ಬೆಳಗಾವಿ: ಗಣರಾಜ್ಯೋತ್ಸವ ಪ್ರಯುಕ್ತ ಜಿಲ್ಲಾಡಳಿತದಿಂದ ನೀಡುವ ಸರ್ವೋತ್ತಮ ಸೇವಾ ಪ್ರಶಸ್ತಿಗೆ ಭಾಜನರಾದ ನಗರಾಭಿವೃದ್ಧಿ ಪ್ರಾಧಿಕಾರ ಇಲಾಖೆಯ ಸಹಾಯಕ ಕಾರ್ಯಕಾರಿ ಅಭಿಯಂತರ ಮಹಾಂತೇಶ ಹಿರೇಮಠ ಅವರನ್ನು ನಾಗರಿಕ ವೇದಿಕೆ ವತಿಯಿಂದ ಸನ್ಮಾನಿಸಲಾಯಿತು.
ಈ ವೇಳೆ ಭೂ ನ್ಯಾಯ ಮಂಡಳಿ ಸದಸ್ಯ ಶಶಿಭೂಷಣ ಪಾಟೀಲ, ವರ್ತಕ ವಿಜಯ ಹುದಲಿಮಠ, ಸಖೀ ಘಟಕದ ಸದಸ್ಶೆ ವಿಜಯಾ ಹಿರೇಮಠ, ರೇಶ್ಮಾ ಕಿತ್ತೂರು, ಡಾ. ಚನ್ನಬಸಯ್ಶಾ ಕಠಾಪುರಿಮಠ ಉಪಸ್ಥಿತರಿದ್ದರು.