಾಸ, ನಡೆದು ಬಂದ ದಾರಿಯ ಬಗ್ಗೆ ಮಾತನಾಡಿದರು.

ಈ ಜಯಂತಿಯ ಸಂದರ್ಭದಲ್ಲಿ ಶಿವಾನಂದ ಬಬಲಿ ತಹಶೀಲ್ದಾರ್ ಗ್ರೇಡ್ -2, ಕೃಷ್ಣ ಗಾಡಿವಡ್ಡರ, ಅಧ್ಯಕ್ಷರು ಉತ್ತರ ಕರ್ನಾಟಕ ಭೋವಿ ವಡ್ಡರ ಸಮಾಜ, ಸುಭಾಷ ಧೋತ್ರೆ ತಾಲೂಕಾಧ್ಯಕ್ಷರು, ದಶರಥ ಗಾಡಿವಡ್ಡರ ಹಾಗೂ ಇನ್ನಿತರ ಸಮಾಜದ ಮುಖಂಡರುಗಳು ಮತ್ತು ತಹಶೀಲ್ದಾರ ಕಚೇರಿ ಸಿಬ್ಬಂದಿಗಳು ಭಾಗವಹಿಸಿದ್ದರು. ಪರಸಪ್ಪ ನಾಯ್ಕ ತಾಲೂಕಾ ಶಿರಸ್ತೇದಾರ ಇವರು ಕಾರ್ಯಕ್ರಮವನ್ನು ನಿರೂಪಿಸಿದರು

RELATED ARTICLES

Most Popular

error: Content is protected !!
Join WhatsApp Group