ಸಿಂದಗಿ: ವಿಜಯಪುರದಲ್ಲಿ ಸಾಂಸ್ಕೃತಿಕ ಸಂಗಮ ಹಾಗೂ ಗುರುಮಾಚಯ್ಯ ಗ್ರಾಮೀಣಾಭಿವೃದ್ಧಿ ಸಂಸ್ಥೆ, ಕರ್ನಾಟಕ ರಾಜ್ಯ ಹಿಂದುಳಿದ ಸಣ್ಣ ಹಾಗೂ ಅತೀ ಸಣ್ಣ ಸಮುದಾಯಗಳ ಒಕ್ಕೂಟ ಹಾಗೂ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಇವುಗಳ ಸಹಯೋಗದಲ್ಲಿ ಇತ್ತೀಚೆಗೆ ಹಮ್ಮಿಕೊಂಡ ಗುರುಬಸವ ಸಾಂಸ್ಕೃತಿಕ ಉತ್ಸವದಲ್ಲಿ ತಾಲೂಕಿನ ಗೋಲಗೇರಿಯ ಕರ್ನಾಟಕ ದಲಿತ ಸಂಘರ್ಷ ಸಮಿತಿ ಭೀಮ ಘರ್ಜನೆ ಸಿಂದಗಿ ತಾಲೂಕ ಸಂಚಾಲಕ ಶ್ರೀಶೈಲ ಬಸಪ್ಪ ಜಾಲವಾದಿ ಅವರಿಗೆ ಶ್ರೀ ಗುರು ಬಸವ ಮಾಚಿದೇವ ಕಾಯಕಯೋಗಿ ಪ್ರಶಸ್ತಿ 2021 ರಾಜ್ಯ ಪ್ರಶಸ್ತಿ ಸಮಾಜ ಸೇವಾ ರತ್ನ ನೀಡಿ ಗೌರವಿಸಲಾಗಿದೆ.
ಈ ಸಂದರ್ಭದಲ್ಲಿ ಜಿಲ್ಲಾಧ್ಯಕ್ಷ ಸಾಯಬಣ್ಣಾ ಮಡಿವಾಳರ ಸೇರಿದಂತೆ ಹಲವರಿದ್ದರು.